Last Updated:
ಚಿಕ್ಕಮಗಳೂರು ಸೆಂಟ್ ಮೇರಿಸ್ ಶಾಲೆಯ ಬೃಂದಾ ಎಸ್ಎಸ್ಎಲ್ಸಿ ಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯ ಪ್ರಥಮ, ಟೈಲರ್ ಪೋಷಕರ ಮಗಳು ಪರಿಶ್ರಮದಿಂದ ಬಡತನ ಮೀರಿ ಮೆರೆದ ಸಾಧನೆ
ಚಿಕ್ಕಮಗಳೂರು : ಕಾಫಿನಾಡಿನ ಕೋಟೆ ಬಡಾವಣೆಯ ಸಣ್ಣ ಟೈಲರಿಂಗ್ (Tailoring) ಅಂಗಡಿಯ ಮಗಳು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾಳೆ! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ (Student) ಬೃಂದಾ ಅವರು 625ಕ್ಕೆ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪ್ರತಿ ವಿಷಯದಲ್ಲೂ ಶೇಕಡಾ 100 ಅಂಕ ಗಳಿಸಿರುವ ಈ ಸಾಧನೆ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿದೆ.
ಬೃಂದಾ ಅವರ ತಂದೆ ಮಂಜುನಾಥ್ ಥಾಪ್ಸೆ ಮತ್ತು ತಾಯಿ ಹರ್ಷಿಣಿ ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಸಣ್ಣ ಟೈಲರಿಂಗ್ ಉದ್ಯಮ ನಡೆಸುತ್ತಿದ್ದಾರೆ. ತಿಂಗಳಿಗೆ ಕೇವಲ 10 ರಿಂದ 20 ಸಾವಿರ ರೂಪಾಯಿ ಆದಾಯ ಇರುವ ಈ ಮಧ್ಯಮ ವರ್ಗದ ಕುಟುಂಬದ ಮಗಳು ಆರ್ಥಿಕ ಮಿತಿಯ ನಡುವೆಯೂ ಅದ್ಭುತ ಸಾಧನೆ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದಾಳೆ.
ಬೃಂದಾ
ಶಾಲೆಯಲ್ಲಿ ಹಬ್ಬದ ವಾತಾವರಣ
Chikmagalur,Karnataka

