Advertisement
Advertisement

ಅಂಗವೈಕಲ್ಯತೆ ಸಾಧನೆಗೆ ಅಡ್ಡಿ ಅಲ್ಲ ಎಂದು ತೋರಿಸಿಕೊಟ್ರು ಈ ಅಭ್ಯರ್ಥಿ; UPSCಯಲ್ಲಿ ಉತ್ತೀರ್ಣ ಇರಾ ಸಿಂಘಲ್

1745323946 upsc ias question 2025 01 f43baebfb219c691b4657ee98f74e669 3x2.jpg


ಜೀವನದಲ್ಲಿ ಸಾಧಿಸಬೇಕೆಂಬ ಸ್ಫೂರ್ತಿ

ಮೀರತ್‌ನಲ್ಲಿ ಬೆಳೆದ ಇರಾ ಕರ್ಪ್ಯೂ, ಪ್ರತಿಭಟನೆ ಇದರಲ್ಲಿಯೇ ಕಾಲ ಕಳೆದವರು. ಅನೇಕ ಮಕ್ಕಳಂತೆ ಅವರು ರೇಡಿಯೋ, ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು.

ಕರ್ಪ್ಯೂ ವಿಧಿಸುವ ಪ್ರಕಟಣೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಆದರೆ ಇತರರಿಗಿಂತ ಭಿನ್ನವಾಗಿ, ಅವರು ಭಯಭೀತರಾಗಿರಲಿಲ್ಲ, ಆದರೆ ಸ್ಫೂರ್ತಿ ಪಡೆದಿದ್ದರು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ನ ಶಾಂತ ಅಧಿಕಾರದಿಂದ ಅವರು ಆಕರ್ಷಿತರಾದರು, ಅವ್ಯವಸ್ಥೆಗೆ ಕ್ರಮವನ್ನು ತರಬಲ್ಲ ಏಕೈಕ ವ್ಯಕ್ತಿ. ಆಗಲೇ, ಒಂದು ಕನಸು ಬೇರೂರಿತು, ಅವರು ಅದೇ ಹುದ್ದೆಯನ್ನಲಂಕರಿಸಬೇಕೆಂದು ಸಂಕಲ್ಪಿಸಿಕೊಂಡರು.

ತಮ್ಮ ಸಾಧನೆಗೆ ದೈಹಿಕ ನ್ಯೂನತೆ ಅಡ್ಡಿಯಾಗಲಿಲ್ಲ

ಇರಾ ತಮ್ಮ ಅಧ್ಯಯನದಲ್ಲಿ ಪ್ರತಿಭಾನ್ವಿತರಾಗಿದ್ದರು, ಎಂಜಿನಿಯರಿಂಗ್ ಮತ್ತು ನಂತರ ಎಂಬಿಎ ಮುಗಿಸಿದರು. ಆದರೆ ಅವರು ದೈಹಿಕ ನ್ಯೂನತೆಗಳನ್ನು ಹೊಂದಿದ್ದರು ಅದಾಗ್ಯೂ ಅವರಲ್ಲಿ ಛಲ ಅಚಲವಾಗಿತ್ತು.

ಇರಾ ಬೆನ್ನುಮೂಳೆಯನ್ನು ವಕ್ರಗೊಳಿಸುವ ಸ್ಕೋಲಿಯೋಸಿಸ್ ಎಂಬ ಸ್ಥಿತಿಯಿಂದ ಜನಿಸಿದ್ದರು ಹಾಗಾಗಿ ಪ್ರತಿದಿನ ದೈಹಿಕ ಸವಾಲುಗಳು ಮತ್ತು ಟೀಕೆಗಳನ್ನು, ವಿಡಂಬನೆಗಳನ್ನು ಎದುರಿಸುತ್ತಿದ್ದರು.

ಆಕೆಗೆ ಜೀವನದಲ್ಲಿ ಏನೂ ಸಾಧಿಸಲಾಗುವುದಿಲ್ಲ ಎಂದೇ ಜನರು ಹೇಳುತ್ತಿದ್ದರು. ಆದರೆ ಇರಾ ಇದನ್ನು ತಲೆಗೆ ಹಾಕಿಕೊಳ್ಳಲಿಲ್ಲ. ಯಾವಾಗಲೂ ತನಗೆ ಏನು ಮಾಡಲು ಸಾಧ್ಯವೋ ಅದರ ಮೇಲೆ ಗಮನಹರಿಸುತ್ತಿದ್ದರು.

ಸೇವೆಗೆ ಆಯ್ಕೆಯಾದರೂ ನೇಮಕಾತಿ ನಡೆಯಲಿಲ್ಲ

2010 ರಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ಣಾವಧಿ ತಯಾರಿಗಾಗಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದ ನಂತರ, ಅವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಭಾರತೀಯ ಕಂದಾಯ ಸೇವೆ (IRS) ಗೆ ಆಯ್ಕೆಯಾದರು. ಆದರೆ ನೇಮಕಾತಿ ಪತ್ರದ ಬದಲಿಗೆ, ಅವರು ನಿರಾಕರಣೆಯನ್ನು ಪಡೆದರು.

