Advertisement
Advertisement

Agriculture Jobs 2026: ಪದವೀಧರರಿಗೆ ಗುಡ್ ನ್ಯೂಸ್! 14 ಸರ್ಕಾರಿ ಹುದ್ದೆಗಳ ನೇಮಕಾತಿ, ಜೂನ್ 30ರೊಳಗೆ ಅರ್ಜಿ ಸಲ್ಲಿಸಿ

WhatsApp Image 2026 06 27 at 15.32.09 2026 06 14c3450f93ae790068e0d7f68af3274c 1200x675.jpeg


Last Updated:

ಅರ್ಜಿ ಸಲ್ಲಿಸಲು ಜೂನ್ 30, ಸಂಜೆ 5.30 ಗಂಟೆಯವರೆಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.

ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ

ಚಿಕ್ಕಮಗಳೂರು: ಕೃಷಿ ಮತ್ತು ತೋಟಗಾರಿಕೆ ಪದವೀಧರರಿಗೆ ಸರ್ಕಾರಿ ಉದ್ಯೋಗದ (Government Job) ಕನಸು ಇದ್ದರೆ ಈ ಸುದ್ದಿ ನಿಮಗಾಗಿಯೇ ಇದೆ! ಆತ್ಮ (ATMA) ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಒಟ್ಟು 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30, ಸಂಜೆ 5.30 ಗಂಟೆ ಕೊನೆಯ ಗಡುವು ಆಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಇನ್ನು ತಡ ಮಾಡದೆ ಅರ್ಜಿ ಸಲ್ಲಿಸಬೇಕು.

ಎಷ್ಟು ಉದ್ಯೋಗ ಖಾಲಿ? ಎಲ್ಲೆಲ್ಲಿ ಖಾಲಿ ಇದೆ?

ಈ 14 ಹುದ್ದೆಗಳಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ (BTM) ಹುದ್ದೆಗಳು 2 ಇದ್ದು, ಅಜ್ಜಂಪುರ ಮತ್ತು ಕಳಸ ತಾಲ್ಲೂಕಿನಲ್ಲಿ ತಲಾ ಒಂದು ಹುದ್ದೆ ಇದೆ. ಉಳಿದ 12 ಹುದ್ದೆಗಳು ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಹುದ್ದೆಗಳಾಗಿದ್ದು, ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಅಂಬಳೆ, ಆವುತಿ, ಜಾಗರ ಮತ್ತು ಖಾಂಡ್ಯ ಹೋಬಳಿಗಳಲ್ಲಿ 5, ಮೂಡಿಗೆರೆ ತಾಲ್ಲೂಕಿನ ಕಸಬಾ ಮತ್ತು ಬಾಳೂರು ಹೋಬಳಿಗಳಲ್ಲಿ 2, ಕೊಪ್ಪ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1, ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1, ತರೀಕೆರೆ ತಾಲ್ಲೂಕಿನ ಕಸಬಾ ಮತ್ತು ಲಕ್ಕವಳ್ಳಿ ಹೋಬಳಿಗಳಲ್ಲಿ 2, ಹಾಗೂ ಲಿಂಗದಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ 1 ಹುದ್ದೆ ಇದೆ.

ವಿದ್ಯಾರ್ಹತೆ ಏನು?

ವಿದ್ಯಾರ್ಹತೆ ವಿಷಯಕ್ಕೆ ಬಂದರೆ, BTM ಹುದ್ದೆಗೆ ಎಂ.ಎಸ್‌ಸಿ (ಕೃಷಿ) ಅಥವಾ ಎಂ.ಎಸ್‌ಸಿ (ತೋಟಗಾರಿಕೆ) ಪದವಿ ಅಗತ್ಯ. ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ ಮತ್ತು ಕೃಷಿ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಇರಬೇಕು. ಕೃಷಿ ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ. ATM ಹುದ್ದೆಗೆ ಬಿ.ಎಸ್‌ಸಿ (ಕೃಷಿ) ಅಥವಾ ಬಿ.ಎಸ್‌ಸಿ (ತೋಟಗಾರಿಕೆ) ಪದವಿ ಸಾಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಕನಿಷ್ಠ 1 ವರ್ಷದ ಅನುಭವ ಬೇಕು. ಸ್ಥಳೀಯ ಕೃಷಿ ಪದವೀಧರರಿಗೆ ಆದ್ಯತೆ ಇದೆ.

ಅರ್ಜಿ ಸಲ್ಲಿಸಲು ಇಲ್ಲಿದೆ ವಿಳಾಸ



Source link

Leave a Reply

Your email address will not be published. Required fields are marked *

TOP