Advertisement
Advertisement

Job News: ದಿನವಿಡೀ ದುಡಿಯಬೇಕಿಲ್ಲ, ಪದವಿಯೂ ಬೇಕಿಲ್ಲ; ಊರಲ್ಲದ್ದೇ ದುಡಿಯಬಹುದು 30 ಸಾವಿರಕ್ಕಿಂತ ಹೆಚ್ಚು ಆದಾಯ!

Whatsapp image 2026 06 25 at 16.15.40 2026 06 90f3db878649b49f0e6054a02fd98502 1200x675.jpeg


Last Updated:

ಚಿಕ್ಕಮಗಳೂರು ಅಂಚೆ ಇಲಾಖೆ ಪಿಎಲ್‌ಐ, ಆರ್‌ಪಿಎಲ್‌ಐ ಏಜೆಂಟ್ ಹುದ್ದೆಗೆ 18 ವರ್ಷ ಮೇಲ್ಪಟ್ಟವರಿಗೆ ಜೂನ್ 30 ರಂದು ನೇರ ಸಂದರ್ಶನ, ಕಮಿಷನ್ ಆಧಾರಿತ ಸ್ವಉದ್ಯೋಗ ಅವಕಾಶ

ಅಂಚೆ ಇಲಾಖೆ
ಅಂಚೆ ಇಲಾಖೆ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ (Central Government) ಅತ್ಯಂತ ನಂಬಿಕಸ್ಥ ಸಂಸ್ಥೆಯಾದ ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವ ದೊಡ್ಡ ಆಸೆ ನಿಮಗಿದೆಯೇ? ಹಾಗಿದ್ದರೆ ಚಿಕ್ಕಮಗಳೂರು ಜಿಲ್ಲೆಯ ನಿವಾಸಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ (Golden Opportunity) ಒದಗಿಬಂದಿದೆ. ಜಿಲ್ಲಾ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವವಿಮೆ ಅಂದರೆ ಪಿಎಲ್‌ಐ ಮತ್ತು ಗ್ರಾಮೀಣ ಅಂಚೆ ಜೀವವಿಮೆ (Life Insurance) ಅಂದರೆ ಆರ್‌ಪಿಎಲ್‌ಐ ಏಜೆಂಟರುಗಳಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಭರ್ಜರಿ ಅರ್ಜಿ (Application) ಆಹ್ವಾನಿಸಲಾಗಿದೆ.

ನಿರುದ್ಯೋಗದ ಚಿಂತೆ ಇದೆಯಾ? ಇಲ್ಲಿದೆ ಪರಿಹಾರ

ನಿರುದ್ಯೋಗದ ಚಿಂತೆಯಲ್ಲಿರುವ 18 ವರ್ಷ ಮೇಲ್ಪಟ್ಟ ಯುವಕ ಮತ್ತು ಯುವತಿಯರಿಗೆ ಇದೊಂದು ಬೆಸ್ಟ್ ಆಪ್ಷನ್ ಆಗಿದ್ದು, ಆಸಕ್ತರು ಜೂನ್ 30 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ನಗರದ ಜ್ಯೋತಿನಗರದ ಎಪಿಎಂಸಿ ಹತ್ತಿರದ ಅಂಚೆ ಕಚೇರಿ ಕಟ್ಟಡದಲ್ಲಿರುವ ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ನೇರವಾಗಿ ಹಾಜರಾಗಬಹುದು. ಯಾವುದೇ ಗೊಂದಲಗಳಿದ್ದರೆ ಇಲಾಖೆಯ ಅಧಿಕೃತ ಫೋನ್ ಸಂಖ್ಯೆ 9164309321 ಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು.

ಅರ್ಜಿ ಸಲ್ಲಿಸಬೇಕಾದರೆ ಏನೆಲ್ಲಾ ಇರಬೇಕು?

ಈ ಅದ್ಭುತ ಸ್ವಉದ್ಯೋಗದ ಅವಕಾಶಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಇಲಾಖೆಯು ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿಲ್ಲ. ಕೇವಲ ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್ ಆಗಿರುವ ಯಾರಿಗಾದರೂ ಈ ಕೆಲಸ ಸಿಗಲಿದೆ. ಇದರೊಂದಿಗೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಇರಬೇಕು ಮತ್ತು ತಾವು ವಾಸಿಸುವ ಪ್ರಾದೇಶಿಕ ಸ್ಥಳದ ಸಂಪೂರ್ಣ ಭೌಗೋಳಿಕ ಮಾಹಿತಿ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಸಿಕ ಸಂಬಳ ಇಲ್ಲ, ಕಮಿಷನ್‌ ದಾರಿಯೇ ಯೋಗ್ಯ

