Last Updated:
ಕರ್ನಾಟಕ ಸರ್ಕಾರ 2026-27ರಿಂದ 700 ಸರ್ಕಾರಿ ಶಾಲೆಗಳಲ್ಲಿ ಒಂಬತ್ತನೇ ತರಗತಿಯಿಂದಲೇ ಕಂಪ್ಯೂಟರ್ ಕಡ್ಡಾಯ, 2500 ಐಟಿ ಶಿಕ್ಷಕರ ಹುದ್ದೆ, ಹಳೆಯ PST ಹುದ್ದೆಗಳನ್ನು ಪರಿವರ್ತನೆ
ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳ (Government School) ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹತ್ತರ ಬದಲಾವಣೆಯೊಂದಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ! ಹೌದು, ಇನ್ಮುಂದೆ ನಮ್ಮ ಸರ್ಕಾರಿ ಶಾಲೆಯ ಬಡ ಮಕ್ಕಳು ಕೂಡ ಖಾಸಗಿ ಕಾನ್ವೆಂಟ್ ಮಕ್ಕಳಂತೆ ಹೈಟೆಕ್ (Hi-Tech) ಆಗಲಿದ್ದಾರೆ. 2026-27ನೇ ಸಾಲಿನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಶಾಲೆಗಳಲ್ಲಿ ಭರ್ಜರಿ ಕಂಪ್ಯೂಟರ್ ಕ್ರಾಂತಿ (Computer Revolution) ಆರಂಭವಾಗಲಿದ್ದು, ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜೂನ್ 8, 2026ರಂದು ಅತ್ಯಂತ ಮಹತ್ವದ ಅಧಿಕೃತ ಆದೇಶವನ್ನು (Important Notice) ಹೊರಡಿಸಿದೆ!
ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ’ (KPS) ಮೇಲ್ದರ್ಜೆಗೇರಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ 200 ಶಾಲೆಗಳು ಹಾಗೂ ರಾಜ್ಯದ ಇತರೆಡೆಯ 500 ಶಾಲೆಗಳು ಸೇರಿದಂತೆ ಒಟ್ಟು 700 ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯವಾಗಿ ಪರಿಚಯಿಸಲಾಗುತ್ತಿದೆ. ಬಡ ಮಕ್ಕಳೂ ಕೂಡ ಡಿಜಿಟಲ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರಬೇಕು ಎನ್ನುವುದು ಸರ್ಕಾರದ ಈ ಅದ್ಭುತ ಯೋಜನೆಯ ಹಿಂದಿನ ಅಸಲಿ ರಹಸ್ಯ!3 ನೇ ತರಗತಿಯಿಂದ AI ಕೂಡ ಕಲಿಸಲಾಗುತ್ತಿದೆ. ಇದಕ್ಕೆ ಅಗತ್ಯವಾಗಿರುವ ಶಿಕ್ಷಕರ ನೇಮಕಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ʻಕಂಪ್ಯೂಟರ್ ಸೈನ್ಸ್ ಶಿಕ್ಷಕರʼ ವೃಂದ ರಚಿಸಿ ಆದೇಶ ಹೊರಡಿಸಿದೆ. ಈ ಹೊಸ ಶಿಕ್ಷಕರ ವೃಂದಕ್ಕಾಗಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ (Cadre & Recruitment – C&R) ನಿಯಮಗಳನ್ನು ಇಲಾಖೆ ರೂಪಿಸುತ್ತಿದೆ
ಪ್ರಮುಖ ಮುಖ್ಯಾಂಶಗಳು – ನೀವು ತಿಳಿಯಲೇಬೇಕಾದ ಮಾಹಿತಿ
- 2,500 ಐಟಿ ಶಿಕ್ಷಕರ ಹುದ್ದೆಗಳು: ಕಂಪ್ಯೂಟರ್ ಕಲಿಸಲು ರಾಜ್ಯಾದ್ಯಂತ ಬರೋಬ್ಬರಿ 2,500 ಹೊಸ “ಮಾಹಿತಿ ತಂತ್ರಜ್ಞಾನ (IT) ಶಿಕ್ಷಕರ” ವೃಂದವನ್ನು ಸೃಷ್ಟಿಸಲಾಗುತ್ತಿದೆ.
