Last Updated:
ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ, ಬಂಡಿಹೊಳೆ ಗ್ರಾಮಗಳಲ್ಲಿ ವಿಕಲಚೇತನರಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ, ಎಸ್ಎಸ್ಎಲ್ಸಿ ಪಾಸ್ ಅಥವಾ ಫೇಲ್ ಅರ್ಜಿ ಮೇ 25ರೊಳಗೆ ಸಲ್ಲಿಸಬೇಕು
ಮಂಡ್ಯ: ಸೋಲು ಗೆಲುವಿನ ಸೋಪಾನ ಎಂಬ ಮಾತಿದೆ. ನೀವು ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ (Fail) ಈಗ ಗೌರವಯುತ ಸರ್ಕಾರಿ ಕೆಲಸ (Govt Job) ಪಡೆಯುವ ಅವಕಾಶ ನಿಮ್ಮ ಮುಂದಿದೆ. ವಿಶೇಷವಾಗಿ ವಿಕಲಚೇತನರಿಗಾಗಿ (Disabled People) ಕೆ.ಆರ್.ಪೇಟೆ (K R Pete) ತಾಲೂಕಿನಲ್ಲಿ ಹೊಸ ಉದ್ಯೋಗ ಭಾಗ್ಯದ ಬಾಗಿಲು ತೆರೆದಿದೆ. ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಮುರುಕನಹಳ್ಳಿ ಮತ್ತು ಬಂಡಿಹೊಳೆ ಪಂಚಾಯಿತಿಗಳಲ್ಲಿ ‘ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ’ (VRW) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ನಿಗದಿತ ಗೌರವಧನ ನೀಡಲಾಗುತ್ತದೆ.
ಈ ಯೋಜನೆಯ ಬಗ್ಗೆ ಅಥವಾ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಗೊಂದಲಗಳಿದ್ದರೆ ತಕ್ಷಣವೇ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಮೊಬೈಲ್: 9900748434, ದೂರವಾಣಿ: 08232-239234.
ಇನ್ನೊಂದೆಡೆ, ವೃತ್ತಿಪರ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಮಳವಳ್ಳಿ ಸರ್ಕಾರಿ ಐಟಿಐ ಸಂಸ್ಥೆಯು 2026-27ನೇ ಸಾಲಿನ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್ಎಸ್ಎಲ್ಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿದೆ.
Mandya,Mandya,Karnataka

