Last Updated:
ಚಿತ್ರದುರ್ಗದ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ನ್ಯಾಯಾಲಯಗಳಲ್ಲಿ Additional Government Advocate ಹುದ್ದೆಗೆ ನೇಮಕಾತಿ ಘೋಷಣೆ, 7 ವರ್ಷ ಅನುಭವದ ವಕೀಲರಿಗೆ ಅವಕಾಶ.
ಚಿತ್ರದುರ್ಗ: ಕೋರ್ಟ್ (Court) ಮೆಟ್ಟಿಲೇರಿ ವಾದ ಮಂಡಿಸುವ ವಕೀಲರಿಗೆ ಈಗ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ (Good News) ಸಿಕ್ಕಿದೆ! ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳ ಹಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಖಾಲಿ ಇರುವ ಅಪರ ಸರ್ಕಾರಿ ವಕೀಲರ (Additional Government Advocate) ಹುದ್ದೆಗಳ ಭರ್ತಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ವಕೀಲ ಸಮುದಾಯದಿಂದ ಈಗಲೇ ಪೈಪೋಟಿ ಶುರುವಾಗಿದ್ದು, ಅರ್ಜಿ (Application) ಸಲ್ಲಿಸಲು ಕೌಂಟ್ಡೌನ್ ಆರಂಭವಾಗಿದೆ.
ಕರ್ನಾಟಕ ಕಾನೂನು ಅಧಿಕಾರಿಗಳ ನಿಯಮ 1977ರ ಅನ್ವಯ, ಈ ನೇಮಕಾತಿಯನ್ನು ಮಾಡಲಾಗುತ್ತಿದೆ. ನೀವು ಕನಿಷ್ಠ 7 ವರ್ಷಗಳ ಕಾಲ ಯಶಸ್ವಿಯಾಗಿ ವಕೀಲಿ ವೃತ್ತಿ ನಡೆಸಿದ ಅನುಭವ ಹೊಂದಿದ್ದರೆ, ಈ ಹುದ್ದೆ ನಿಮ್ಮದಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಈ ಜವಾಬ್ದಾರಿಯನ್ನು ನೀಡಲಾಗುತ್ತದೆ. ಪ್ರಸ್ತುತ ಈ ತಾಲ್ಲೂಕುಗಳಲ್ಲಿ ನೇಮಕಾತಿ ಅವಧಿಯು ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಲ್ಲಿಗೆ ಹೋಗಬೇಕು?
ಅರ್ಜಿ ನಮೂನೆ ಎಲ್ಲಿ ಸಿಗುತ್ತದೆ? ಯಾವೆಲ್ಲಾ ದಾಖಲೆಗಳು ಬೇಕು? ಎಂಬ ಗೊಂದಲವಿದ್ದರೆ ತಲೆ ಕೆಡಿಸಿಕೊಳ್ಳಬೇಡಿ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿರುವಂತೆ, ಕಚೇರಿಯ ಕೆಲಸದ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬಹುದು. ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಲ್ಲ ಈ ಅವಕಾಶವನ್ನು ಕೈಚೆಲ್ಲಬೇಡಿ. ತಕ್ಷಣವೇ ಸಿದ್ಧತೆ ನಡೆಸಿ ಮತ್ತು ಈ ಸುದ್ದಿಯನ್ನು ನಿಮ್ಮ ವಕೀಲ ಮಿತ್ರರಿಗೂ ಶೇರ್ ಮಾಡಿ!
Chitradurga,Chitradurga,Karnataka