- ಬಂಪರ್ ಸಂಬಳ: ಈ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿರುವ ಆರಂಭಿಕ ವೇತನ ಶ್ರೇಣಿ ರೂ. 44,425 ರಿಂದ ರೂ. 83,700 ರೂಪಾಯಿ!
- ಹೆಚ್ಚುವರಿ ಅನುದಾನ: ಈ ಹೈಟೆಕ್ ಶಿಕ್ಷಕರ ನೇಮಕಕ್ಕಾಗಿ ಸರ್ಕಾರವು ವಾರ್ಷಿಕವಾಗಿ ಬರೋಬ್ಬರಿ ರೂ. 1141.50 ಲಕ್ಷಗಳನ್ನು (ಅಂದಾಜು 11.41 ಕೋಟಿ ರೂ.) ಹೆಚ್ಚುವರಿಯಾಗಿ ಖರ್ಚು ಮಾಡಲು ಮುಂದಾಗಿದೆ!
ಈ ಹೊಸ ಮಾಹಿತಿ ತಂತ್ರಜ್ಞಾನ ಶಿಕ್ಷಕರ ವೃಂದಕ್ಕೆ ಪ್ರತ್ಯೇಕವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು (C&R Rules) ಶೀಘ್ರದಲ್ಲೇ ರಚಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮಹತ್ವದ ನಿರ್ಧಾರಕ್ಕೆ ಕಾನೂನು ಇಲಾಖೆ (14.05.2026), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (20.05.2026) ಹಾಗೂ ಆರ್ಥಿಕ ಇಲಾಖೆಯು (06.06.2026) ಈಗಾಗಲೇ ಸಂಪೂರ್ಣ ಹಸಿರು ನಿಶಾನೆ ತೋರಿಸಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಈ ಐತಿಹಾಸಿಕ ಆದೇಶಕ್ಕೆ ಸಹಿ ಹಾಕಿದ್ದು, ಇಡೀ ರಾಜ್ಯದ ಶಿಕ್ಷಣ ವಲಯದಲ್ಲಿ ಈ ಸುದ್ದಿ ಈಗ ಸಂಚಲನ ಮೂಡಿಸಿದೆ. ಸರ್ಕಾರಿ ಶಾಲಾ ಮಕ್ಕಳ ಪೋಷಕರಲ್ಲಿ ಈಗ ಹೊಸ ಭರವಸೆ ಮೂಡಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ!
ವಿದ್ಯಾಹರ್ತೆ ಏನು?
ಸದ್ಯದ ಮಟ್ಟಿಗೆ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಹಾಗೂ ಬಿಸಿಎ ಪದವೀಧರರನ್ನು ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ಹಾಗೆಯೇ ಇವರಿಗೂ ಟಿಇಟಿ ಪರೀಕ್ಷೆ ಮಾನ್ಯಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಸಾಫ್ಟ್ವೇರ್ ಇಂಜಿನಿಯರ್ಗಳು ಮಾಧ್ಯಮಿಕ (6-8 Or ಮುಂದಿನ ಹಂತ) ಹಾಗೂ 1 ರಿಂದ 5ರವರೆಗೆ ಕಂಪ್ಯೂಟರ್ ಸೈನ್ಸ್ ಹಾಗೂ ಅಪ್ಲಿಕೇಶನ್ ಪದವೀಧರರು ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ವರದಿ ಆಧಾರ: ಕರ್ನಾಟಕ ಸರ್ಕಾರದ ಅಧಿಕೃತ ನಡವಳಿಗಳು ಮತ್ತು ಆದೇಶದ ಪ್ರತಿ (ದಿನಾಂಕ: 08.06.2026)
Bangalore [Bangalore],Bangalore,Karnataka

