Last Updated:
Success Story: ಎಷ್ಟೋ ಬಾರಿ ಕೆಲವರಿಗೆ ಓದಬೇಕು ಅನ್ನೋ ಹಂಬಲ ಮತ್ತು ಬಯಕೆ ಇದ್ದರೂ ಸಹ ಅದಕ್ಕೆ ಅಗತ್ಯವಾದ ಸಂಪನ್ಮೂಲಗಳ ಕೊರತೆ ತುಂಬಾನೇ ಇರುತ್ತದೆ. ಅದೇ ಇನ್ನೂ ಕೆಲ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಇದ್ದರೂ ಸಹ ಆ ವಿದ್ಯಾ ಸರಸ್ವತಿ ಒಲಿಯುವುದಿಲ್ಲ. ಆದರೆ, ಈ ಒಂದಲ್ಲಾ ಎರಡಲ್ಲಾ ಒಟ್ಟು ಕಾಲೇಜಿಗೆ ಹೋಗದೆ 12 ಸರ್ಕಾರಿ ಪರೀಕ್ಷೆಗಳನ್ನ ಪಾಸ್ ಮಾಡಿದ ಐಪಿಎಸ್ ಅಧಿಕಾರಿಯ ಕಥೆ ಇಲ್ಲಿದೆ:
Success Story: ಎಷ್ಟೋ ಬಾರಿ ಕೆಲವರಿಗೆ ಓದಬೇಕು ಅನ್ನೋ ಹಂಬಲ ಮತ್ತು ಬಯಕೆ ಇದ್ದರೂ ಸಹ ಅದಕ್ಕೆ ಅಗತ್ಯವಾದ ಸಂಪನ್ಮೂಲಗಳ ಕೊರತೆ ತುಂಬಾನೇ ಇರುತ್ತದೆ. ಅದೇ ಇನ್ನೂ ಕೆಲ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಇದ್ದರೂ ಸಹ ಆ ವಿದ್ಯಾ ಸರಸ್ವತಿ (Vidya Saraswati) ಒಲಿಯುವುದಿಲ್ಲ. ಇಲ್ಲಿಯೂ ಸಹ ಅಂತಹದೇ ಒಂದು ಸಾಧನೆಯ ಕಥೆ (Success Story) ಇದೆ ನೋಡಿ.
ಪಂಜಾಬ್ ಮೂಲದ ಸಂದೀಪ್ ಚೌಧರಿ (Sandeep Chaudhary) ಎಂಬ ಪುಟ್ಟ ಬಾಲಕ ಇನ್ನು ಪಿಯುಸಿ ಓದಬೇಕಾದರೆ, ಅವರ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಅವರ ತಂದೆ ಹಠಾತ್ತನೆ ಒಂದು ದಿನ ನಿಧನರಾಗುತ್ತಾರೆ. ಆಗ ಆ ಪುಟ್ಟ ಬಾಲಕನ ಓದಿಗೆ ತುಂಬಾನೇ ತೊಂದರೆಯಾಗುತ್ತದೆ.
ತಂದೆ ತೀರಿಕೊಂಡ ಕೇವಲ ಆರೇ ಆರು ದಿನಗಳಲ್ಲಿ ನೋವಿನ ಮನಸ್ಸಿನಿಂದ ಸಂದೀಪ್ ತಮ್ಮ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಾರೆ. ಆ ಪರೀಕ್ಷೆಯಲ್ಲಿ ಅವರು ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಪಾಸ್ ಆಗುತ್ತಾರೆ. ಆದರೆ ಅವರ ಇಡೀ ಕುಟುಂಬ ಅವರ ಮೇಲೆ ಅವಲಂಬಿತವಾಗಿದ್ದರಿಂದ ಪ್ರತಿದಿನ ಕಾಲೇಜಿಗೆ ಹೋಗಿ ಓದುವುದಕ್ಕೆ ಸಾಧ್ಯವಾಗಲಿಲ್ಲವಂತೆ.
ಆದರೆ ಸಂದೀಪ್ ತಮ್ಮ ಕಲಿಕೆಯ ಕನಸುಗಳನ್ನು ಕೈಬಿಡಲಿಲ್ಲ, ಅವರು ಇಗ್ನೋಗೆ ಸೇರಿಕೊಂಡರು ಮತ್ತು ಅಲ್ಲಿ ಮುಕ್ತ ಕಲಿಕಾ ಕಾರ್ಯಕ್ರಮದ ಮೂಲಕ ಅಧ್ಯಯನ ಮಾಡುತ್ತಾ ತಮ್ಮ ಕುಟುಂಬವನ್ನು ಸಹ ನಡೆಸಲು ಟ್ಯೂಷನ್ ಕ್ಲಾಸ್ ಅನ್ನು ಸಹ ನಡೆಸಿದರು. ಬಿಎ ಪದವಿ ಮುಗಿಸಿದ ನಂತರ ಎಂಎ ಸ್ನಾತಕೋತ್ತರ ಪದವಿ ಪಡೆಯಲು ತಮ್ಮನ್ನು ತಾವು ನೋಂದಾಯಿಸಿಕೊಂಡರು. ಇದರ ಜೊತೆಗೆ ಅವರು ಯುಜಿಸಿ ನೆಟ್ ಪರೀಕ್ಷೆಗೂ ಸಹ ಹಾಜರಾದರು ಮತ್ತು ತಮ್ಮ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಪಾಸಾದರು, ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚು ಮಾಡಿತು.
