Advertisement
Advertisement

Karnataka Board Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ.100ರ ಸಾಧನೆಗೈದ ರಾಜ್ಯದ 7 ಪ್ರತಿಭೆಗಳು ಇವರೇ!

Bhimasi 01 2026 04 23t123706.999 2026 04 2e94a6a968a6c13f2b173fb86cdee2d5.jpg


Last Updated:

SSLC Exam Results Karnataka 2026: ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯದ ವಿವಿಧ ಮೂಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ‘ಪರ್ಫೆಕ್ಟ್ ಸ್ಕೋರ್’ ಸಾಧನೆ ಮಾಡಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಸಾಧನೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಅಡ್ಡಿಯಾಗದು ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ.

News18
News18

ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ಪ್ರಕಟಿಸಿದ 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವು (Result) ಹೊಸ ಇತಿಹಾಸ ಬರೆದಿದೆ. ಈ ಬಾರಿಯ ಪರೀಕ್ಷೆಯಲ್ಲಿ(Examination) ರಾಜ್ಯದ ವಿವಿಧ ಮೂಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು(Marks) ಪಡೆಯುವ ಮೂಲಕ ‘ಪರ್ಫೆಕ್ಟ್ ಸ್ಕೋರ್’ ಸಾಧನೆ ಮಾಡಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಗ್ರಾಮೀಣ (Rural) ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಸಾಧನೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಅಡ್ಡಿಯಾಗದು ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ.

ಜಿಲ್ಲಾವಾರು ಸಾಧಕರ ಸಂಭ್ರಮ!

ಪ್ರಕಟಿತ ಪಟ್ಟಿಯಂತೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಹಿಡಿದು ಕರಾವಳಿಯ ಉಡುಪಿಯವರೆಗೆ ಸಾಧಕರು ಹರಡಿಕೊಂಡಿದ್ದಾರೆ. ಚಿಕ್ಕೋಡಿಯ ಅಥಣಿ ತಾಲೂಕಿನ ಕಾಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ 625ಕ್ಕೆ 625 ಅಂಕ ಗಳಿಸುವ ಮೂಲಕ ಸರ್ಕಾರಿ ಶಾಲೆಗಳ ಘನತೆಯನ್ನು ಹೆಚ್ಚಿಸಿದ್ದಾರೆ. “ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ, ಶಿಕ್ಷಕರ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸ ನನ್ನ ಈ ಸಾಧನೆಗೆ ಕಾರಣ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಹುಡುಗ ಭರತ್​!

ದಾವಣಗೆರೆಯ ಕಬ್ಬಾಳದ ಶ್ರೀ ವಿದ್ಯಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಭರತ್ ಜಿ, ಚಿಕ್ಕಮಗಳೂರಿನ ಸೇಂಟ್ ಮೇರಿಸ್ ಪ್ರೌಢಶಾಲೆಯ ಬೃಂದಾ ಎಂ. ತಾಪಸೆ ಅವರು ಕೂಡ ನೂರಕ್ಕೆ ನೂರು ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರದ ಧನುಷ್ ಸುಧೀರ್ ಮೈಸೂರು ನಗರ ಪ್ರದೇಶದ ಪ್ರತಿಭೆಯಾಗಿ ಮಿಂಚಿದ್ದಾರೆ.

ಕರಾವಳಿ ಮತ್ತು ಉತ್ತರ ಕರ್ನಾಟಕದ ಪಾರುಪತ್ಯ!

ಉಡುಪಿಯ ಶಂಕರನಾರಾಯಣದ ಮದರ್ ತೆರೇಸಾ ಸ್ಮಾರಕ ಶಾಲೆಯ ಪ್ರೀತಮ್ ಜಿ. ಪೂಜಾರಿ ತಮ್ಮ ಶಿಸ್ತುಬದ್ಧ ಅಧ್ಯಯನದ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್‌ಫರ್ಡ್ ಶಾಲೆಯ ಸೌಜನ್ಯ ಬಸವರಾಜ ಕಂದಕೂರ ಮತ್ತು ರಾಯಚೂರು ಜಿಲ್ಲೆಯ ಮಾನ್ವಿಯ ಬಿ.ವಿ.ಆರ್ ಶಾಲೆಯ ಸುಖದೇವ ಅವರು ಕೂಡ ಅಗ್ರಸ್ಥಾನಿಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸಾಧನೆಯ ಹಿಂದಿನ ಗುಟ್ಟು

ಈ ಎಲ್ಲ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಒಂದು ಸಾಮ್ಯತೆಯಿದೆ; ಅದುವೇ ‘ನಿಯಮಿತ ಅಧ್ಯಯನ’. ಪರೀಕ್ಷೆಯ ಸಮಯದಲ್ಲಿ ಮಾತ್ರ ಓದುವ ಬದಲು, ವರ್ಷಪೂರ್ತಿ ಪಠ್ಯಕ್ರಮವನ್ನು ಅರಿತು ಓದಿದ್ದು ಇವರಿಗೆ ನೆರವಾಗಿದೆ. ಸ್ಮಾರ್ಟ್‌ಫೋನ್‌ಗಳಿಂದ ದೂರವಿದ್ದು, ಪಠ್ಯಪುಸ್ತಕಗಳನ್ನೇ ವೇದವಾಕ್ಯವನ್ನಾಗಿಸಿಕೊಂಡ ಈ ವಿದ್ಯಾರ್ಥಿಗಳು ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.

ಅನೇಕ ವಿದ್ಯಾರ್ಥಿಗಳು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದು, ತಂದೆ-ತಾಯಿಯ ಕಷ್ಟವನ್ನು ನೋಡಿ ಬೆಳೆದವರು. “ನನ್ನ ತಂದೆ ರೈತರು, ಅವರ ಕಷ್ಟಕ್ಕೆ ಬೆಲೆ ತರಬೇಕೆಂಬ ಹಠ ನನ್ನಲ್ಲಿತ್ತು” ಎಂದು ಸಾಧಕರೊಬ್ಬರು ಭಾವುಕರಾಗಿ ನುಡಿದಿದ್ದಾರೆ. ಇವರ ಈ ಸಾಧನೆಗೆ ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ವಿಶೇಷ ತರಗತಿಗಳು ಮತ್ತು ಮಾದರಿ ಪರೀಕ್ಷೆಗಳು ಪ್ರಮುಖ ಕಾರಣವಾಗಿವೆ.

ಶಿಕ್ಷಣ ಇಲಾಖೆಯ ಮೆಚ್ಚುಗೆ!

ಈ ಸಾಲಿನ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವರು ಹರ್ಷ ವ್ಯಕ್ತಪಡಿಸಿದ್ದು, ಶೇ. 100ರಷ್ಟು ಅಂಕ ಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ಇದು ಕೇವಲ ಅಂಕಗಳಲ್ಲ, ಅವರ ನಿರಂತರ ಶ್ರಮದ ಫಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ.

ರಾಜ್ಯದ್ಯಾಂತ ಸಂಭ್ರಮ!

ಈ ಫಲಿತಾಂಶವು ರಾಜ್ಯದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದ್ದು, ಶಾಲೆಗಳಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಈ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಅಥವಾ ಕಲೆ – ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ. ಬಹುತೇಕ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದು, ದೇಶದ ಉತ್ತಮ ಪ್ರಜೆಗಳಾಗುವ ಭರವಸೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

TOP