Last Updated:
ಚಿಕ್ಕಮಗಳೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಯೋಜನಾ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ, ಪದವೀಧರರಿಗೆ ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ.
ಚಿಕ್ಕಮಗಳೂರು: ನೀವು ಪದವೀಧರರೇ? ಸಮಾಜಶಾಸ್ತ್ರ ಅಥವಾ ಸಮಾಜ ಸೇವೆಯಲ್ಲಿ ಆಸಕ್ತಿ ಉಳ್ಳವರೇ? ಹಾಗಿದ್ದರೆ ನೀವು ಈ ವಿಷಯವನ್ನು (Subject) ಓದಲೇಬೇಕು, ಯಾಕೆಂದರೆ ಇಲ್ಲಿ ನಿಮಗಿದೆ ಉದ್ಯೋಗಾವಕಾಶ. ಹೌದು, ನೀವು ಪದವೀಧರರಾಗಿದ್ದರೆ (Graduation) ಹಾಗೆಯೇ ನಿರುದ್ಯೋಗಿಗಳಾಗಿದ್ದರೆ ನಿಮಗೆ ಸರ್ಕಾರದ ಅಧಿಕಾರಿ ವರ್ಗದ ಕೆಲಸವೇ (Work) ಲಭ್ಯವಿದೆ.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರ ಹುದ್ದೆಯನ್ನು (ಹುದ್ದೆ-೦1) ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಗೌರವಧನ ಆಧಾರದ ಹುದ್ದೆಯಾಗಿದ್ದು ಅಭ್ಯರ್ಥಿಗಳ ವಯಸ್ಸು 40 ವರ್ಷ ಮೀರಿರಬಾರದು. (ಎಸ್.ಎಸ್.ಎಲ್.ಸಿ ಧೃಢೀಕೃತ ಅಂಕಪಟ್ಟಿ ಲಗತ್ತಿಸಬೇಕು) ಅಭ್ಯರ್ಥಿಗಳು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂ.ಎಸ್.ಡಬ್ಲ್ಯು, ಅಭಿವೃದ್ಧಿ ಅಧ್ಯಯನ, ಎನ್.ಜಿ.ಒ ನಿರ್ವಹಣಾ ಶಾಸ್ತ್ರ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಕನ್ನಡ ಮತ್ತು ಇಂಗ್ಲೀಷ್ ಸಂವಹನ ಕೌಶಲ್ಯ ಹಾಗೂ ಉತ್ತಮ ಬರವಣಿಗೆ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ (ಎಂ.ಎಸ್.ಆಫೀಸ್, ಇಂಟರ್ನೆಟ್ ಆಪರೇಶನ್, ಡಿ.ಟಿ.ಪಿ.)ವನ್ನು ಹೊಂದಿರುವುದು ಅಗತ್ಯ. ಕಚೇರಿಯ ಲೆಕ್ಕಪತ್ರಗಳ ವ್ಯವಹಾರಗಳನ್ನು ನಿರ್ವಹಿಸುವ ವ್ಯವಹಾರ ಕೌಶಲ್ಯ ಹೊಂದಿರಬೇಕು. ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಾಗಿರಬಾರದು.
ಪತ್ರ ಮುಖೇನ ಈ ವಿಳಾಸಕ್ಕೆ ನಿಮ್ಮ ಅರ್ಜಿ ಕಳಿಸಿ
ಆಸಕ್ತ ಅಭ್ಯರ್ಥಿಗಳು ದೃಢೀಕೃತ ಅಂಕಪಟ್ಟಿಗಳ ಪ್ರತಿಗಳು ಹಾಗೂ ದಾಖಲೆಗಳೊಡನೆ ತಮ್ಮ ಸ್ವ-ವಿವರವುಳ್ಳ ರೆಸ್ಯೂಮ್ನೊಂದಿಗೆ ತಮ್ಮ ಪೂರ್ಣ ಸ್ವ-ವಿಳಾಸದ ರಿಜಿಸ್ಟರ್ಡ್ ಅಂಚೆ ಲಕೋಟೆಯೊಡನೆ ಅರ್ಜಿಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಭವನ, ಆರ್.ಟಿ.ಒ ಕಚೇರಿ ಹತ್ತಿರ, ಕೆ.ಎಂ.ರಸ್ತೆ, ಜ್ಯೋತಿನಗರ ಅಂಚೆ, ಚಿಕ್ಕಮಗಳೂರು 577102 ಈ ವಿಳಾಸಕ್ಕೆ ಡಿಸೆಂಬರ್ 30 ರ ಸಂಜೆ 5 ಗಂಟೆ ಒಳಗೆ ಸಲ್ಲಿಸಲು ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.
Chikmagalur,Karnataka
December 17, 2025 1:10 PM IST

