Last Updated:
ಮಂಡ್ಯ ಅಶೋಕನಗರ ಆನೆ ಪಾರ್ಕ್ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ, ಪಿಯುಸಿ ಪದವೀಧರರಿಗೆ ಜೂನ್ 6ರವರೆಗೆ ಅರ್ಜಿ ಅವಕಾಶ.
ಮಂಡ್ಯ: ಉದ್ಯೋಗದ (Job) ಹುಡುಕಾಟದಲ್ಲಿರುವ ಮಂಡ್ಯ (Mandya) ಜಿಲ್ಲೆಯ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಮಂಡ್ಯ ನಗರದ ಅತ್ಯಂತ ಜನಪ್ರಿಯ ತಾಣವಾದ ಅಶೋಕನಗರದ ಆನೆ ಪಾರ್ಕ್ ಬಾಲಭವನದಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭರ್ಜರಿ ನೇಮಕಾತಿ (Recruitment) ಪ್ರಕಟಣೆ ಹೊರಡಿಸಿದೆ. ನೀವು ಕೇವಲ ಪಿಯುಸಿ (PUC) ಅಥವಾ ಯಾವುದೇ ಪದವಿ ಮುಗಿಸಿ ಮನೆಯಲ್ಲಿದ್ದರೆ, ಈ ತಾತ್ಕಾಲಿಕ ಉದ್ಯೋಗಾವಕಾಶವನ್ನು ನಿಮ್ಮದಾಗಿಸಿಕೊಳ್ಳಲು ಸುವರ್ಣ ಕಾಲ ಬಂದಿದೆ.
ಕಾರ್ಯಕ್ರಮ ಸಂಯೋಜಕರು- ಈ ಹುದ್ದೆಗೆ ಯಾವುದಾದರೂ ಅಂಗೀಕೃತ ಪದವಿ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ. ಮಕ್ಕಳ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಬೇಕಾಗಿರುವುದರಿಂದ, ಕಲಾಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವ ಪ್ರಮಾಣಪತ್ರವನ್ನು ಲಗತ್ತಿಸಬೇಕಾಗುತ್ತದೆ.
ಕಚೇರಿ ಸಹಾಯಕರು-ಈ ಹುದ್ದೆಗೆ ಪಿಯುಸಿ ಅಥವಾ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಕಂಪ್ಯೂಟರ್ ಜ್ಞಾನದ ಸರ್ಟಿಫಿಕೇಟ್ ಕಡ್ಡಾಯವಾಗಿರಬೇಕು.
ಈ ಹುದ್ದೆಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಯಾವುದೇ ಗೊಂದಲಗಳಿದ್ದಲ್ಲಿ ಇಲಾಖೆಯು ಅಧಿಕೃತ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. ಅಭ್ಯರ್ಥಿಗಳು ತಕ್ಷಣವೇ ದೂ.ಸಂ: 9449300822 ಅನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಕೊನೆಯ ಕ್ಷಣದ ಸಜೆಶನ್ ಎಂದರೆ, ತಡ ಮಾಡದೆ ಇಂದೇ ಫೆÇೀನ್ ಮಾಡಿ ಅಥವಾ ಕಚೇರಿಗೆ ಭೇಟಿ ನೀಡಿ ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.
Mandya,Karnataka

