Advertisement
Advertisement

MBBS ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್! ವೈದ್ಯರ ಕೊರತೆಗೆ ನೀಗಿಸಲು ದೊಡ್ಡ ನಿರ್ಧಾರ!

Shashank 02 1 2026 06 23e4012d042cb7b647b654e257749f4b 1200x675.jpg


Last Updated:

ವೈದ್ಯರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯು.ಟಿ.ಖಾದರ್ ಅವರು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಆರೋಗ್ಯ ಸಚಿವ ಯು.ಟಿ ಖಾದರ್​
ಆರೋಗ್ಯ ಸಚಿವ ಯು.ಟಿ ಖಾದರ್​

ಬೆಂಗಳೂರು: ನೂತನ ಆರೋಗ್ಯ ಸಚಿವ ಯು.ಟಿ. ಖಾದರ್​ (U. T. Khader) ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಖಾತೆ ಹಂಚಿಕೆಯಾದಾಗಿನಿಂದ ಫುಲ್​ ಆ್ಯಕ್ಟೀವ್​ ಆಗಿರುವ ಯು.ಟಿ. ಖಾದರ್​ ಅವರು ವೈದ್ಯರ ಕೊರತೆ (Shortage of Doctors) ನೀಗಿಸಲು ಮುಂದಾಗಿದ್ದಾರೆ. ಹೊಸ ಆರೋಗ್ಯ ಸಚಿವರ ಸಮ್ಮುಖದಲ್ಲಿ ಹೊಸ ಭರವಸೆ ಮೂಡಿದ್ದು, ವೈದ್ಯರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯು.ಟಿ. ಖಾದರ್ ಅವರು ಮೇಜರ್​ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ನೇರ ನೇಮಕಾತಿಗೆ ಆರೋಗ್ಯ ಇಲಾಖೆ ನಿರ್ಧಾರ

ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ ಎಂಬ ಭರವಸೆ ಮೂಡಿದೆ. 200 ವೈದ್ಯರ ಖಾಯಂ ನೇರ ನೇಮಕಾತಿಗೆ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಕೆಇಎ ಪರೀಕ್ಷೆ ನಡೆಸಿ ವಾರದೊಳಗೆ ನೇಮಕಾತಿ ಪತ್ರ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಕೂಡ ಸಿಕ್ಕಿದೆ ಎನ್ನಲಾಗಿದೆ.