ನಿಮಗೆ ಈ ಹುದ್ದೆಯಲ್ಲಿ ಯಾವುದೇ ರೀತಿಯ ನಿಗದಿತ ಮಾಸಿಕ ಸಂಬಳ ಇರುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಡಿ. ಇದು ಸಂಪೂರ್ಣವಾಗಿ ಕಮಿಷನ್ ಮತ್ತು ಇನ್ಸೆಂಟಿವ್ ಆಧಾರಿತ ಸ್ವಉದ್ಯೋಗವಾಗಿದ್ದು, ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಜೇಬು ತುಂಬ ಹಣ ಗಳಿಸಬಹುದು. 10 ವರ್ಷಕ್ಕಿಂತ ಕಮ್ಮಿ ಕಾಲಾವಧಿಯ ಪಾಲಿಸಿಗೆ 4%, 15-25 ವರ್ಷಕ್ಕೆ 10% ಹಾಗೂ 25% ಮೇಲ್ಪಟ್ಟು 20% ಕಮಿಷನ್‌ ಸಿಗಲಿದೆ. ಆಂಟಿಸಿಪೇಟೆಡ್ ಎಂಡೋಮೆಂಟ್ ಅಶ್ಯುರೆನ್ಸ್ ಯೋಜನೆಯಡಿ 15 ವರ್ಷದೊಳಗಿನ ಪಾಲಿಸಿಗೆ ಶೇಕಡಾ 5 ರಷ್ಟು ಮತ್ತು 15 ವರ್ಷ ಮೇಲ್ಪಟ್ಟ ಪಾಲಿಸಿಗೆ ಶೇಕಡಾ 7 ರಷ್ಟು ಕಮಿಷನ್ ನಿಗದಿಯಾಗಿದೆ.

ನೇರ ಸಂದರ್ಶನದ ಮೂಲಕ ಆಯ್ಕೆ

ಗ್ರಾಮೀಣ ಭಾಗದ ಜನರಿಗಾಗಿ ಇರುವ ಆರ್‌ಪಿಎಲ್‌ಐ ಪಾಲಿಸಿಗಳ ಎಲ್ಲಾ ಯೋಜನೆಗಳ ಮೇಲೆ ಮೊದಲ ವರ್ಷದ ಪ್ರೀಮಿಯಂಗೆ ಭರ್ಜರಿ ಶೇಕಡಾ 10 ರಷ್ಟು ಕಮಿಷನ್ ಸಿಗಲಿದೆ. ತಿಂಗಳಿಗೆ ಕೇವಲ 4 ರಿಂದ 5 ಉತ್ತಮ ಪಾಲಿಸಿಗಳನ್ನು ಮಾಡಿಸಿದರೂ ಸುಲಭವಾಗಿ 20,000 ದಿಂದ 50,000 ರೂಪಾಯಿಗೂ ಅಧಿಕ ಆದಾಯ ಗಳಿಸಬಹುದು. ನೇರ ಸಂದರ್ಶನದ ಮೂಲಕ ಆಯ್ಕೆಯಾಗುವ ಅದೃಷ್ಟವಂತ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಿಂದಲೇ ಸಂಪೂರ್ಣವಾಗಿ ಉಚಿತ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಅಧಿಕೃತ ಏಜೆಂಟ್ ಕೋಡ್ ವಿತರಿಸಲಾಗುತ್ತದೆ. ಆದರೆ ನಿಯಮಗಳ ಪ್ರಕಾರ ಆಯ್ಕೆಯಾದ ನಂತರ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿಯೇ 5,000 ರೂಪಾಯಿಗಳ ಸೆಕ್ಯುರಿಟಿ ಡಿಪಾಸಿಟ್ ಅನ್ನು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ಕಿಸಾನ್ ವಿಕಾಸ್ ಪತ್ರ ರೂಪದಲ್ಲಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ.

ಇನ್ನೂ 5 ದಿನದ ಕಾಲ ಅವಕಾಶ ಮಾತ್ರ

ಇದನ್ನೂ ಓದಿ: Competition: ಸುದ್ದಿ ಛಾಯಾಗ್ರಾಹಕರಿಗೆ ಭರ್ಜರಿ ಆಫರ್, 35 ಸಾವಿರ ಗೆಲ್ಲುವ ಅವಕಾಶ ಮಿಸ್ ಮಾಡ್ಕೋಬೇಡಿ!

ಜೂನ್ 30 ರ ಸಂದರ್ಶನಕ್ಕೆ ಹೋಗುವಾಗ ನಿಮ್ಮ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್, ವಯಸ್ಸು ಮತ್ತು ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ, 2 ರಿಂದ 3 ಪಾಸ್‌ಪೋರ್ಟ್ ಸೈಜ್ ಫೋಟೋಗಳು, ನಿಮ್ಮ ನೂತನ ಬಯೋಡೇಟಾ, ಪ್ಯಾನ್ ಕಾರ್ಡ್ ಮತ್ತು ಹಳೆಯ ವಿಮಾ ಅನುಭವದ ದಾಖಲೆಗಳಿದ್ದರೆ ಅವುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ. ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ indiapost.gov.in ಅನ್ನು ವೀಕ್ಷಿಸಬಹುದು ಅಥವಾ dochikmagalur.ka@indiapost.gov.in ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು.

ಕನ್ನಡ ಸುದ್ದಿ/ ನ್ಯೂಸ್/Jobs/

Job News: ದಿನವಿಡೀ ದುಡಿಯಬೇಕಿಲ್ಲ, ಪದವಿಯೂ ಬೇಕಿಲ್ಲ; ಊರಲ್ಲದ್ದೇ ದುಡಿಯಬಹುದು 30 ಸಾವಿರಕ್ಕಿಂತ ಹೆಚ್ಚು ಆದಾಯ!



Source link

Leave a Reply

Your email address will not be published. Required fields are marked *

TOP