ಕಾರಣ? ಅವರ ಅಂಗವೈಕಲ್ಯ ಅವರಿಗೆ ಉದ್ಯೋಗ ಪಡೆಯುವಲ್ಲಿ ನಿರಾಕರಣೆಯನ್ನೊಡ್ಡಿತು. ಇರಾ ಇದರಿಂದ ಧೃತಿಗೆಡಲಿಲ್ಲ ಹೋರಾಡುವ ನಿರ್ಧಾರ ಮಾಡಿಕೊಂಡರು.

ಕಾನೂನು ಹೋರಾಟಕ್ಕಿಳಿದ ಇರಾ

ತನ್ನ ದೈಹಿಕ ಸ್ಥಿತಿಗಿಂತ ತನ್ನ ಸಾಮರ್ಥ್ಯಗಳು ಮುಖ್ಯ ಎಂದು ವಾದಿಸಿ ಅವರು ಸರ್ಕಾರವನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುಂತೆ ಮಾಡಿದರು. ಕಾನೂನು ಹೋರಾಟ ವರ್ಷಗಳ ಕಾಲ ನಡೆಯಿತು.

ಆದರೆ ಇರಾ ಕಾಯಲಿಲ್ಲ. ಅವರು ಯುಪಿಎಸ್‌ಸಿ ಪರೀಕ್ಷೆಯನ್ನು ಮತ್ತೆ ಮತ್ತೆ ಬರೆಯುತ್ತಲೇ ಇದ್ದರು. 2011 ರಲ್ಲಿ, ಅವರು ಅದನ್ನು ಪಾಸು ಮಾಡಿದರು.

ನಂತರ ಮತ್ತೆ 2012 ರಲ್ಲಿ. ಮತ್ತು ಮತ್ತೊಮ್ಮೆ 2013 ರಲ್ಲಿ ಹೀಗೆ ಮೇಲಿಂದ ಮೇಲೆ ಉತ್ತೀರ್ಣರಾದರು. ತಮ್ಮ ಹಕ್ಕಿಗಾಗಿ ಹೋರಾಡುವ ಸಮಯದಲ್ಲಿ ಇರಾ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೇಲಿಂದ ಮೇಲೆ ಉತ್ತೀರ್ಣ

ಕೊನೆಗೂ ಇರಾ ಹೋರಾಟಕ್ಕೆ ತಕ್ಕ ಫಲ ದೊರೆಯಿತು. 2014 ರಲ್ಲಿ ಇರಾ ಪರವಾಗಿ ತೀರ್ಪು ದೊರೆಯಿತು. ಆಕೆಗೆ ಸೇವೆಗೆ ಸೇರಲು ಅವಕಾಶ ನೀಡಲಾಯಿತು. ಮಾತ್ರವಲ್ಲದೆ ಆಕೆಯ ಅಸಾಧಾರಣ ಪರಿಶ್ರಮಕ್ಕೂ ಸೂಕ್ತ ಗೌರವ ದೊರೆಯಿತು.

ಅದೇ ವರ್ಷ, ಅವರು ಮತ್ತೊಮ್ಮೆ ಪರೀಕ್ಷೆ ಬರೆದು ಇತಿಹಾಸ ನಿರ್ಮಿಸಿದರು. ಅವರು ಕೇವಲ ಐಎಎಸ್ ಅಧಿಕಾರಿಯಾಗಲಿಲ್ಲ, ಬದಲಿಗೆ ಉನ್ನತ ಶ್ರೇಣಿಯನ್ನು ಸಾಧಿಸಿದ ಮೊದಲ ಅಂಗವೈಕಲ್ಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ತಮ್ಮ ಅಚಲ ಮನೋಬಲ ಹಾಗೂ ಧೈರ್ಯ, ಚೈತನ್ಯದಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದರು.

ಅಡೆತಡೆಗಳು ನಿಮ್ಮ ಸಾಧನೆಗೆ ಅಡ್ಡಿಯಾಗುವುದಿಲ್ಲ ಆದರೆ ನೀವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ನಿಮ್ಮ ಸೋಲು ಗೆಲುವನ್ನು ನಿರ್ಧರಿಸುತ್ತದೆ ಎಂಬುದಕ್ಕೆ ಇರಾ ತಕ್ಕ ಉದಾಹರಣೆಯಾಗಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/Jobs/

UPSC: ಅಂಗವೈಕಲ್ಯತೆ ಸಾಧನೆಗೆ ಅಡ್ಡಿ ಅಲ್ಲ ಎಂದು ತೋರಿಸಿಕೊಟ್ರು ಈ ಅಭ್ಯರ್ಥಿ; UPSCಯಲ್ಲಿ ಉತ್ತೀರ್ಣ ಇರಾ ಸಿಂಘಲ್



Source link

Leave a Reply

Your email address will not be published. Required fields are marked *

TOP