Advertisement
Advertisement

Arivu Scheme: ಹಣವಿಲ್ಲದೇ ಉನ್ನತ ವ್ಯಾಸಂಗ ನಿಲ್ಲಿಸಬೇಡಿ, ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣ ಅವಕಾಶ!

Whatsapp image 2026 05 07 at 2.16.48 pm 2026 05 864bc7b1df4719445a78036ede16a4c7 1200x675.jpeg


Last Updated:

ಇದಕ್ಕಾಗಿ ನೀವು ಎಲ್ಲಿಯೂ ಅಲೆಯಬೇಕಿಲ್ಲ. ಮೊದಲು ನಿಗಮದ ಅಧಿಕೃತ ವೆಬ್‍ಸೈಟ್ kmdconline.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.

ಅರಿವು ಶಿಕ್ಷಣ ಸಾಲ ಯೋಜನೆ
ಅರಿವು ಶಿಕ್ಷಣ ಸಾಲ ಯೋಜನೆ

ಚಿಕ್ಕಮಗಳೂರು: ನಿಮ್ಮ ಡಿಗ್ರಿ ಮುಗಿದಿದೆಯೇ? ಮುಂದೆ ಎಂಬಿಬಿಎಸ್ (MBBS), ಇಂಜಿನಿಯರಿಂಗ್ ಅಥವಾ ಇನ್ನಾವುದೇ ಉನ್ನತ ವ್ಯಾಸಂಗ (Higher Education) ಮಾಡುವ ಹಂಬಲವಿದ್ದರೂ ಹಣದ ಕೊರತೆಯಿಂದ ಕಂಗಾಲಾಗಿದ್ದೀರಾ? ಹಾಗಿದ್ದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ, ನಿಮಗಾಗಿ ಒಂದು ಅದ್ಭುತ ಸುದ್ದಿ ಇಲ್ಲಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು (Arivu Education Loan Scheme) ಘೋಷಿಸಿದೆ.

ಯಾರಿಗೆ ಸಿಗಲಿದೆ ಈ ಸೌಲಭ್ಯ?

ಈ ಯೋಜನೆಯು ಮುಖ್ಯವಾಗಿ ಮುಸ್ಲಿಂ, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ (ಕ್ರಿಶ್ಚಿಯನ್ ಸಮುದಾಯ ಹೊರತುಪಡಿಸಿ) ಸಮುದಾಯದ ವಿದ್ಯಾರ್ಥಿಗಳಿಗೆ ಲಭ್ಯವಿದೆ. ನೀವು ಕೆಇಎ ಮೂಲಕ ಸಿಇಟಿ ಅಥವಾ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್, ಬಿಡಿಎಸ್, ಇಂಜಿನಿಯರಿಂಗ್, ಫಾರ್ಮಸಿ ಅಥವಾ ಅಗ್ರಿಕಲ್ಚರ್ ಸೈನ್ಸ್‍ನಂತಹ ಕೋರ್ಸ್‍ಗಳಿಗೆ ಆಯ್ಕೆಯಾಗಿದ್ದರೆ, ಈ ಸಾಲದ ಸೌಲಭ್ಯವನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಇದಕ್ಕಾಗಿ ನೀವು ಎಲ್ಲಿಯೂ ಅಲೆಯಬೇಕಿಲ್ಲ. ಮೊದಲು ನಿಗಮದ ಅಧಿಕೃತ ವೆಬ್‍ಸೈಟ್ kmdconline.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಆ ಅರ್ಜಿಯ ಪ್ರಿಂಟ್ ಔಟ್ ಪಡೆದು ಅಗತ್ಯ ದಾಖಲೆಗಳೊಂದಿಗೆ ಚಿಕ್ಕಮಗಳೂರಿನ ಕೆ.ಎಂ. ರಸ್ತೆಯಲ್ಲಿರುವ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ಬೇಕಾಗುವ ಪ್ರಮುಖ ದಾಖಲೆಗಳು

-ಆನ್‍ಲೈನ್ ಅರ್ಜಿಯ ಪ್ರಿಂಟ್ ಔಟ್ (QR ಕೋಡ್ ಹೊಂದಿರಬೇಕು).

-ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

-ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಅಂಕಪಟ್ಟಿಗಳು.

-ಆಧಾರ್ ಕಾರ್ಡ್ ಮತ್ತು 4 ಪಾಸ್‍ಪೋರ್ಟ್ ಅಳತೆಯ ಫೋಟೋಗಳು.

-ಸಿಇಟಿ/ನೀಟ್ ಪ್ರವೇಶ ಪತ್ರ.

-ವಿದ್ಯಾರ್ಥಿ ಹಾಗೂ ಪೋಷಕರ ಸ್ವಯಂ ಘೋಷಣೆ ಪತ್ರ.

-ರೂ. 100ರ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್.



Source link

Leave a Reply

Your email address will not be published. Required fields are marked *

TOP