Last Updated:
ಧಾರವಾಡದ ವಿದ್ಯಾಕಾಶಿ ಸಂಸ್ಥೆ ಹಾಗೂ ಶ್ರೀಶಾ ಕಮಾಂಡೋ ಅಕಾಡೆಮಿ ಉಚಿತ ಅಗ್ನಿವೀರ ದೈಹಿಕ ತರಬೇತಿ ಆರಂಭಿಸಿ 600 ಕ್ಕೂ ಹೆಚ್ಚು ಯುವಕರಿಗೆ ಆಹಾರ ವಸತಿ ಸೇರಿದಂತೆ ಸೌಲಭ್ಯ ಒದಗಿಸಿದೆ.
ಧಾರವಾಡ: ನೀವು ದೇಶ ಸೇವೆ (Nation Duty) ಮಾಡಬೇಕು ಅಂತ ಅಂದುಕೊಂಡಿದ್ದೀರಾ, ನೀವು ಸೈನಿಕರಾಗೋಕೆ ತಯಾರಾ? ನಿಮಗೆ ಸರಿಯಾದ ತರಬೇತಿ (Training) ಸಿಗುತ್ತಿಲ್ವಾ? ಹಾಗಾದರೆ ನೀವು ಇಲ್ಲಿಗೆ ಬರಲೇಬೇಕು. ದೇಶ ಸೇವೆ ಮಾಡಬೇಕು ಎಂಬುದು ಸಾವಿರಾರು ಯುವಕ (Youngster) ಹಾಗೂ ಯುವತಿಯರ ಕನಸಾಗಿರುತ್ತದೆ. ಅದರಂತೆ ಅವರಿಗೆ ಸೂಕ್ತ ತರಬೇತಿ ದೊರಕುವುದು ಕಷ್ಟ. ಹೀಗಾಗಿ ಯುವಸಮೂಹ ನಿರಾಸೆ ಅನುಭವಿಸುವಂತಾಗಿದೆ.
ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕೆಂಬ ಇಚ್ಛೆ ಹೊಂದಿರುವಂತಹ ಯುವಕರಿಗೆ ವಿದ್ಯಾಕಾಶಿ ಧಾರವಾಡದಲ್ಲಿ ಅಗ್ನಿವೀರರ ಹುದ್ದೆಗೆ ಸೇರಬಯಸುವವರಿಗೆ ಉಚಿತವಾಗಿ ತರಬೇತಿ ನೀಡಲು ಸಜ್ಜಾಗಿದ್ದು, ಪ್ರಥಮ ಹಂತದಲ್ಲಿ 600 ಕ್ಕೂ ಹೆಚ್ಚು ಯುವಕರು ದೈಹಿಕ ತರಬೇತಿಯಲ್ಲಿ ಭಾಗವಹಿಸಿರುವುದು ವಿಶೇಷ ಸಂಗತಿಯಾಗಿದೆ.
ಹೌದು! ದೇಶ ಸೇವೆ ಸಲ್ಲಿಸಲು ಪಣತೊಟ್ಟ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಧಾರವಾಡ ನಗರದ ಶ್ರೀಶಾ ಕಮಾಂಡೋ ಅಕಾಡೆಮಿ ಹಾಗೂ ಶರಣಬಸವ ಅಂಗಡಿ ಲಾ ಫರ್ಮ್ ಸಹಯೋಗದಲ್ಲಿ ಉಚಿತ ಅಗ್ನಿವೀರ ದೈಹಿಕ ತರಬೇತಿ ಆಯ್ಕೆ ಪ್ರಕ್ರಿಯೆ ನಡೆಸಿದೆ. ಇದರಲ್ಲಿ ಧಾರವಾಡ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇತ್ತೀಚೆಗೆ ನಡೆದ ಅಗ್ನಿವೀರ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಸುಮಾರು 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಚಿತ ತರಬೇತಿಗೆ ಆಯ್ಕೆಯಾಗಿದ್ದಾರೆ.
ಧಾರವಾಡ ನಗರದ ಡಾ.ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಾವಿರಾರು ಅಭ್ಯರ್ಥಿಗಳಿಗೆ ಓಟವನ್ನು ಆಯೋಜನೆ ಮಾಡಲಾಗಿತ್ತು. ಅದರಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯಿಂದ ಮೂರು ತಿಂಗಳ ಉಚಿತ ಅಗ್ನಿವೀರ ದೈಹಿಕ ತರಬೇತಿ ಜೊತೆಗೆ ಊಟ, ವಸತಿ ಉಚಿತವಾಗಿ ನೀಡಲಿದೆ.
ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನಿತ್ಯ ಮಾಜಿ ಸೈನಿಕರು ಮತ್ತು ದೈಹಿಕ ಶಿಕ್ಷಕರು ದೈಹಿಕ ಕಸರತ್ತುಗಳ ತರಬೇತಿ ನೀಡುತ್ತಿದ್ದು, ಯಾವ ರೀತಿಯ ದೇಹವನ್ನು ಸಜ್ಜುಗೊಳಿಸಬೇಕು ಎಂಬುದನ್ನು ಕಲಿಸಿಕೊಡುತ್ತಿದ್ದಾರೆ. ಅದರಂತೆ ಬೆಳಗ್ಗೆ ರನ್ನಿಂಗ್, ವಾಕಿಂಗ್, ಪುಶ್ಅಪ್ ಸೇರಿದಂತೆ ಹಲವು ರೀತಿಯ ಸೇನಾ ಕಸರತ್ತುಗಳನ್ನು ಹೇಳಿಕೊಡಲಾಗುತ್ತದೆ.
ತಡಮಾಡಬೇಡಿ ಇವತ್ತೇ ಸೇರಿ ಬಿಡಿ!
Hubli-Dharwad (Hubli),Dharwad,Karnataka
Feb 01, 2026 10:26 AM IST
Indian Army: ನಿಮಗೆ ಸೈನಿಕರಾಗೋ ಆಸೆ ಇದೆಯೇ? ಸೂಕ್ತ ತರಬೇತಿ ಸಿಗುತ್ತಿಲ್ವೇ? ಈ ಊರಲ್ಲಿ ಊಟ-ವಸತಿ ಜೊತೆ ಟ್ರೈನಿಂಗ್ ಉಚಿತ!
