Last Updated:
2023ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದ ಅನಿಮೇಶ್ ಪ್ರಧಾನ್ ಅವರ ಸಾಧನೆಯ ಕಥೆ ಇದಕ್ಕೆ ತಕ್ಕ ಒಂದೊಳ್ಳೆಯ ಉದಾಹರಣೆಯಾಗಿದೆ. ಯುಪಿಎಸ್ಸಿಗೆ ಅವರ ಆಯ್ಕೆಯು ಅವರ ವೈಯಕ್ತಿಕ ಹೋರಾಟಗಳ ಜೊತೆಗೆ ಅವರ ಕನಸುಗಳಿಗೆ ಅವರ ದೃಢನಿಶ್ಚಯ ಮತ್ತು ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ.
ಅತ್ಯಂತ ಕಠಿಣ ಪರೀಕ್ಷೆ ಮತ್ತು ಅಷ್ಟೇ ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಅಂತಾನೆ ಹೇಳುವ ಯುಪಿಎಸ್ಸಿ ಪರೀಕ್ಷೆಯಲ್ಲಿ (UPSC Exam) ಎರಡನೇ ರ್ಯಾಂಕ್ ಗಳಿಸುವುದು ಎಂದರೆ ಸಾಮಾನ್ಯವಾದ ಮಾತಾಗಿರುವುದಿಲ್ಲ. ಈ ಪರೀಕ್ಷೆಯಲ್ಲಿ ಒಂದೊಳ್ಳೆ ರ್ಯಾಂಕ್ (Rank) ಪಡೆಯುವುದು ಎಂದರೆ ಸುಲಭದ ಸಂಗತಿಯಾಗಿರುವುದಿಲ್ಲ ಬಿಡಿ. ಹೀಗೆ ತಮ್ಮ ಒಂದೆರಡು ಪ್ರಯತ್ನಗಳಲ್ಲಿಯೇ ಒಳ್ಳೆಯ ರ್ಯಾಂಕ್ ಪಡೆದು ಪರೀಕ್ಷೆ ಪಾಸ್ (Pass) ಮಾಡಿದವರ ಕಥೆಗಳು ಅನೇಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿ ನೀಡುತ್ತದೆ. ಅನೇಕರು ಆರ್ಥಿಕ ಮತ್ತು ವೈಯುಕ್ತಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಈ ಕಠಿಣವಾದ ಪರೀಕ್ಷೆಯನ್ನು ಒಳ್ಳೆಯ ಅಂಕಗಳೊಂದಿಗೆ ಪಾಸ್ ಮಾಡುತ್ತಾರೆ.
2023ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದ ಅನಿಮೇಶ್ ಪ್ರಧಾನ್ ಅವರ ಸಾಧನೆಯ ಕಥೆ ಇದಕ್ಕೆ ತಕ್ಕ ಒಂದೊಳ್ಳೆಯ ಉದಾಹರಣೆಯಾಗಿದೆ. ಯುಪಿಎಸ್ಸಿಗೆ ಅವರ ಆಯ್ಕೆಯು ಅವರ ವೈಯಕ್ತಿಕ ಹೋರಾಟಗಳ ಜೊತೆಗೆ ಅವರ ಕನಸುಗಳಿಗೆ ಅವರ ದೃಢನಿಶ್ಚಯ ಮತ್ತು ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಒಡಿಶಾ ರಾಜ್ಯದಿಂದ ಬಂದ ಅನಿಮೇಶ್ ಪ್ರಧಾನ್ ಅವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಇಡೀ ದೇಶದಲ್ಲಿಯೇ ಎರಡನೇ ರ್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದರು, ಇದು ಅವರ ಅದಮ್ಯ ಧೈರ್ಯ ಮತ್ತು ಅವರ ಕುಟುಂಬದ ಬೆಂಬಲದ ಮೂಲಕ ಸಾಧಿಸಿದ ಸಾಧನೆಯಾಗಿದೆ.
