Last Updated:
ಮಂಡ್ಯದ ಸಂತೋಷ್ ಅವರ ಮಂಡ್ಯ ಗೌಡಾಸ್ ಯೂಟ್ಯೂಬ್ ಚಾನೆಲ್ ಮೂಲಕ ಉಚಿತ ನವೋದಯ ಕೋಚಿಂಗ್, 2 ವರ್ಷದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ನವೋದಯ ಸೀಟು ಪಡೆದಿದ್ದಾರೆ.
ಮಂಡ್ಯ: ತಮ್ಮ ಮಕ್ಕಳು ನವೋದಯ (navodaya) ಅಥವಾ ಸೈನಿಕ ಶಾಲೆಯಲ್ಲಿ ಸೀಟು ಪಡೆಯಬೇಕು ಅನ್ನೋದು ಪ್ರತಿಯೊಬ್ಬ ಪೋಷಕರ ಕನಸು. ಇದಕ್ಕಾಗಿಯೇ ಸಾವಿರಾರು ರೂಪಾಯಿ ಫೀಸ್ (Fees) ಕಟ್ಟಿ ಕೋಚಿಂಗ್ ಕ್ಲಾಸ್ಗಳಿಗೆ ಮಕ್ಕಳನ್ನು ಅಲೆದಾಡಿಸ್ತಾರೆ. ಆದರೆ, ಮಂಡ್ಯದ ಈ ಯುವಕ ಮಾತ್ರ ಬಡವರ ಮಕ್ಕಳು (Children) ನವೋದಯ ಸೀಟು ಪಡೆಯಲಿ ಅಂತ ಅತಿ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಇವರು ಮಾಡಿದ ಆ ಒಂದು ಕೆಲಸಕ್ಕೆ ಇಂದು ರಾಜ್ಯದ ಮೂಲೆ ಮೂಲೆಗಳಿಂದ ನವೋದಯ ಸೀಟು ಪಡೆದ ಮಕ್ಕಳು ಧನ್ಯವಾದ ಹೇಳ್ತಿದ್ದಾರೆ. ಅಷ್ಟಕ್ಕೂ ಯೂಟ್ಯೂಬ್ (Youtube) ಮೂಲಕ ಈ ಯುವಕ ಮಾಡಿರುವ ಮ್ಯಾಜಿಕ್ ಆದರೂ ಏನು? ಈ ಕಂಪ್ಲೀಟ್ ಸ್ಟೋರಿ ನೋಡಿ.
ಸಂತೋಷ್ ಅವರ ಈ ಪ್ರಯತ್ನಕ್ಕೆ ಈಗ ಸಿಕ್ಕಿರುವ ರಿಸಲ್ಟ್ ನೋಡಿ ಇಡೀ ರಾಜ್ಯವೇ ದಂಗಾಗಿದೆ. ಕಳೆದ ವರ್ಷ ಇವರಿಂದ ತರಬೇತಿ ಪಡೆದ 9ಕ್ಕೂ ಹೆಚ್ಚು ಮಕ್ಕಳು ನವೋದಯ ಸೀಟು ಪಡೆದಿದ್ದರೆ, ಈ ಬಾರಿ ಬರೋಬ್ಬರಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ನಾನಾ ಜಿಲ್ಲೆಗಳಿಂದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಅಚ್ಚರಿಯ ವಿಷಯ ಎಂದರೆ, ಈ ಮಕ್ಕಳು ಯಾವುದೇ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ಗೆ ಹೋಗದೆ ಕೇವಲ ಆನ್ಲೈನ್ ಪಾಠ ನೋಡಿ ಈ ಸಾಧನೆ ಮಾಡಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳಿಗೂ ಸಮಾನ ಶಿಕ್ಷಣದ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸಂತೋಷ್ ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ತಾಂತ್ರಿಕ ಪದವೀಧರರಾಗಿ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ಇವರ ಹಂಬಲ ಇಂದು ಹತ್ತಾರು ಬಡ ಮಕ್ಕಳ ಭವಿಷ್ಯ ರೂಪಿಸಿದೆ. ಸದ್ಯ ಯಶಸ್ಸು ಕಂಡ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಂತೋಷ್ ಅವರಿಗೆ ಧನ್ಯವಾದಗಳ ಮಹಾಪೂರವೇ ಹರಿದು ಬರುತ್ತಿದೆ.
ಯುವಕನ ನಿಸ್ವಾರ್ಥ ಸೇವೆಗೆ ಹ್ಯಾಟ್ಸಾಫ್ ಎಂದ ಜನ
Mandya,Mandya,Karnataka
