Last Updated:
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಜನಗಣತಿ 2027ಗಾಗಿ 1745 ಗಣತಿದಾರರ ವಾಕ್ ಇನ್ ಸಂದರ್ಶನ ಇಂದು, ದ್ವಿತೀಯ ಪಿಯುಸಿ ಅರ್ಹತೆ, ಆಂಡ್ರಾಯ್ಡ್ 12 ಫೋನ್ ಕಡ್ಡಾಯ, ಗೌರವ ಧನ ಗರಿಷ್ಠ 18000 ರೂ.
ಬೆಂಗಳೂರು: ಭಾರತದ ಜನಗಣತಿ-2027ರ ರಾಷ್ಟ್ರೀಯ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯು (Bengaluru South) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು (Enrollment) ಕೈಗೆತ್ತಿಕೊಂಡಿದೆ. ಒಟ್ಟು 1,745 ಗಣತಿದಾರರನ್ನು ಆಯ್ಕೆ ಮಾಡಿಕೊಳ್ಳಲು ಇಂದೇ ಕೊನೆಯ ದಿನದ ನೇರ ಸಂದರ್ಶನ (Walk-In Interview) ನಡೆಯುತ್ತಿದ್ದು, ಆಸಕ್ತರು ಈ ಕೂಡಲೇ ನಿಗದಿತ ಸ್ಥಳಕ್ಕೆ ಹಾಜರಾಗಲು ಕೋರಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯವು 15.05.2026 ರವರೆಗೆ ನಿರಂತರವಾಗಿ ನಡೆಯಲಿದೆ. ಇದಕ್ಕಾಗಿ ಆಸಕ್ತ ವಿದ್ಯಾರ್ಥಿಗಳು, ಪುರುಷರು ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಮತ್ತು ತಾಂತ್ರಿಕ ಅವಶ್ಯಕತೆಗಳು
- ವಿದ್ಯಾಭ್ಯಾಸ: ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.
- ಸ್ಮಾರ್ಟ್ಫೋನ್: ಗಣತಿ ಕಾರ್ಯವು ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯುವುದರಿಂದ, ಕನಿಷ್ಠ Android-12 ಆವೃತ್ತಿ ಹಾಗೂ 4 GB RAM ಸ್ಪೆಸಿಫಿಕೇಶನ್ ಹೊಂದಿರುವ ಮೊಬೈಲ್ ಇರುವುದು ಕಡ್ಡಾಯ.
- ವಲಯವಾರು ಆದ್ಯತೆ: ಬೊಮ್ಮನಹಳ್ಳಿ ವಲಯದ 9 ವಾರ್ಡ್ಗಳು ಮತ್ತು ಜಯನಗರ ವಲಯದ 9 ವಾರ್ಡ್ಗಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಯ್ಕೆಯಾದ ಗಣತಿದಾರರಿಗೆ ಆಕರ್ಷಕ ಗೌರವ ಧನ ನಿಗದಿಪಡಿಸಲಾಗಿದೆ:
- ಮೊದಲ ಹಂತ (ಮೇ 15, 2026 ರವರೆಗೆ): ಒಂದು ಬ್ಲಾಕ್ (150-200 ಮನೆಗಳು) ಗಣತಿಗೆ 9,000 ರೂ. ಹಾಗೂ ಎರಡು ಬ್ಲಾಕ್ಗಳಿಗೆ (ಸುಮಾರು 400 ಮನೆಗಳು) 18,000 ರೂ. ನೀಡಲಾಗುವುದು.
- ಎರಡನೇ ಹಂತ (ಫೆಬ್ರವರಿ 2027): ಈ ಹಂತದ ಕಾರ್ಯಕ್ಕೆ 16,000 ರೂ. ಗೌರವ ಧನ ನೀಡಲಾಗುತ್ತದೆ (150-200 ಮನೆಗಳು ಅಥವಾ 750-800 ಜನಸಂಖ್ಯೆಗೆ).
ಸಂದರ್ಶನದ ಮಾಹಿತಿ
- ದಿನಾಂಕ: 23.04.2026 (ಇಂದು)
- ಸಮಯ: ಬೆಳಗ್ಗೆ 11:00 ರಿಂದ ಸಂಜೆ 5:00 ರವರೆಗೆ.
ಸಂದರ್ಶನ ಸ್ಥಳಗಳು ಮತ್ತು ಸಹಾಯವಾಣಿ
- ಬೊಮ್ಮನಹಳ್ಳಿ ವಲಯ (1,163 ಹುದ್ದೆಗಳು): ಜಂಟಿ ಆಯುಕ್ತರ ಕಚೇರಿ, ಬೇಗೂರು ರಸ್ತೆ, CMC ಬಿಲ್ಡಿಂಗ್. ಸಂಪರ್ಕ: 8762716711 / 9480684353.
- ಜಯನಗರ ವಲಯ (582 ಹುದ್ದೆಗಳು): ಶಾಶ್ವತಿ ಆಡಿಟೋರಿಯಂ, NMKRV ಕಾಲೇಜು, 3ನೇ ಬ್ಲಾಕ್, ಜಯನಗರ. ಸಂಪರ್ಕ: 9481492649 / 9916536036
Bangalore [Bangalore],Bangalore,Karnataka
Apr 23, 2026 10:12 AM IST
Census: ಬೆಂಗಳೂರಲ್ಲಿ ನಡೆಯುತ್ತಿದೆ 1745 ಜನರ ನೇಮಕಾತಿ; ಎಕ್ಸಾಮ್ ಇಲ್ಲ, 2nd PUC ಸಾಕು, ನೇರ ಆಯ್ಕೆ! ಇಂದೇ ಕೊನೆ ದಿನ

