Last Updated:
ನಂಜನಗೂಡು ಅಂಚೆ ಇಲಾಖೆ ಏಪ್ರಿಲ್ 28ರಂದು ಪಿಎಲ್ಐ ಆರ್ಪಿಎಲ್ಐ ನೇರ ಪ್ರತಿನಿಧಿಗಳ ವಾಕ್ ಇನ್ ಇಂಟರ್ವ್ಯೂ, ಎಸ್ಎಸ್ಎಲ್ಸಿ ಪಾಸ್ ಸ್ಥಳೀಯ ನಿರುದ್ಯೋಗಿಗಳಿಗೆ ಕಮಿಷನ್ ಆಧಾರಿತ ಅವಕಾಶ
ಮೈಸೂರು: ನಿರುದ್ಯೋಗದಿಂದ (Unemployment) ಕಂಗೆಟ್ಟಿದ್ದೀರಾ? ಕೈಯಲ್ಲಿ ಬಿಡಿಗಾಸಿಲ್ಲ ಅಂತಾ ಚಿಂತೆ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲೊಂದು ಬಂಪರ್ ಆಫರ್ (Offer) ಕಾದಿದೆ! ಕೇಂದ್ರ ಸರ್ಕಾರದ ವಿಶ್ವಾಸಾರ್ಹ ಅಂಚೆ ಇಲಾಖೆ ಇದೀಗ ನಂಜನಗೂಡು ಮತ್ತು ಟಿ. ನರಸೀಪುರ ಭಾಗದ ಜನರಿಗೆ (People) ಭರ್ಜರಿ ಉದ್ಯೋಗಾವಕಾಶವೊಂದನ್ನು ಒದಗಿಸಿದೆ.
ಯಾವುದೇ ಮುಂಗಡ ಅರ್ಜಿ ಹಾಕುವ, ಪರೀಕ್ಷೆ ಬರೆಯುವ ತಲೆಬಿಸಿಯೇ ಇಲ್ಲದೆ ನೇರವಾಗಿ ಕೆಲಸ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶ ನಿಮ್ಮದಾಗಲಿದೆ. ಕೇವಲ ಎಸ್.ಎಸ್.ಎಲ್.ಸಿ (SSLC) ಪಾಸ್ ಆದವರಿಗೂ ಸರ್ಕಾರದ ವಿಶ್ವಾಸಾರ್ಹ ಸಂಸ್ಥೆಯೊಂದಿಗೆ ಕೈಜೋಡಿಸಿ ಕಮಿಷನ್ ಆಧಾರದ ಮೇಲೆ ಕೈತುಂಬಾ ಆದಾಯ ಗಳಿಸುವ ಈ ‘ಮೆಗಾ ಆಫರ್’ ಬಗ್ಗೆ ಕೇಳಿದ್ರೆ ನೀವು ಈಗಲೇ ರೆಡಿಯಾಗ್ತೀರಾ!
ಯಾರೆಲ್ಲಾ ಈ ಅವಕಾಶ ಬಳಸಿಕೊಳ್ಳಬಹುದು ಅಂತಾ ಕೇಳ್ತಿದ್ದೀರಾ? ನಿರುದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ಬೇರೆ ವಿಮಾ ಕಂಪನಿಗಳ ಮಾಜಿ ಏಜೆಂಟ್ಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಅಷ್ಟೇ ಏಕೆ ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು ಮತ್ತು ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ (GDS) ಸಹ ಈ ಕೆಲಸಕ್ಕೆ ಸೇರಬಹುದು. ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ನಂಜನಗೂಡು ಅಥವಾ ಟಿ. ನರಸೀಪುರ ತಾಲೂಕುಗಳಲ್ಲಿ ಯಾವುದಾದರೂ ಒಂದರ ಕಡ್ಡಾಯ ವಿಳಾಸ ಹೊಂದಿರುವ, ಸ್ಥಳೀಯರಿಗೆ ಇಲ್ಲಿ ಮೊದಲ ಆದ್ಯತೆ ಸಿಗಲಿದೆ.
ಏನೆಲ್ಲಾ ಪ್ರಮಾಣಪತ್ರಗಳು ಬೇಕು?
ಈ ಭರ್ಜರಿ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಂದ್ರೆ, ನೀವು ಸಂದರ್ಶನಕ್ಕೆ ಹೋಗುವಾಗ ಕಡ್ಡಾಯವಾಗಿ ನಿಮ್ಮ ಎಸ್.ಎಸ್.ಎಲ್.ಸಿ (SSLC) ಅಂಕಪಟ್ಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇತ್ತೀಚಿನ 3 ಪಾಸ್ಪೋರ್ಟ್ ಸೈಜ್ ಫೋಟೋಗಳು ಮತ್ತು ₹500 ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು (NSC) ಮರೆಯದೆ ತೆಗೆದುಕೊಂಡು ಹೋಗಬೇಕು. ಸರ್ಕಾರದ ಭರವಸೆಯ ವಿಮಾ ಸೇವೆಗಳೊಂದಿಗೆ ಸ್ವ-ಉದ್ಯೋಗದ ಜೊತೆಗೆ ಕಮಿಷನ್ ರೂಪದಲ್ಲಿ ಭರ್ಜರಿ ಆದಾಯ ಗಳಿಸುವ ಈ ಬೆಸ್ಟ್ ಚಾನ್ಸ್ ಅನ್ನು ಯಾವುದೇ ಕಾರಣಕ್ಕೂ ಕೈಚೆಲ್ಲಬೇಡಿ. ಏಪ್ರಿಲ್ 28ರಂದು ಅಗತ್ಯ ದಾಖಲೆಗಳೊಂದಿಗೆ ನಂಜನಗೂಡು ಅಂಚೆ ಕಚೇರಿಗೆ ನೇರವಾಗಿ ಭೇಟಿ ಕೊಡಿ!
Mysore,Mysore,Karnataka