ಡಿಎಚ್​ಒ ಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿಗೆ ಒಳಪಡಬಹುದು

ರಾಜ್ಯದಲ್ಲಿ ಒಟ್ಟು 1280 ವೈದ್ಯರ ಕೊರತೆ ಇದ್ದು, ಈ ಪೈಕಿ 200 ವೈದ್ಯರ ಖಾಯಂ ನೇರ ನೇಮಕಾತಿಗೆ (permanent) ಆರೋಗ್ಯ ಇಲಾಖೆ ಮುಂದಾಗಿದೆ. ಸುಮಾರು 1000 ಸಾವಿರ ವೈದ್ಯರ ವಾಕ್ ಇನ್ ಇಂಟರ್​ವ್ಯೂವ್​ ನಡೆಸಲು ತೀರ್ಮಾನಿಸಿದ್ದಾರೆ. ಡಿಎಚ್​ಒ ಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿಗೆ ಒಳಪಡಬಹುದಾಗಿದ್ದು, ಐದು ವರ್ಷಗಳ ಸೇವೆ ಸಲ್ಲಿಕೆ ಬಳಿಕ ಸಾಧನೆ ಪರಿಗಣಿಸಿ ಖಾಯಂ ನೇಮಕಾತಿಯ ಭರವಸೆ ನೀಡಲಾಗಿದೆ. ವೈದ್ಯರ ಜೊತೆ 400 ನರ್ಸ್, 400 ಫಾರ್ಮಸಿಸ್ಟ್, 400 ಲ್ಯಾಬ್ ಟೆಕ್ನಿಶಿಯನ್ಸ್​ಗಳ ನೇಮಕಾತಿಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಸತತ 5 ಗಂಟೆಗಳ ಸುದೀರ್ಘ ಸಭೆ ನಡೆಸಿದ ಆರೋಗ್ಯ ಸಚಿವ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇಂದು ಇಲಾಖೆಯ ಮೊದಲ ರಿವ್ಯೂ ಮೀಟಿಂಗ್  ನಡೆಸಿದರು. ಸತತ 5 ಗಂಟೆಗಳ ಸುದೀರ್ಘ ಸಭೆ ನಡೆಸಿದ ಆರೋಗ್ಯ ಸಚಿವ ಖಾದರ್​, ಸಭೆ ಬಳಿಕ ಮಾಹಿತಿ ಹಂಚಿಕೊಂಡರು. ಇಡೀ ಆರೋಗ್ಯ ಇಲಾಖೆ ಯೋಜನೆಗಳು, ಅನುಷ್ಠಾನ, ಸಮಸ್ಯೆ ಕುರಿತು ದೀರ್ಘ ಚರ್ಚೆ ನಡೆಸಿದ್ದೇವೆ. ತಳಮಟ್ಟದ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕಿದೆ.  ಇವತ್ತು ಕರ್ನಾಟಕ ರಾಜ್ಯದ ಇಲಾಖೆಯ ಕೆಲಸದಿಂದ ಜನ ಆರೋಗ್ಯವಂತರಾಗಿದ್ದಾರೆ. ಶೇಕಡಾ 80ರಷ್ಟು ಆರೋಗ್ಯ ಸೇವೆ ಲಭ್ಯವಾಗಿದೆ ಎಂದು ಹೇಳಿದರು.
‘ನೇಮಕಾತಿಗೆ ನಾವು ನಿರ್ಧಾರ ಮಾಡಿದ್ದೇವೆ’

ಮೊದಲ ಸಮಸ್ಯೆ ವೈದ್ಯರ ಕೊರತೆ ಇದೆ. ಎಂಬಿಬಿಎಸ್ 1280 ಕೊರತೆ, 924 ಸ್ಪೆಷಲಿಸ್ಟ್, 892 ನರ್ಸ್​ಗಳ ಕೊರತೆ ಇದೆ. ನೇಮಕಾತಿಗೆ ನಾವು ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ವಾಕ್ ಇನ್ ಇಂಟ್ರವ್ಯೂ ಮಾಡಲು ನಿರ್ಧರಿಸಿದ್ದೇವೆ. ಡಿಹೆಚ್​ಓಗಳಿಗೆ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಎಂಬಿಬಿಎಸ್ ವೈದ್ಯರಿಗೆ  1,10,000 ರೂ, ಸ್ಟೂಡೆಂಟ್​​ಗಳಿಗೆ 10 ಸಾವಿರ ಕೊಡಲಾಗುತ್ತದೆ. ಕಂಟ್ರ್ಯಾಕ್ಟ್​​ನಲ್ಲಿ ಕೆಲಸ ಮಾಡುವವರಿಗೆ (ಉತ್ತಮ ಕೆಲಸ‌ ಮಾಡಿದವರು) ಪರ್ಮನೆಂಟ್ ಜಾಬ್ ಮಾಡಲು ನಿರ್ಧರಿಸಿದ್ದೇವೆ. ಪಿಜಿ ಅವಕಾಶ ಕೊಡಲಾಗುತ್ತದೆ. ಎಂಬಿಬಿಎಸ್ ಮಾಡುವವರಿಗೆ ಪಿಜಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ನಗರ ಮಟ್ಟದಲ್ಲಿ ವೈದ್ಯರಿದ್ದಾರೆ ಆದ್ರೆ ಗ್ರಾಮೀಣ, ಗುಡ್ಡಗ್ರಾಮದಲ್ಲಿ ವೈದ್ಯರ ಕೊರತೆ ಇದೆ ಎಂದರು.

(ವರದಿ: ಹಂಸಶ್ಯಾಮಲ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

TOP