Last Updated:
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪುಟ್ಟ ಸರ್ಕಾರಿ ಶಾಲೆಯೊಂದು ತನ್ನ ಹಸಿರು ಪರಿಸರ, ಕೈತೋಟ ಮತ್ತು ಮಕ್ಕಳಿಗೆ ಉಚಿತವಾಗಿ ಸಿಗುವ ಹಣ್ಣು-ತರಕಾರಿಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಕೇವಲ 15 ಮಕ್ಕಳಿರುವ ಈ ಶಾಲೆ ಈಗ ಎಲ್ಲರಿಗೂ ಮಾದರಿಯಾಗಿದೆ
ಚಿತ್ರದುರ್ಗ: ದಿನ ಬೆಳಗಾದರೆ ನಾವು ಎಷ್ಟೋ ನೆಗೆಟಿವ್ ಸುದ್ದಿಗಳನ್ನ ಕೇಳ್ತೀವಿ, ನೋಡ್ತೀವಿ. ‘ಸರ್ಕಾರಿ ಶಾಲೆ’ ಅಂದ ತಕ್ಷಣ ‘ಅಯ್ಯೋ ಅಲ್ಲಿ ಯಾರು ಓದುತ್ತಾರೆ ಬಿಡಿ, ಕಾಂಪೌಂಡ್ (Compound) ಇರಲ್ಲ, ಕುಡಿಯೋಕೆ ನೀರಿರಲ್ಲ’ ಅಂತ ಮೂಗು ಮುರಿಯೋರೇ ಹೆಚ್ಚು. ಆದರೆ, ಇವತ್ತು ನಾನು ನಿಮಗೆ ಹೇಳೋಕೆ ಹೊರಟಿರೋ ಈ ಸ್ಟೋರಿ, ನಿಮ್ಮ ಆಲೋಚನೆಯನ್ನೇ (Thinking) ಸಂಪೂರ್ಣವಾಗಿ ಬದಲಾಯಿಸುತ್ತೆ. ಈ ಸ್ಟೋರಿ ನೋಡಿದ ಮೇಲೆ ನಿಮ್ಮ ಮುಖದಲ್ಲಿ ಖಂಡಿತ ಒಂದು ಮಂದಹಾಸ ಮೂಡುತ್ತೆ!
ನೀವು ಯಾವುದಾದರೂ ದಟ್ಟವಾದ ಕಾಡಿಗೆ ಅಥವಾ ದುಬಾರಿ ರಿಸಾರ್ಟ್ಗೆ ಹೋಗಿದ್ದೀರಾ? ಅಲ್ಲಿನ ಪ್ರಶಾಂತತೆ, ಆ ಹಸಿರು ವಾತಾವರಣ ನಿಮ್ಮನ್ನ ಮೂಕವಿಸ್ಮಯರನ್ನಾಗಿ ಮಾಡುತ್ತೆ ಅಲ್ವಾ? ಅದೇ ರೀತಿ, ನಮ್ಮ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲೂಕಿನ ‘ಗೋಪನಹಳ್ಳಿ ಯಾದವನಗರ’ದ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಲಿಟ್ಟರೆ ನಿಮಗೂ ಸೇಮ್ ಅದೇ ಫೀಲ್ ಆಗುತ್ತೆ.
ಇಲ್ಲಿನ ಅಸಲಿ ಟ್ವಿಸ್ಟ್ ಏನಪ್ಪಾ ಅಂದ್ರೆ.. ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಓದುತ್ತಿರೋದು ಕೇವಲ 15 ಮಕ್ಕಳು! ಹೌದು, ಬರೀ 15 ಮಕ್ಕಳು, ಪಾಠ ಮಾಡೋಕೆ ಇಬ್ಬರು ಶಿಕ್ಷಕರು, ಜೊತೆಗೆ ಊಟ ಮಾಡಿಸೋಕೆ ಒಬ್ಬರು ಅಡುಗೆಯವರು. ಆದರೆ, ಈ 15 ಮಕ್ಕಳಿಗೆ ಪ್ರಕೃತಿ ಮಾತೆ ದಿನಾ ಕೊಡ್ತಿರೋ ಆ ‘ವಿಐಪಿ ಟ್ರೀಟ್ಮೆಂಟ್’ ನೋಡಿದ್ರೆ, ಲಕ್ಷ ಲಕ್ಷ ಫೀಸ್ ಕಟ್ಟಿ ಮಕ್ಕಳನ್ನ ಕಾನ್ವೆಂಟ್ಗೆ ಕಳಿಸೋ ಪೋಷಕರು ಕೂಡ ‘ಅಬ್ಬಾ.. ನಮ್ಮ ಮಕ್ಕಳಿಗೂ ಇಂಥಾ ಭಾಗ್ಯ ಸಿಗಬೇಕಿತ್ತು’ ಅನ್ನೋದು ಗ್ಯಾರಂಟಿ.
ಇದೆಲ್ಲಾ ರಾತ್ರೋರಾತ್ರಿ ಆಗಿದ್ದಲ್ಲ. ಊರಿನ ಜನ, ಶಾಲಾ ಸಮಿತಿ ಹಾಗೂ ನಮ್ಮ ಮೇಷ್ಟ್ರುಗಳು ಒಂದಾಗಿ ಬೆವರು ಸುರಿಸಿದ್ದರ ಫಲ ಇದು. ಗಿಡಗಳಿಗೆ ಡ್ರಿಪ್ ಇರಿಗೇಷನ್ (ಹನಿ ನೀರಾವರಿ) ಅಳವಡಿಸಿ, ಯಾವುದೇ ಕೆಮಿಕಲ್ ಹಾಕದೆ ಕೇವಲ ‘ಹೊಂಗೆ ಹಿಂಡಿ’ಯನ್ನೇ ಗೊಬ್ಬರವಾಗಿ ಹಾಕಿ ಈ ಮ್ಯಾಜಿಕ್ ಮಾಡಿದ್ದಾರೆ.
ಇವರ ಶ್ರಮಕ್ಕೆ ನಮ್ಮದೊಂದು ಸೆಲ್ಯೂಟ್!
Chitradurga,Chitradurga,Karnataka
Jul 04, 2026 10:58 AM IST
