Advertisement
Advertisement

Mandya Job: ಕೆ.ಆರ್.ಪೇಟೆ ವಿಶೇಷ ಚೇತನರ ಗಮನಕ್ಕೆ, ಸರ್ಕಾರಿ ಯೋಜನೆಯಡಿ ಉದ್ಯೋಗ ಪಡೆಯಲು ಇದೇ ಲಾಸ್ಟ್ ಚಾನ್ಸ್!

Whatsapp image 2026 05 06 at 9.41.29 am 2026 05 6b3d113d5474e0efbef5e98cbcc5e56d 1200x675.jpeg


Last Updated:

ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ, ಬಂಡಿಹೊಳೆ ಗ್ರಾಮಗಳಲ್ಲಿ ವಿಕಲಚೇತನರಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ, ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಅರ್ಜಿ ಮೇ 25ರೊಳಗೆ ಸಲ್ಲಿಸಬೇಕು

ಕರ್ನಾಟಕ ಸರ್ಕಾರಿ ಉದ್ಯೋಗ
ಕರ್ನಾಟಕ ಸರ್ಕಾರಿ ಉದ್ಯೋಗ

ಮಂಡ್ಯ: ಸೋಲು ಗೆಲುವಿನ ಸೋಪಾನ ಎಂಬ ಮಾತಿದೆ. ನೀವು ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ (Fail) ಈಗ ಗೌರವಯುತ ಸರ್ಕಾರಿ ಕೆಲಸ (Govt Job) ಪಡೆಯುವ ಅವಕಾಶ ನಿಮ್ಮ ಮುಂದಿದೆ. ವಿಶೇಷವಾಗಿ ವಿಕಲಚೇತನರಿಗಾಗಿ (Disabled People) ಕೆ.ಆರ್.ಪೇಟೆ (K R Pete) ತಾಲೂಕಿನಲ್ಲಿ ಹೊಸ ಉದ್ಯೋಗ ಭಾಗ್ಯದ ಬಾಗಿಲು ತೆರೆದಿದೆ. ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಮುರುಕನಹಳ್ಳಿ ಮತ್ತು ಬಂಡಿಹೊಳೆ ಪಂಚಾಯಿತಿಗಳಲ್ಲಿ ‘ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ’ (VRW) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ನಿಗದಿತ ಗೌರವಧನ ನೀಡಲಾಗುತ್ತದೆ.

ಅರ್ಹತೆಗಳೇನು?

ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರು ಅಥವಾ ಅನುತ್ತೀರ್ಣರಾದವರು (ಫೇಲಾದವರಿಗೂ ಅವಕಾಶವಿದೆ) ಅರ್ಜಿ ಸಲ್ಲಿಸಬಹುದು. 18 ರಿಂದ 45 ವರ್ಷದ ಒಳಗಿನವರಾಗಿರಬೇಕು.ಅಭ್ಯರ್ಥಿಗಳು ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಕಲಚೇತನರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ. ಆಸಕ್ತರು ತಡ ಮಾಡದೆ ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಬಸವರಾಜು.ಜಿ.ವಿ (ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು) ಅವರನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆಯಬಹುದು. ನಿಮ್ಮ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ಸಮಯದೊಳಗೆ ಸಲ್ಲಿಸುವುದು ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ ಇಂದೇ ಕರೆ ಮಾಡಿ

ಈ ಯೋಜನೆಯ ಬಗ್ಗೆ ಅಥವಾ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಗೊಂದಲಗಳಿದ್ದರೆ ತಕ್ಷಣವೇ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಮೊಬೈಲ್: 9900748434, ದೂರವಾಣಿ: 08232-239234.

ಮಳವಳ್ಳಿ ಐಟಿಐ ಪ್ರವೇಶಾತಿ

ಇನ್ನೊಂದೆಡೆ, ವೃತ್ತಿಪರ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಮಳವಳ್ಳಿ ಸರ್ಕಾರಿ ಐಟಿಐ ಸಂಸ್ಥೆಯು 2026-27ನೇ ಸಾಲಿನ ಪ್ರವೇಶಾತಿಗಾಗಿ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್‍ಎಸ್‍ಎಲ್‍ಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿದೆ.



Source link

Leave a Reply

Your email address will not be published. Required fields are marked *

TOP