Last Updated:
ತಪಸ್ಯಾ ಪರಿಹಾರ್ ಎಂಬ ರೈತನ ಮಗಳು. ಯಾವುದೇ ಕೋಚಿಂಗ್ ಇಲ್ಲದೆ ಸ್ವ ಅಧ್ಯಯನದ ಮೂಲಕ 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ AIR 23 ಪಡೆದು ಐಎಎಸ್ ಅಧಿಕಾರಿ ಆಗಿದ್ದಾರೆ. ಅವರ ಸಾಧನೆ ಅನೇಕ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ.
ಸರ್ಕಾರಿ ಅಧಿಕಾರಿಗಳಾಗುವುದು (Government Officers) ಅನೇಕರ ಕನಸು. ಅದಕ್ಕಾಗಿ ಪ್ರತಿ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು (Students) ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exam) ಒಂದಾದ ಯೂನಿಯನ್ ಸಿವಿಲ್ ಸರ್ವೀಸಸ್ ಪರೀಕ್ಷೆಗೆ (Union Civil Services Exam) ಹಾಜರಾಗುತ್ತಾರೆ. ಆದಾಗ್ಯೂ, ಅವರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ತಮ್ಮ ಕನಸುಗಳನ್ನು ಸಾಧಿಸುತ್ತಾರೆ ಮತ್ತು ಸರ್ಕಾರಿ ಅಧಿಕಾರಿಗಳಾಗುತ್ತಾರೆ. ಹಾಗೆ ಸಫಲತಾದಬರ ಶ್ರಮ, ಛಲಗಳೆಲ್ಲವೂ ಇತರ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಂತಹ ಒಂದು ಪ್ರೇರಣಾದಾಯಕ ಕಥೆ ತಪಸ್ಯಾ ಪರಿಹಾರ್ ಅವರದ್ದು. ಯಾವುದೇ ಕೋಚಿಂಗ್ ಇಲ್ಲದೆ ಸ್ವ ಅಧ್ಯಯನದ ಮೂಲಕ ಯುಪಿಎಸ್ಸಿ ಸಿಎಸ್ಇ ತೇರ್ಗಡೆಯಾಗಿದ್ದಾರೆ ಐಎಎಸ್ ತಪಸ್ಯಾ ಪರಿಹಾರ್!
2018 ರ ಬ್ಯಾಚ್ ಐಎಎಸ್ ನ ಮಧ್ಯಪ್ರದೇಶ ಕೇಡರ್ನ ಅಧಿಕಾರಿ ತಪಸ್ಯಾ ಪರಿಹಾರ್ ಅವರು 2017 ರಲ್ಲಿ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಅಂದಹಾಗೆ ಅವರು ಅಖಿಲ ಭಾರತ ರ್ಯಾಂಕ್ (AIR) 23 ಅನ್ನು ಪಡೆದಿದ್ದಾರೆ.
ಅಂದಹಾಗೆ ತಪಸ್ಯಾ ಅವರ ಈ ಪ್ರಯಾಣವು ಸಾಕಷ್ಟು ಅಡೆತಡೆಗಳು ಮತ್ತು ಸವಾಲುಗಳಿಂದ ತುಂಬಿತ್ತು! ಏಕೆಂದರೆ ಅವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಪ್ರಾಥಮಿಕ ಹಂತವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಛಲ ಬಿಡದ ತಪಸ್ಯಾ ಸತತ ಅಧ್ಯಯನ, ಪರಿಶ್ರಮ ಹಾಗೂ ತಮ್ಮ ಗುರಿ ಸಾಧಿಸುವ ಅಚಲ ಬಯಕೆಯಿಂದ ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದರು.
