Advertisement
Advertisement

Job Update: ಕಮ್ಮಿ ಕಲಿತರೂ ಸಿಗುತ್ತೆ ಸರ್ಕಾರಿ ಕೆಲಸ, ಅರ್ಜಿ ಸಲ್ಲಿಸಲು 11 ದಿನದ ಅವಕಾಶ; ನೀವೂ ಈ ಉದ್ಯೋಗ ಪಡೆಯಬಹುದಾ?

Whatsapp image 2026 05 14 at 11.20.00 2026 05 8b3a59b27b1b6f81e921317bd6f4e1e8 1200x675.jpeg


Last Updated:

ಮೈಸೂರು ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ವಿಕಲಚೇತನ ಸಮುದಾಯದಿಂದ ನೇಮಕಾತಿ, ಅರ್ಜಿ ಮೇ 25, 2026 ಒಳಗೆ, SSLC, UDID ಸೇರಿದಂತೆ ದಾಖಲೆ ಕಡ್ಡಾಯ

ಕೆಲಸದ ಅವಕಾಶ
ಕೆಲಸದ ಅವಕಾಶ

ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Woman and Children Welfare Department) ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿಯಾಗಿ, ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರ (Urban Rehabilitation Worker) ನೇಮಕಾತಿಗೆ ಅರ್ಜಿ ಆಹ್ವಾನಿಸಿವೆ. ಮೈಸೂರು (Mysuru) ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಛೇರಿ–01 ಮತ್ತು ವಲಯ ಕಛೇರಿ–07ರಲ್ಲಿ ಖಾಲಿ ಇರುವ ಹುದ್ದೆಗಳನ್ನು (Jobs) ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದ್ದು, ಈ ಯೋಜನೆ ಕರ್ನಾಟಕದಾದ್ಯಂತ ಜಾರಿಯಲ್ಲಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳೇನು?

ಈ ಯೋಜನೆಯ ಉದ್ದೇಶ ಕ್ಷೇತ್ರ ಮಟ್ಟದಲ್ಲಿ ಪಿಂಚಣಿ, UDID ಕಾರ್ಡ್, ತರಬೇತಿ, ಉದ್ಯೋಗ ಸೌಲಭ್ಯಗಳು, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳು ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದಾಗಿದೆ. ಆಯ್ಕೆಯಾಗುವ ಕಾರ್ಯಕರ್ತರು ಮನೆ ಮನೆ ಭೇಟಿ, ಜಾಗೃತಿ ಕಾರ್ಯಕ್ರಮಗಳು, ಅರ್ಜಿ ಸಹಾಯ, ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ಮತ್ತು ದಾಖಲಾತಿ ಕೆಲಸ ಮಾಡಲಿದ್ದಾರೆ. ವಿಕಲಚೇತನ ಸಮುದಾಯದಿಂದಲೇ ಕಾರ್ಯಕರ್ತರನ್ನು ನೇಮಿಸುವ ಮೂಲಕ ವಿಶ್ವಾಸಾರ್ಹತೆ ಮತ್ತು ಸಮುದಾಯ ಸಂಪರ್ಕ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂಬುದು ವಿಶೇಷ.

ಕೆಲಸ ಮಾಡಲು ಬೇಕಾದ ಪ್ರಮಾಣ ಪತ್ರಗಳೇನು?

ಅರ್ಜಿ ಸಲ್ಲಿಸಲು SSLC ಅಂಕಪಟ್ಟಿ, ವಯಸ್ಸು ಪುರಾವೆ (ಆಧಾರ್/ಶಾಲಾ ಪ್ರಮಾಣಪತ್ರ), ವಿಕಲಚೇತನ ಪ್ರಮಾಣಪತ್ರ (UDID), ಆಧಾರ್ ಕಾರ್ಡ್, 3 ಪಾಸ್‌ಪೋರ್ಟ್ ಸೈಜ್ ಫೋಟೋ, ವಾಸ್ತವ್ಯ ದೃಢೀಕರಣ (ರೇಷನ್ ಕಾರ್ಡ್/ವೋಟರ್ ID) ಮತ್ತು ಬ್ಯಾಂಕ್ ಖಾತೆ ವಿವರ ಅಗತ್ಯ. ಅರ್ಜಿ ನಮೂನೆಯನ್ನು ಮೇ 8 ರಿಂದ ಮೇ 22 ರ ನಡುವೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಪುಲಿಕೇಶಿ ರಸ್ತೆ, ತಿಲಕ್‌ನಗರ, ಮೈಸೂರಿನಿಂದ ಪಡೆಯಬಹುದು. ಸಂಪೂರ್ಣ ದಾಖಲೆಗಳೊಂದಿಗೆ ಭರ್ತಿ ಮಾಡಿ ಮೇ 25, 2026 ಸಂಜೆ 5:00 ಗಂಟೆಯೊಳಗೆ ಅದೇ ಕಚೇರಿಗೆ ಸಲ್ಲಿಸಬೇಕು.

ಸಂಪರ್ಕಿಸಬೇಕಾದ ವಿಳಾಸ ಯಾವುದು?

ಇದನ್ನೂ ಓದಿ: Feedback: ಮೈಸೂರು ನಂಬರ್ 1 ಆಗಬೇಕಾ? ಹಾಗಿದ್ರೆ ತಡಮಾಡಬೇಡಿ; ನಿಮ್ಮ ಸ್ಮಾರ್ಟ್‍ಫೋನ್ ಎತ್ತಿಕೊಳ್ಳಿ, ಈ 13 ಪ್ರಶ್ನೆಗಳಿಗೆ ಉತ್ತರಿಸಿ!

ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿ ಪರಿಶೀಲನೆ, ಸಂದರ್ಶನ ಅಥವಾ ಯೋಗ್ಯತಾ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಸಂದರ್ಶನಕ್ಕೆ ತಯಾರಾಗುವಾಗ ಸಮುದಾಯ ಸೇವೆ, ವಿಕಲಚೇತನರ ಸಮಸ್ಯೆಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುವಲ್ಲಿ ಈ ಕಾರ್ಯಕರ್ತರ ಪಾತ್ರ ನಿರ್ಣಾಯಕ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0821-2490333 ಸಂಖ್ಯೆಗೆ ಸಂಪರ್ಕಿಸಬಹುದು.



Source link

Leave a Reply

Your email address will not be published. Required fields are marked *

TOP