Advertisement
Advertisement

SSLC: ಈ ಪರೀಕ್ಷೆ ಪಾಸಾದ್ರೆ ಸಿಗಲಿದೆ 20 ಸಾವಿರ; ಅಂತರಾಷ್ಟ್ರೀಯ ದೈತ್ಯ ಸಂಸ್ಥೆಯಿಂದ ಹೈ ಕ್ಲಾಸ್‌ ತರಬೇತಿ ಪಡೆಯೋಕೆ ನೀವು ರೆಡಿನಾ?

Your paragraph text 2026 06 07t192332.543 2026 06 e508b29c2de461bc03348e12dea85b58 1200x675.jpg


Last Updated:

ಮೈಸೂರಿನಲ್ಲಿ Swami Vivekananda Youth Movement ಮತ್ತು Qualcomm ನಡೆಸುವ ಅನ್ವೇಷಣೆ 2026-27 ಸ್ಪರ್ಧೆ, SSLC ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಿಬಿರ, ಉಚಿತ ಆನ್‌ಲೈನ್ ತರಗತಿಗಳ ಅವಕಾಶ

SSLC ಮಕ್ಕಳು
SSLC ಮಕ್ಕಳು

ಮೈಸೂರು: ನೀವು ಪ್ರಸ್ತುತ 10ನೇ ತರಗತಿಯಲ್ಲಿ (SSLC) ಓದುತ್ತಿದ್ದೀರಾ? ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ವೇದಿಕೆ ಮತ್ತು ಉನ್ನತ ಶಿಕ್ಷಣಕ್ಕೆ (Education) ಆರ್ಥಿಕ ನೆರವು ಬೇಕಾಗಿದೆಯೇ? ಹಾಗಾದರೆ ನಿಮಗಾಗಿಯೇ ಇಲ್ಲಿದೆ ಒಂದು ಸೂಪರ್ ಸುದ್ದಿ!

ʼಅನ್ವೇಷಣೆʼ ಇದು ಪ್ರತಿಭಾವಂತರ ಹುಡುಕಾಟ

ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ‘ಅನ್ವೇಷಣೆ 2026–27’ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಖ್ಯಾತ ಸಾಮಾಜಿಕ ಸಂಸ್ಥೆಯಾದ Swami Vivekananda Youth Movement (SVYM) ಮತ್ತು ಜಾಗತಿಕ ತಂತ್ರಜ್ಞಾನ ದೈತ್ಯ Qualcomm ಸಂಸ್ಥೆಗಳು ಜಂಟಿಯಾಗಿ ಈ ಮೆಗಾ ಸ್ಪರ್ಧೆಯನ್ನು ನಡೆಸುತ್ತಿವೆ. ನಿಮ್ಮಲ್ಲಿರುವ ಗಣಿತ, ವಿಜ್ಞಾನ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಇದೊಂದು ಅದ್ಭುತ ವೇದಿಕೆಯಾಗಿದೆ.

ಸ್ಪರ್ಧೆಯ ಹೈಲೈಟ್ಸ್; ಯಾರಿಗೆಲ್ಲ ಲಭ್ಯ?

ಅರ್ಹತೆ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ (2026-27) 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಮಾಧ್ಯಮ: ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಮುಕ್ತ ಅವಕಾಶವಿದೆ.

ಭರ್ಜರಿ ಪ್ರಶಸ್ತಿ ಮೊತ್ತ: ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸೂಪರ್ ಸ್ಟೂಡೆಂಟ್ಸ್‌ಗೆ ಉನ್ನತ ಶಿಕ್ಷಣಕ್ಕಾಗಿ ₹20,000 ಮೌಲ್ಯದ ಪ್ರತಿಭಾ ಪುರಸ್ಕಾರ ಸಿಗಲಿದೆ!
ಮೂರು ಹಂತಗಳ ರೋಚಕ ಸ್ಪರ್ಧೆ!

