Last Updated:
Success Story: ನಮ್ಮ ಪ್ರತಿಯೊಂದು ಕೆಲಸದಲ್ಲೂ ನಾವು ಹೋಗುವ ದಾರಿಯಲ್ಲೂ ದೇವರ ಆಶೀರ್ವಾದವಿರಬೇಕು, ಆತನ ಕೃಪಾಕಟಾಕ್ಷ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆಸ್ತಿಕರಾಗಿರಬಹುದು, ನಾಸ್ತಿಕರಾಗಿರಬಹುದು ದೇವರು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧವಾಗಿ ದಾರಿ ತೋರಿಸುತ್ತಿರುತ್ತಾರೆ. ಆ ಕುರಿತ ವರದಿ ಇಲ್ಲಿದೆ:
Success Story: ನಮ್ಮ ಪ್ರತಿಯೊಂದು ಕೆಲಸದಲ್ಲೂ ನಾವು ಹೋಗುವ ದಾರಿಯಲ್ಲೂ ದೇವರ (God) ಆಶೀರ್ವಾದವಿರಬೇಕು, ಆತನ ಕೃಪಾಕಟಾಕ್ಷ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆಸ್ತಿಕರಾಗಿರಬಹುದು, ನಾಸ್ತಿಕರಾಗಿರಬಹುದು ದೇವರು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧವಾಗಿ ದಾರಿ ತೋರಿಸುತ್ತಿರುತ್ತಾರೆ. ಹಿರಿಯ ಶಸ್ತ್ರಚಿಕಿತ್ಸಾ (Senior Surgical) ಆಂಕೊಲಾಜಿಸ್ಟ್ (Oncologist) ಡಾ. ಆಂಥೋನಿ ಪೈಸ್ (Dr. Anthony Pais) ಕೂಡ ದೇವರ ಚಿತ್ತವಿಲ್ಲದೆ ಯಾವುದೂ ನಡೆಯುವುದಿಲ್ಲ ಎಂಬ ದೃಢ ನಂಬಿಕೆಯುಳ್ಳವರಾಗಿದ್ದಾರೆ. ಅನುಭವ, ಹೆಸರು, ಕೀರ್ತಿ ಇದ್ದರೂ ಅವರು ದೇವರಿಗೆ ವಿಧೇಯರಾಗಿದ್ದಾರೆ. ಯಾವುದೇ ಶಸ್ತ್ರಚಿಕಿತ್ಸೆ ಇರಲಿ ಅವರು ಸರ್ವಶಕ್ತನನ್ನು ವಂದಿಸಿಯೇ ಮುಂದಡಿ ಇಡುತ್ತಾರೆ ಎನ್ನುತ್ತಾರೆ.
35 ವರ್ಷಗಳ ಅನುಭವ ಹೊಂದಿರುವ ಹಿರಿಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ. ಆಂಥೋನಿ ಪೈಸ್ ಭಾರತದ ಪ್ರಮುಖ ಕ್ಯಾನ್ಸರ್ ಕೇಂದ್ರಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದಾರೆ. ಶಿಕ್ಷಣ ಪಡೆಯುತ್ತಿರುವ ಸಮಯದಲ್ಲೇ ಸೇಂಟ್ ಜಾನ್ಸ್, ಗಲ್ಫ್ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡರು. ಅನುಭವಿ ವೈದ್ಯರಾದ ಡಾ. ದೇವಿ ಶೆಟ್ಟಿ ಅವರ ಅಡಿಯಲ್ಲಿ ಪಳಗಿದ್ದಾರೆ. ಹತ್ತು ವರ್ಷಗಳ ಕಾಲ ಅವರು ದೇವಿ ಶೆಟ್ಟಿ ಅಡಿಯಲ್ಲಿ ವೈದ್ಯಕೀಯ ರಂಗದ ಏರಿಳಿತಗಳನ್ನು ಕಂಡಿದ್ದಾರೆ. ಆಂಥೋನಿ ದೇವರನ್ನು ತುಂಬಾ ನಂಬುತ್ತಾರೆ ಹಾಗೂ ತಾನು ಮಾಡುವ ಪ್ರತಿಯೊಂದು ಕೆಲಸಗಳಲ್ಲೂ ದೇವರಿದ್ದಾರೆ ಎಂದು ಭಾವಿಸುವವರಾಗಿದ್ದಾರೆ.
