Last Updated:
ಚಿಕ್ಕಮಗಳೂರು ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಶೃಂಗೇರಿ BTM, ಕಡೂರು ATM ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ, ಮೇ 30 ಸಂಜೆ 5.30 ಅರ್ಜಿ ಕೊನೆಯ ದಿನ
ಚಿಕ್ಕಮಗಳೂರು: ಕೆಲಸ ಹುಡುಕಿ ಸುಸ್ತಾಗಿದ್ದೀರಾ? ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಯುವಕ-ಯುವತಿಯರಿಗೆ ಕೃಷಿ ಇಲಾಖೆಯಿಂದ ಬಂಪರ್ ಆಫರ್! ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ಇದೀಗ ಭರ್ಜರಿ ನೇಮಕಾತಿ ಶುರುವಾಗಿದ್ದು, ನಿಮ್ಮೂರಿನಲ್ಲೇ ಕೆಲಸ ಗಿಟ್ಟಿಸಿಕೊಳ್ಳಲು ಇದೊಂದು ಸುವರ್ಣಾವಕಾಶ!
ಶೃಂಗೇರಿ ತಾಲ್ಲೂಕಿನಲ್ಲಿ ‘ತಾಂತ್ರಿಕ ವ್ಯವಸ್ಥಾಪಕರು (BTM)’ ಹಾಗೂ ಕಡೂರು ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯಲ್ಲಿ ‘ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM)’ ಹುದ್ದೆಗಳಿಗೆ ದಿಢೀರ್ ಅರ್ಜಿ ಆಹ್ವಾನಿಸಲಾಗಿದೆ! ಅಷ್ಟೇ ಅಲ್ಲ, ಭವಿಷ್ಯದಲ್ಲಿ ಖಾಲಿಯಾಗುವ ಹುದ್ದೆಗಳಿಗೂ ಈಗಲೇ ರಿಸರ್ವೇಷನ್ ಶುರುವಾಗಿದೆ! ಎಲ್ಲಕ್ಕಿಂತ ಖುಷಿಯ ವಿಚಾರ ಎಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಭರ್ಜರಿ ಆದ್ಯತೆ ಸಿಗಲಿದೆ!
ಕೃಷಿ ಅಥವಾ ತೋಟಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಅಥವಾ ಪದವಿ ( M.Sc Agri, M.Sc Horti ) ಮುಗಿಸಿದ್ದೀರಾ? ಜೊತೆಗೆ ಕಂಪ್ಯೂಟರ್ ಕೂಡ ಆಪರೇಟ್ ಮಾಡಲು ಗೊತ್ತಾ? ಹಾಗಾದರೆ ಈ ಕೆಲಸ ನಿಮಗೇನೇ!
BTM ಹುದ್ದೆಗೆ: ಬಿಟಿಎಂ ಹುದ್ದೆಗೆ ಕೃಷಿ ಕ್ಷೇತ್ರದಲ್ಲಿ ಕೇವಲ 2 ವರ್ಷ ಎಕ್ಸ್ಪೀರಿಯನ್ಸ್ ಇದ್ದರೆ ಸಾಕು.
ಹೆಚ್ಚಿನ ಮಾಹಿತಿ ಬೇಕಾ? ಡೌಟ್ ಇದ್ಯಾ?
Chikmagalur,Chikmagalur,Karnataka
Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ

