Advertisement
Advertisement

Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ

Whatsapp image 2026 05 28 at 11.46.06 2026 05 d4c0a582c56107cd0062e51e45124ae2 1200x675.jpeg


Last Updated:

ಚಿಕ್ಕಮಗಳೂರು ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಶೃಂಗೇರಿ BTM, ಕಡೂರು ATM ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ, ಮೇ 30 ಸಂಜೆ 5.30 ಅರ್ಜಿ ಕೊನೆಯ ದಿನ

ಕೆಲಸ
ಕೆಲಸ

ಚಿಕ್ಕಮಗಳೂರು: ಕೆಲಸ ಹುಡುಕಿ ಸುಸ್ತಾಗಿದ್ದೀರಾ? ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಯುವಕ-ಯುವತಿಯರಿಗೆ ಕೃಷಿ ಇಲಾಖೆಯಿಂದ ಬಂಪರ್ ಆಫರ್! ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ಇದೀಗ ಭರ್ಜರಿ ನೇಮಕಾತಿ ಶುರುವಾಗಿದ್ದು, ನಿಮ್ಮೂರಿನಲ್ಲೇ ಕೆಲಸ ಗಿಟ್ಟಿಸಿಕೊಳ್ಳಲು ಇದೊಂದು ಸುವರ್ಣಾವಕಾಶ!

ಯಾವ್ಯಾವ ಹುದ್ದೆಗಳು ಖಾಲಿ ಇವೆ ಗೊತ್ತಾ?

ಶೃಂಗೇರಿ ತಾಲ್ಲೂಕಿನಲ್ಲಿ ‘ತಾಂತ್ರಿಕ ವ್ಯವಸ್ಥಾಪಕರು (BTM)’ ಹಾಗೂ ಕಡೂರು ತಾಲ್ಲೂಕಿನ ಚೌಳಹಿರಿಯೂರು ಹೋಬಳಿಯಲ್ಲಿ ‘ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM)’ ಹುದ್ದೆಗಳಿಗೆ ದಿಢೀರ್ ಅರ್ಜಿ ಆಹ್ವಾನಿಸಲಾಗಿದೆ! ಅಷ್ಟೇ ಅಲ್ಲ, ಭವಿಷ್ಯದಲ್ಲಿ ಖಾಲಿಯಾಗುವ ಹುದ್ದೆಗಳಿಗೂ ಈಗಲೇ ರಿಸರ್ವೇಷನ್ ಶುರುವಾಗಿದೆ! ಎಲ್ಲಕ್ಕಿಂತ ಖುಷಿಯ ವಿಚಾರ ಎಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಭರ್ಜರಿ ಆದ್ಯತೆ ಸಿಗಲಿದೆ!

ಯಾರೆಲ್ಲಾ ಅರ್ಜಿ ಹಾಕಬಹುದು? ಏನೇನು ಓದಿರಬೇಕು?

ಕೃಷಿ ಅಥವಾ ತೋಟಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಅಥವಾ ಪದವಿ ( M.Sc Agri, M.Sc Horti ) ಮುಗಿಸಿದ್ದೀರಾ? ಜೊತೆಗೆ ಕಂಪ್ಯೂಟರ್ ಕೂಡ ಆಪರೇಟ್ ಮಾಡಲು ಗೊತ್ತಾ? ಹಾಗಾದರೆ ಈ ಕೆಲಸ ನಿಮಗೇನೇ!

BTM ಹುದ್ದೆಗೆ: ಬಿಟಿಎಂ ಹುದ್ದೆಗೆ ಕೃಷಿ ಕ್ಷೇತ್ರದಲ್ಲಿ ಕೇವಲ 2 ವರ್ಷ ಎಕ್ಸ್‌ಪೀರಿಯನ್ಸ್ ಇದ್ದರೆ ಸಾಕು.

ATM ಹುದ್ದೆಗೆ: ಎಟಿಎಂ ಹುದ್ದೆಗೆ ಕೇವಲ 1 ವರ್ಷದ ಎಕ್ಸ್‌ಪೀರಿಯನ್ಸ್ ಇದ್ದರೆ ಈ ಪ್ರತಿಷ್ಠಿತ ಹುದ್ದೆ ನಿಮ್ಮದಾಗಬಹುದು!
ಅಲರ್ಟ್; ಟೈಮ್ ಇಲ್ಲ, ಕೂಡಲೇ ಇಲ್ಲಿಗೆ ಓಡಿ!

ಅರ್ಜಿ ಸಲ್ಲಿಸಲು ಕೇವಲ ಕೆಲವೇ ದಿನಗಳು ಬಾಕಿ ಇವೆ! ಮೇ 30 ಕೊನೆಯ ದಿನಾಂಕ! ಅಂದು ಸಂಜೆ 5:30ರ ಒಳಗೆ ಭರ್ತಿ ಮಾಡಿದ ನಿಮ್ಮ ಅರ್ಜಿಗಳು ಚಿಕ್ಕಮಗಳೂರಿನ ‘ಜಂಟಿ ಕೃಷಿ ನಿರ್ದೇಶಕರ ಕಚೇರಿ’ ತಲುಪಲೇಬೇಕು! ಸ್ವಲ್ಪ ತಡವಾದರೂ ನಿಮ್ಮ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗಬಹುದು!

ಹೆಚ್ಚಿನ ಮಾಹಿತಿ ಬೇಕಾ? ಡೌಟ್ ಇದ್ಯಾ?

ಕನ್ನಡ ಸುದ್ದಿ/ ನ್ಯೂಸ್/Jobs/

Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ



Source link

Leave a Reply

Your email address will not be published. Required fields are marked *

TOP