ಡಾ. ಪೈಸ್ ಆರಂಭದಲ್ಲಿಯೇ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಬದ್ಧರಾಗಿದ್ದರು. ಅದುವೇ ಶಸ್ತ್ರಚಿಕಿತ್ಸಾ ಆಂಕೊಲಾಜಿ, ಈ ಕ್ಷೇತ್ರದ ಮೇಲೆ ಹೆಚ್ಚಿನ ಆಸಕ್ತಿಯನ್ನು ಪೈಸ್ ವಹಿಸಿದ್ದರು. ತಮ್ಮ ಅನುಭವದೊಂದಿಗೆ ಕ್ಯಾಥೋಲಿಕ್ ನಂಬಿಕೆಗೆ ಸಂಬಂಧಿಸಿದ ನೀತಿಶಾಸ್ತ್ರ ಮತ್ತು ತತ್ವಗಳಿಗೆ ತಾವು ಬದ್ಧನಾಗಿರುವುದೇ ಸಾಕಷ್ಟು ಬೆಳೆಯಲು ಅನುಕೂಲಕರವಾಗಿದೆ ಎನ್ನುತ್ತಾರೆ. ಆಂಥೋನಿ ಪೈಸ್ ಅನುಭವಿ ಶಸ್ತ್ರಚಿಕಿತ್ಸಕರಾಗುವ ಮೊದಲು ತಮ್ಮ ಅತ್ಯಂತ ನಿರ್ಣಾಯಕ ವೃತ್ತಿಪರ ಪಾಠವನ್ನು ಆಸ್ಪತ್ರೆಯಲ್ಲಿ ಅಲ್ಲ ಬದಲಿಗೆ ಗ್ಯಾರೇಜ್ನಲ್ಲಿ ಬಹಳಷ್ಟು ಪಾಠಗಳನ್ನು ಕಲಿತರು ಇದು ಆಶ್ಚರ್ಯಕಾರಿಯಾದರೂ ಕುತೂಹಲಕಾರಿಯಾಗಿದೆ.
ಅವರು ತಂಗಿದ್ದ ಕೊಠಡಿ ಗ್ಯಾರೇಜ್ಗೆ ಹತ್ತಿರವಾಗಿತ್ತು ಅಲ್ಲಿ ಉನ್ನತ ಮಟ್ಟದ ಕಾರುಗಳನ್ನು ಮಾತ್ರ ಸರಿಪಡಿಸಲಾಗುತ್ತಿತ್ತು ಮರ್ಸಿಡಿಸ್ ಹಾಗೂ ಬೆಂಜ್ ಕಾರುಗಳನ್ನು ರಿಪೇರಿ ಮಾಡಲಾಗುತ್ತಿತ್ತು. ಇದು ಅವರ ಯೋಚನೆಗಳನ್ನು ಬದಲಾಯಿಸಿತು. ಎಲ್ಲವನ್ನೂ ಎಲ್ಲರೂ ಮಾಡಲು ಸಾಧ್ಯವಿಲ್ಲ ಎಂಬ ಪಾಠವನ್ನು ಪೈಸ್ ತಿಳಿದುಕೊಂಡರು. ಹಾಗಾಗಿ ತಾನು ಒಬ್ಬ ಸೂಪರ್ಸ್ಪೆಷಾಲಿಸ್ಟ್ ಆಗಬೇಕೆಂದು ನಿರ್ಣಯಿಸಿಕೊಂಡರು.
ಅವರ ತಂದೆಯ ಚಿಕ್ಕಪ್ಪ ವೈದ್ಯರಾಗಿದ್ದರು ಜೊತೆಗೆ ಅವರ ಶಾಲೆಯ ವಿಜ್ಞಾನ ಶಿಕ್ಷಕರು ಕೂಡ ಆಂಥೋನಿಯವರ ಕಲಿಕೆಗೆ ಸಾಥ್ ನೀಡಿದರು. ಅವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜನ್ನು ತಲುಪುವ ಹೊತ್ತಿಗೆ, ಅವರಿಗೆ ಒಂದು ಸ್ಥಿರವಾದ ಉದ್ದೇಶವಿತ್ತು. ಬಾಲ್ಯದಲ್ಲಿಯೇ ಇರಿಸಿಕೊಂಡಿದ್ದ ದೃಷ್ಟಿಕೋನವನ್ನು ಅವರು ಕಾರ್ಯಗತಗೊಳಿಸುತ್ತಿದ್ದರು. ಪದವಿ ಪಡೆದ ನಂತರ, ಅವರು ಹೆಚ್ಚಿನ ಶಸ್ತ್ರಚಿಕಿತ್ಸಕರು ಮಾತ್ರ ಪ್ರವೇಶಿಸಲು ಕನಸು ಕಾಣುವ ಸಂಸ್ಥೆಗಳಾದ ಟಾಟಾ ಮೆಮೋರಿಯಲ್ ಆಸ್ಪತ್ರೆ ಮತ್ತು ಕಿದ್ವಾಯಿ ಸಂಸ್ಥೆಯಲ್ಲಿ ಸುಮಾರು ಎಂಟು ವರ್ಷಗಳ ತೀವ್ರವಾದ ಕ್ಯಾನ್ಸರ್ ತರಬೇತಿಯನ್ನು ಪ್ರಾರಂಭಿಸಿದರು.
