Advertisement
Advertisement

KSOU: ಶುಲ್ಕ ತುಂಬಲು ಇದೇ ತಿಂಗಳು ಕೊನೆ ಅವಕಾಶ, ಇಲ್ಲದಿದ್ದರೆ ದಂಡ ನಿಕ್ಕಿ; KSOU ಹೊರಡಿಸಿದೆ ಅಧಿಸೂಚನೆ

Whatsapp image 2026 03 24 at 11.58.21 2026 03 22787add16ab9a764f8d7884731bb67d 1200x675.jpeg


Last Updated:

KSOU ಮೈಸೂರು 2001 2002 ರಿಂದ 2025 26 ರ ವಿದ್ಯಾರ್ಥಿಗಳಿಗೆ ಅಂತಿಮ ಶುಲ್ಕ ಪಾವತಿ ಅವಕಾಶ ಘೋಷಣೆ. March 30 ಗಡುವು April 6 ರವರೆಗೆ ದಂಡದೊಂದಿಗೆ ಅವಕಾಶ.

ಕೊನೆಯ ಅವಕಾಶ
ಕೊನೆಯ ಅವಕಾಶ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ವತಿಯಿಂದ ವಿವಿಧ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ (Fee) ಪಾವತಿಸಲು ಮಹತ್ವದ ಅಧಿಸೂಚನೆ ಪ್ರಕಟವಾಗಿದೆ. ವಿಶೇಷವಾಗಿ ಹಳೆಯ ವಿದ್ಯಾರ್ಥಿಗಳಿಗೆ ಇದು ಕೊನೆಯ ಅವಕಾಶವಾಗಿರುವುದರಿಂದ ಗಮನಾರ್ಹವಾಗಿದೆ.

ಯಾರಿಗೆ ಅನ್ವಯಿಸುತ್ತದೆ?

2001-2002ನೇ ಶೈಕ್ಷಣಿಕ ಸಾಲಿನಿಂದ 2014-15ರವರೆಗೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದು ಅನುತ್ತೀರ್ಣರಾದ ಅಥವಾ ಯಾವುದೇ ಕಾರಣಗಳಿಂದ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಇದೀಗ ಅಂತಿಮ ಅವಕಾಶ ನೀಡಲಾಗಿದೆ. ಈ ಅವಧಿಯ ವಿದ್ಯಾರ್ಥಿಗಳು ತಮ್ಮ ಬಾಕಿ ಉಳಿದಿರುವ ವಿಷಯಗಳಿಗೆ ಪರೀಕ್ಷೆ ಬರೆಯಲು ಶುಲ್ಕ ಪಾವತಿಸಬಹುದಾಗಿದೆ. ಇದರ ಜೊತೆಗೆ, 2018-19ರಿಂದ 2025-26 (ಜುಲೈ ಆವೃತ್ತಿ)ರವರೆಗೆ ಪ್ರವೇಶ ಪಡೆದಿರುವ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಈ ಅಧಿಸೂಚನೆ ಅನ್ವಯಿಸುತ್ತದೆ.

ಯೂನಿವರ್ಸಿಟಿಯ ತೀರ್ಮಾನವೇನು?

ಸಿಬಿಸಿಎಸ್ ಹಾಗೂ ನಾನ್-ಸಿಬಿಸಿಎಸ್ (CBCS/NON-CBCS) ಪಠ್ಯಕ್ರಮದಡಿ ಓದುತ್ತಿರುವ ಹೊಸ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ವಾರ್ಷಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ವಿವಿಧ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸಲು ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ.

ಇದೇ ತಿಂಗಳೊಳಗೆ ಶುಲ್ಕ ತುಂಬಿ

ಪರೀಕ್ಷಾ ಶುಲ್ಕ ಪಾವತಿಸಲು ಮಾರ್ಚ್ 30 ಅಂತಿಮ ದಿನಾಂಕವಾಗಿದ್ದು, ವಿದ್ಯಾರ್ಥಿಗಳು ಈ ಗಡುವಿನೊಳಗೆ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಗಡುವಿನ ನಂತರವೂ ₹200 ದಂಡ ಶುಲ್ಕದೊಂದಿಗೆ ಏಪ್ರಿಲ್ 6ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವಿಳಂಬವಿಲ್ಲದೆ ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ವಿಶ್ವವಿದ್ಯಾನಿಲಯ ಮನವಿ ಮಾಡಿದೆ.

ಸಂಪರ್ಕಿಸಬೇಕಾದ ವಿಳಾಸ

ಇದನ್ನೂ ಓದಿ: Good News: ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಅರ್ಜಿ ಇಂದೇ ಸಲ್ಲಿಸಿ!

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ಅನ್ನು ವೀಕ್ಷಿಸಬಹುದಾಗಿದೆ. ಜೊತೆಗೆ, ಶುಲ್ಕ ಪಾವತಿ ವೇಳೆ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 8690544544 ಅನ್ನು ಸಂಪರ್ಕಿಸಬಹುದಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಕುಲಸಚಿವ (ಪರೀಕ್ಷಾಂಗ) ಡಾ. ಸಿ. ಎಸ್. ಆನಂದ ಕುಮಾರ್ ಅವರು ವಿದ್ಯಾರ್ಥಿಗಳು ನೀಡಿರುವ ಈ ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಶೈಕ್ಷಣಿಕ ಪ್ರಗತಿಯನ್ನು ಮುಂದುವರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

TOP