ತಪಸ್ಯಾ ಮಧ್ಯಪ್ರದೇಶದ ನರಸಿಂಗ್ಪುರದವರು. ಅವರು ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ ಪುಣೆಯ ಇಂಡಿಯನ್ ಲಾ ಸೊಸೈಟಿಯ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಇದರ ನಂತರ, ಅವರು ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಈ ಮಧ್ಯೆ ತಪಸ್ಯಾ ಅವರು ಕೋಚಿಂಗ್ ತರಗತಿಗಳಿಗೆ ಸೇರಿಕೊಂಡರು ಆದರೆ ಆರಂಭದ ಪ್ರಯತ್ನದಲ್ಲಿ ವಿಫಲರಾದರು. ಆದರೆ ಇದು ಅವರ ದೃಢನಿಶ್ಚಯವನ್ನು ಕುಂದಿಸಲಿಲ್ಲ. ತಮ್ಮ ಎರಡನೇ ಪ್ರಯತ್ನಕ್ಕಾಗಿ ತಪಸ್ಯ ಸ್ವತಃ ತಯಾರಿ ನಡೆಸಲು ನಿರ್ಧರಿಸಿದರು. ಹೀಗಾಗಿ ಅವರು ಕೋಚಿಂಗ್ ಅನ್ನು ತೊರೆದರು ಮತ್ತು ಅಂತಿಮವಾಗಿ ಅದ್ಭುತ ಯಶಸ್ಸನ್ನು ಸಾಧಿಸಿದರು.
ಐಎಎಸ್ ತಪಸ್ಯಾ ಕೃಷಿಕನ ಮಗಳು. ಹೌದು, ತಪಸ್ಯಾ ಅವರ ತಂದೆ ವಿಶ್ವಾಸ್ ಪರಿಹಾರ್ ಒಬ್ಬ ರೈತ. ಮಾಧ್ಯಮ ವರದಿಗಳ ಪ್ರಕಾರ, ಅವರ ಅಜ್ಜಿ ನರಸಿಂಗ್ಪುರ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಸ್ಥಾನವನ್ನು ಹೊಂದಿದ್ದರು. ಇನ್ನು, ಐಎಎಸ್ ತಪಸ್ಯಾ ಅವರ ಪತಿಯ ಬಗ್ಗೆ ಹೇಳುವುದಾದರೆ, ಅವರ ಪತಿಯ ಹೆಸರು ಗರ್ವಿತ್ ಗಂಗ್ವಾರ್. ಅವರು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಯಾಗಿದ್ದಾರೆ.
ಈ ಜೋಡಿಯ ಮೊದಲ ಭೇಟಿಯು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್ಬಿಎಸ್ಎನ್ಎಎ) ನಲ್ಲಿ ತರಬೇತಿಯ ಸಮಯದಲ್ಲಿ ಆಗಿತ್ತು.ಆರಂಭದಲ್ಲಿ ತಮಿಳುನಾಡು ಕೇಡರ್ಗೆ ನಿಯೋಜಿಸಲ್ಪಟ್ಟ ತಪಸ್ಯಾ ನಂತರ ತಮ್ಮ ವಿವಾಹದ ನಂತರ ಪತಿಯೊಂದಿಗೆ ಇರಲು ಮಧ್ಯಪ್ರದೇಶ ಕೇಡರ್ಗೆ ವರ್ಗಾವಣೆಗೊಂಡರು.
ಅಂದಹಾಗೆ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಐಎಎಸ್ ತಪಸ್ಯಾ ಪರಿಹಾರ್ ಅವರು ಪ್ರಸ್ತುತ ಮಧ್ಯ ಪರದೇಶದ ಛತ್ತರ್ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರೈತನ ಮಗಳಾದರೇನು ಎಲ್ಲರೂ ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ ತಪಸ್ಯಾ ಪರಿಹಾರ್. ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವ ಅಧ್ಯಯನದ ಮೂಲಕವೇ ಈ ಸಾಧನೆ ಮಾಡಿರುವುದು ವಿಶೇಷವೇ ಹೌದು. ಇವರ ಸಾಧನೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುವ ಅನೇಕ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿರುವುದು ಸುಳ್ಳಲ್ಲ.
June 21, 2025 5:11 PM IST