ಅನಿಮೇಶ್ ಪ್ರಧಾನ್
ತಮ್ಮ ಹೆತ್ತವರ ಮರಣದ ನಂತರ ಅವರು ಜೀವನದಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಿದರು. ಅವರು 11ನೇ ತರಗತಿಯಲ್ಲಿದ್ದಾಗ ಅವರ ತಂದೆ ನಿಧನರಾದರು ಮತ್ತು ಅವರ ತಾಯಿ ನಂತರ ಕ್ಯಾನ್ಸರ್ ಎಂಬ ಮಹಾಮಾರಿ ರೋಗಕ್ಕೆ ಬಲಿಯಾದರು. ಇದೆಲ್ಲವೂ ಅವರ ಯುಪಿಎಸ್ಸಿ ಪರೀಕ್ಷೆಯ ತಯಾರಿಯ ಸಮಯದಲ್ಲಿ ಸಂಭವಿಸಿದವು, ಆದರೆ ಅನಿಮೇಶ್ ಪ್ರಧಾನ್ ಅವರು ಇದೆಲ್ಲದರಿಂದ ಎಂದಿಗೂ ಧೃತಿಗೆಡಲಿಲ್ಲ. ಅವರ ತಾಯಿ ಚಿಕಿತ್ಸೆ ಪಡೆಯುತ್ತಿರುವಾಗ ಅವರು ತಮ್ಮ ಅಧ್ಯಯನವನ್ನು ಹಾಗೆಯೇ ಮುಂದುವರಿಸಿದರು ಮತ್ತು ಅಂತಿಮವಾಗಿ ಅವರ ಈ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿತು.
ಅನಿಮೇಶ್ ಪ್ರಧಾನ್ ತಮ್ಮ ಶಾಲಾ ಶಿಕ್ಷಣವನ್ನು ಕಳಿಂಗ ಪ್ರದೇಶದ ಎಂಸಿಎಲ್ನ ಡಿಎವಿ ಪಬ್ಲಿಕ್ ಶಾಲೆಯಿಂದ ಪೂರ್ಣಗೊಳಿಸಿದರು, ಅಲ್ಲಿ ಅವರು 12ನೇ ತರಗತಿಯಲ್ಲಿ 98.8% ಅಂಕಗಳನ್ನು ಗಳಿಸಿದರು. ಅವರು 2021 ರಲ್ಲಿ 9.17 ಸಿಜಿಪಿಎಯೊಂದಿಗೆ ಎನ್ಐಟಿ ರೂರ್ಕೆಲಾದಿಂದ ಕಂಪ್ಯೂಟರ್ ಸೈನ್ಸ್ ಎಂಬ ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. ನಂತರ, ಅವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ಗೆ ಕೆಲಸಕ್ಕೆ ಸೇರಿದರು. ಅವರ ತಾಯಿ ಅವರು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರಂತೆ. ಅವರ ಮರಣದ ನಂತರ, ಅನಿಮೇಶ್ ಪ್ರಧಾನ್ ಅವರ ತ್ಯಾಗಗಳನ್ನು ಗೌರವಿಸುವ ಬಯಕೆಯಿಂದ ಈ ಕನಸನ್ನು ನನಸಾಗಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದರು.
ಪದವಿ ಮುಗಿದ ನಂತರ ಅವರು ತಯಾರಿ ಆರಂಭಿಸಿದ್ದರು. ಅವರು 2023 ರಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತಮ್ಮ ಪ್ರೀತಿಪಾತ್ರರ ನೆನಪಿಗಾಗಿ, ಪ್ರಧಾನ್ ಅವರು ಯುಪಿಎಸ್ಸಿಯ ತಯಾರಿಯಲ್ಲಿ ಎದುರಾದ ಸವಾಲುಗಳನ್ನು ನಿವಾರಿಸಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಲು ಮುಂದುವರೆದರು. ಅವರು ಯಾವಾಗಲೂ ಒಡಿಶಾ ಐಎಎಸ್ ಕೇಡರ್ಗೆ ಸೇರಿಕೊಳ್ಳಲು ಆದ್ಯತೆ ನೀಡಿದರು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ತಮ್ಮ ತವರು ರಾಜ್ಯಕ್ಕೆ ಮರಳುವ ಗುರಿಯನ್ನು ಹೊಂದಿದ್ದಾರೆ.
November 07, 2025 1:52 PM IST

