Last Updated:
ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ
ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project) ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್ ಅನ್ನು ಚಿಕ್ಕಮಗಳೂರು (Chikkamagaluru) ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಮ್ಮ ಕಚೇರಿಯಲ್ಲಿ (Office) ನಡೆದ ಸರಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದರು.
ಸ್ಪರ್ಶ ಟ್ರಸ್ಟ್ನ ಪದಾಧಿಕಾರಿಗಳು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಧೇಯ ಬಳೆಗೋಡ, ಮಾಜಿ ವಿಟಿಯು ಸದಸ್ಯರು ಹಾಗೂ ನಗರದ ಹೋಟೆಲ್ ಉದ್ಯಮಿ ಜಿತೇಂದ್ರ ಕ್ರಿಸ್ಟಲಿನ್ ಅವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳು ಈ ಯೋಜನೆಗೆ ವೈಯಕ್ತಿಕವಾಗಿ ಸಹಾಯ ಹಾಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಮೂರು ವರ್ಷಗಳ ಕಾಲದ ಈ ತರಬೇತಿ ಕಾರ್ಯಕ್ರಮದಲ್ಲಿ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ 24 ತಾಸು ಅಧ್ಯಯನದ ಅವಕಾಶ, ಉಚಿತ ವಸತಿ, ಊಟ ಹಾಗೂ ಉದ್ಯೋಗ ದೊರೆಯುವವರೆಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಇಡೀ ಕಾರ್ಯಕ್ರಮ ಶೂನ್ಯ ಶುಲ್ಕದಲ್ಲಿ ನಡೆಯಲಿದ್ದು, ಇದರಲ್ಲಿ “ಇಂಡಿಯಾ ಫಾರ್ ಐಎಎಸ್” ನ ಪುಸ್ತಕಗಳು, ಶಿಕ್ಷಕರು, ಆನ್ಲೈನ್ ಟೀಚಿಂಗ್ ಮತ್ತು ನಿರಂತರ ಕೋಚಿಂಗ್ ನಡೆಯಲಿದೆ.
ಯೋಜನೆಗೆ ಸೇರಲು ಏನು ಮಾಡಬೇಕು?
Chikmagalur,Chikmagalur,Karnataka