ವೈದ್ಯಕೀಯ, ವ್ಯವಹಾರ, ಎಂಜಿನಿಯರಿಂಗ್ – ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸುವ ಯುವ ಕ್ಯಾಥೊಲಿಕರು ವೃತ್ತಿಪರ ಜೀವನದಲ್ಲಿ ದೇವರ ಮೇಲೆ ನಂಬಿಕೆ ಇರಿಸುವುದು ನಿಜವಾಗಿಯೂ ವ್ಯತ್ಯಾಸವನ್ನುಂಟುಮಾಡುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಆದರೆ ತಮ್ಮ ಜೀವನದಲ್ಲಿ ಇದು ನಿಜವಾಗಿದೆ ಎಂದು ಹೇಳುವ ಅವರು 35 ವರ್ಷಗಳ ವೃತ್ತಿ ಜೀವನವೇ ಇದಕ್ಕೆ ಸಾಕ್ಷಿ ಎಂದುತ್ತರಿಸುತ್ತಾರೆ. ಪ್ರಾರ್ಥನೆ ಸಹಾಯ ಮಾಡುತ್ತದೆ. ಅದು ನಿಮಗೆ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ನೀವು ನಿಮ್ಮ ಕೆಲಸಕ್ಕೆ ಪ್ರಾಮಾಣಿಕರಾಗಿದ್ದರೆ ಮತ್ತು ನೀವು ಪ್ರಾರಂಭಿಸುವ ಮೊದಲು ಪ್ರಾರ್ಥಿಸಿದರೆ, ನಿಮ್ಮನ್ನು ರಕ್ಷಿಸಲು ದೇವರ ಹಸ್ತವಿದೆ ಎಂಬುದಾಗಿ ಆಂಥೋನಿ ಪೈಸ್ ಹೇಳುತ್ತಾರೆ.
ಇಂದು, ಡಾ. ಪೈಸ್ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ತಮ್ಮ ಚಿಕಿತ್ಸಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಜೊತೆಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಹೊಸ್ಮಟ್ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪರಿಣಿತಿ ಹೊಂದಿರುವ ಶಸ್ತ್ರಚಿಕಿತ್ಸಕರಾದರೂ ಪೈಸ್ ದೇವರ ಮೇಲೆ ತೀವ್ರ ಭಕ್ತಿ ಇರಿಸಿಕೊಂಡಿದ್ದಾರೆ. ದೇವರ ಆಶೀರ್ವಾದವಿಲ್ಲದೆ ಯಾವುದೂ ಸಾಧ್ಯವಿಲ್ಲ ಎಂದವರು ಹೇಳಿದ್ದು ನಿಮ್ಮಲ್ಲಿ ಎಷ್ಟೇ ಪರಿಣತಿ, ತರಬೇತಿ ಅನುಭವವಿದ್ದರೂ ದೇವರ ಮೇಲೆ ನಂಬಿಕೆ ಇರಿಸಬೇಕು ಆಗ ಅವರು ತೋರಿಸುವ ದಾರಿಯಲ್ಲಿ ಹೋದರೆ ಮಾತ್ರ ನಮಗೆ ಯಶಸ್ಸು ಸಾಧ್ಯ ಎನ್ನುತ್ತಾರೆ. ತಾನು ಪಡೆದ ಯಾವುದೇ ಯಶಸ್ಸಿಗೆ ಸರ್ವಶಕ್ತನೇ ಕಾರಣ ಎಂದು ಹೇಳುವ ಪೈಸ್, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಫಲ ನೀಡುತ್ತದೆ ಆದರೆ ದೇವರ ಆಶೀರ್ವಾದವಿಲ್ಲದೆ ಯಶಸ್ವಿಯಾಗುವುದು ಅಸಾಧ್ಯ ಎನ್ನುತ್ತಾರೆ.
Success Story: 35 ವರ್ಷಗಳ ಪಾಂಡಿತ್ಯ ಹೊಂದಿರುವ ಪ್ರಸಿದ್ಧ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ತಮ್ಮ ಯಶಸ್ಸಿಗೆ ದೇವರೇ ಕಾರಣ ಎಂದು ನಂಬಿರುವುದ್ಯಾಕೆ?

