Last Updated:
ಎಸ್ಎಸ್ಎಲ್ಸಿ 2026 ಪ.ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನಗದು ಪ್ರೋತ್ಸಾಹ, ಶೇ 60-74.99ಕ್ಕೆ ರೂ 7000, ಶೇ 75 ಮೇಲ್ಪಟ್ಟವರಿಗೆ ರೂ 15000, ಆದಾಯ ಮಿತಿ ಇಲ್ಲ, ಆನ್ಲೈನ್ ಅರ್ಜಿ ಕಡ್ಡಾಯ
ಮೈಸೂರು: ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ಉತ್ತಮ ಅಂಕ (Marks) ಗಳಿಸಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ (ಪ.ಜಾತಿ) ವಿದ್ಯಾರ್ಥಿಗಳಿಗೆ (Students) ಸಮಾಜ ಕಲ್ಯಾಣ ಇಲಾಖೆಯು (Department of Social Welfare) ಭರ್ಜರಿ ಸಿಹಿಸುದ್ದಿ ನೀಡಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರ್ಕಾರವೇ ಈಗ ಬಹುಮಾನ ನೀಡುತ್ತಿದೆ. ಹೌದು, ನೀವು 2026ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪಾಸು ಮಾಡಿದ್ದರೆ, ನೀವು ಆರ್ಥಿಕ ಪ್ರೋತ್ಸಾಹಧನಕ್ಕೆ ಅರ್ಹರಾಗಿದ್ದೀರಿ.
ಶೇ. 60 ರಿಂದ ಶೇ. 74.99: ರೂ. 7,000 ಪ್ರೋತ್ಸಾಹಧನ.
ಶೇ. 75 ಕ್ಕಿಂತ ಹೆಚ್ಚು: ಬರೋಬ್ಬರಿ ರೂ. 15,000 ಪ್ರೋತ್ಸಾಹಧನ
ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಯೋಜನೆಗೆ ಯಾವುದೇ ಆದಾಯ ಮಿತಿ ಇಲ್ಲ. ರಾಜ್ಯ ಪಠ್ಯಕ್ರಮದ ಜೊತೆಗೆ CBSE ಮತ್ತು ICSE ವಿದ್ಯಾರ್ಥಿಗಳೂ ಸಹ ಈ ಸೌಲಭ್ಯಕ್ಕೆ ಅರ್ಹರು.
ಸಮಯ ಮೀರುವ ಮುನ್ನವೇ ಈ ಕೆಳಗಿನ ಹಂತಗಳನ್ನು ಅನುಸರಿಸಿ
ಮೊದಲು ನಿಮ್ಮ ಬ್ಯಾಂಕ್ ಖಾತೆಗೆ Aadhaar Redacted ಸಂಖ್ಯೆ ಜೋಡಣೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಕೂಡಲೇ ಬ್ಯಾಂಕ್ಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.
ಅಧಿಕೃತ ವೆಬ್ಸೈಟ್ https://swdservices.karnataka.gov.in/PrizeMoneyClientApp/register ಗೆ ಭೇಟಿ ನೀಡಿ.
‘Prize Money Application’ ವಿಭಾಗಕ್ಕೆ ಹೋಗಿ, ‘Register/Apply’ ಆಯ್ಕೆಯನ್ನು ಕ್ಲಿಕ್ ಮಾಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ದೃಢೀಕೃತ ದಾಖಲೆಗಳನ್ನು ಸಹಾಯಕ ನಿರ್ದೇಶಕರು (ಗ್ರೇಡ್–1), ಸಮಾಜ ಕಲ್ಯಾಣ ಇಲಾಖೆ, ಬಾಬು ಜಗಜೀವನರಾಂ ಕಟ್ಟಡ, ಆದಿಪಂಪ ರಸ್ತೆ, ಪಡುವಾರಹಳ್ಳಿ, ಮೈಸೂರು ಈ ವಿಳಾಸಕ್ಕೆ ಸಲ್ಲಿಸಲು ಮರೆಯದಿರಿ.
Mysore,Mysore,Karnataka