ಸಂದೀಪ್ ಅವರ ಮೊದಲ ಸರ್ಕಾರಿ ಕೆಲಸ ಪೋಸ್ಟಲ್ ಕ್ಲರ್ಕ್ ಆಗಿತ್ತಂತೆ, ತೀವ್ರ ಸ್ಪರ್ಧೆಯೊಂದಿಗೆ ವಿನಮ್ರ ಆರಂಭ ಮಾಡಿದ ಅವರು ಬೇರೆ ಬೇರೆ ಸರ್ಕಾರಿ ಪರೀಕ್ಷೆಗಳನ್ನು ಏಕೆ ಪ್ರಯತ್ನಿಸಬಾರದು ಅಂತ ಮನಸ್ಸಿನಲ್ಲಿ ಅಂದುಕೊಂಡರಂತೆ. ಯಾವುದೇ ರೀತಿಯ ತರಬೇತಿ ಕೇಂದ್ರಗಳಿಗೆ ಹೋಗದೆ ಸ್ವತಃ ತಾವೇ ಮನೆಯಲ್ಲಿ ಕೂತು ಅಧ್ಯಯನ ಮಾಡಿ ಒಂದರ ನಂತರ ಇನ್ನೊಂದು ಎಂಬಂತೆ ಬರೋಬ್ಬರಿ 12 ಸರ್ಕಾರಿ ಪರೀಕ್ಷೆಗಳನ್ನು ಪಾಸ್ ಮಾಡಿದರು.
ಇವರು ಬ್ಯಾಂಕ್ ಪಿಒ, ಆದಾಯ ತೆರಿಗೆ ಇನ್ಸ್ಪೆಕ್ಟರ್, ಬಿಎಸ್ಎಫ್ನಲ್ಲಿ ಸಹಾಯಕ ಕಮಾಂಡೆಂಟ್ ಹೀಗೆ ಇವರು ಪಾಸ್ ಮಾಡಿದ ಪರೀಕ್ಷೆಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಇದೆಲ್ಲವೂ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ದೃಢನಿಶ್ಚಯಕ್ಕೆ ಹಿಡಿದ ಕೈಗನ್ನಡಿ ಆಯಿತು. ಹೀಗೆ ಗುವಾಹಟಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ, ಅವರ ರೂಮ್ಮೇಟ್ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದರು. ಇದರಿಂದ ಪ್ರೇರಣೆ ಪಡೆದ ಸಂದೀಪ್ ತಾವು ಕೂಡ ಇಂತಹ ಸಾಧನೆ ಮಾಡಬಹುದು ಅಂತ ಅರಿತುಕೊಂಡು ಪರೀಕ್ಷೆಗೆ ಸಿದ್ಧತೆ ಶುರು ಮಾಡಿದರು.
2014 ರಲ್ಲಿ, ಅವರು ಯುಪಿಎಸ್ಸಿ ಪರೀಕ್ಷೆಯನ್ನು ಪ್ರಯತ್ನಿಸಿದರು, ಮೊದಲ ಪ್ರಯತ್ನದಲ್ಲಿಯೇ ಅವರು ಅದನ್ನು ಪಾಸು ಮಾಡುವುದಲ್ಲದೆ, ಅಖಿಲ ಭಾರತ ಮಟ್ಟದಲ್ಲಿ 158ನೇ ರ್ಯಾಂಕ್ ಸಹ ಪಡೆದುಕೊಂಡರು. ಅವರ ಸಂದರ್ಶನದಲ್ಲಿ, ಅವರು ಆ ವರ್ಷ ದೇಶದಲ್ಲಿಯೇ ಅತ್ಯಧಿಕ ಅಂಕಗಳನ್ನು ಗಳಿಸಿದ ಅಭ್ಯರ್ಥಿಯಾದರು. ಮುಕ್ತ ವಿಶ್ವವಿದ್ಯಾಲಯದ ಪುಸ್ತಕಗಳಿಂದ ಅಧ್ಯಯನ ಮಾಡಿದ ಹುಡುಗ ಇಂದು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ.
ಸೈಬರ್ ಅಪರಾಧ ತನಿಖಾ ಕೇಂದ್ರದಂತಹ ನಿರ್ಣಾಯಕ ಪಾತ್ರಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿದ ನಂತರ, ಸಂದೀಪ್ ಚೌಧರಿ ಡಿಸೆಂಬರ್ 2023 ರಲ್ಲಿ, ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯಲ್ಲಿ ಡಿಐಜಿ ಹುದ್ದೆಗೆ ಬಡ್ತಿ ಪಡೆದರು.
Jan 27, 2026 11:27 PM IST
Success Story: ಟಾಪರ್ಗಳ ಟಾಪರ್; ಕಾಲೇಜಿಗೆ ಹೋಗದೆ 12 ಸರ್ಕಾರಿ ಪರೀಕ್ಷೆಗಳನ್ನ ಪಾಸ್ ಮಾಡಿದ ಐಪಿಎಸ್ ಅಧಿಕಾರಿ!