ಈ ಸ್ಪರ್ಧೆಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದ್ದು, ನಿಮ್ಮ ಜ್ಞಾನಕ್ಕೆ ಕನ್ನಡಿ ಹಿಡಿಯಲಿದೆ:

ಮೊದಲ ಹಂತ (ಜಿಲ್ಲಾ ಮಟ್ಟ): 8ರಿಂದ 10ನೇ ತರಗತಿಯ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಿಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳ (MCQ) ಪರೀಕ್ಷೆ ಇರಲಿದೆ.

ಎರಡನೇ ಹಂತ (ಜಿಲ್ಲಾ ಮಟ್ಟ): ಅದೇ ದಿನ, ಅದೇ ಕೇಂದ್ರದಲ್ಲಿ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವ ಲಿಖಿತ ಪರೀಕ್ಷೆ ನಡೆಯಲಿದೆ.

ಮೂರನೇ ಹಂತ (ರಾಜ್ಯ ಮಟ್ಟ): ಮೊದಲ ಎರಡು ಹಂತಗಳಲ್ಲಿ ಸಾಧನೆ ಮಾಡಿದ ಟಾಪ್ ವಿದ್ಯಾರ್ಥಿಗಳಿಗೆ 4 ದಿನಗಳ ಭರ್ಜರಿ ವಸತಿ ಶಿಬಿರ ಇರಲಿದೆ! ಇಲ್ಲಿ ದೇಶದ ಪ್ರಸಿದ್ಧ ವಿಜ್ಞಾನಿಗಳೊಂದಿಗೆ ಸಂವಾದ, ಪ್ರಯೋಗಗಳು ಮತ್ತು ಕ್ಷೇತ್ರ ಭೇಟಿಯ ಅವಕಾಶ ಸಿಗಲಿದೆ.

ಉಚಿತ ಆನ್‌ಲೈನ್ ತರಗತಿ ಹಾಗೂ ಪೋಷಕರಿಗೂ ಆಫರ್!

ಇದನ್ನೂ ಓದಿ: Chamundeshwari Temple: ಆಷಾಢಕ್ಕೂ ಮುಂಚೆಯೇ ಚಾಮುಂಡಿ ಭಕ್ತರಿಗೆ ಸಿಹಿಸುದ್ದಿ; ಅತೀ ಕಮ್ಮಿ ಬೆಲೆಯ ಟಿಕೆಟ್‌ ವ್ಯವಸ್ಥೆ ಮುಂದುವರಿಕೆ, ಏನೆಲ್ಲಾ ಸೌಲಭ್ಯ ಇದೆ?

ವಿಶೇಷ ಆಕರ್ಷಣೆ: ರಾಜ್ಯ ಮಟ್ಟದ ವಸತಿ ಶಿಬಿರಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಯ ಜೊತೆಗೆ ಒಬ್ಬ ಪೋಷಕರಿಗೂ ಭಾಗವಹಿಸಲು ಅವಕಾಶವಿದೆ! ಪೋಷಕರಿಗೂ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸಂಸ್ಥೆಯೇ ನೋಡಿಕೊಳ್ಳಲಿದೆ. ಅಷ್ಟೇ ಅಲ್ಲ, ಪ್ರಯಾಣದ ನಿಖರ ಟಿಕೆಟ್ ಸಲ್ಲಿಸಿದರೆ ರೈಲ್ವೆ ಸ್ಲೀಪರ್ ಕೋಚ್ ದರದ ಮಟ್ಟಿಗೆ ಹಣವನ್ನು ಮರುಪಾವತಿ (Refund) ಮಾಡಲಾಗುತ್ತದೆ! ವಿದ್ಯಾರ್ಥಿಗಳು ಪರೀಕ್ಷೆಗೆ ಸುಲಭವಾಗಿ ಸಿದ್ಧರಾಗಲು ಜೂನ್ ತಿಂಗಳಿನಿಂದಲೇ ಉಚಿತ ಆನ್‌ಲೈನ್ ತರಗತಿಗಳು ಆರಂಭವಾಗುತ್ತಿವೆ. ಇದರ ಸಂಪೂರ್ಣ ವೇಳಾಪಟ್ಟಿಯನ್ನು ವಿಶೇಷ ವಾಟ್ಸಾಪ್ ಚಾನೆಲ್ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ



Source link

Leave a Reply

Your email address will not be published. Required fields are marked *

TOP