Last Updated:
ವೈದ್ಯರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯು.ಟಿ.ಖಾದರ್ ಅವರು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಬೆಂಗಳೂರು: ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ (U. T. Khader) ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಖಾತೆ ಹಂಚಿಕೆಯಾದಾಗಿನಿಂದ ಫುಲ್ ಆ್ಯಕ್ಟೀವ್ ಆಗಿರುವ ಯು.ಟಿ. ಖಾದರ್ ಅವರು ವೈದ್ಯರ ಕೊರತೆ (Shortage of Doctors) ನೀಗಿಸಲು ಮುಂದಾಗಿದ್ದಾರೆ. ಹೊಸ ಆರೋಗ್ಯ ಸಚಿವರ ಸಮ್ಮುಖದಲ್ಲಿ ಹೊಸ ಭರವಸೆ ಮೂಡಿದ್ದು, ವೈದ್ಯರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯು.ಟಿ. ಖಾದರ್ ಅವರು ಮೇಜರ್ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಒಟ್ಟು 1280 ವೈದ್ಯರ ಕೊರತೆ ಇದ್ದು, ಈ ಪೈಕಿ 200 ವೈದ್ಯರ ಖಾಯಂ ನೇರ ನೇಮಕಾತಿಗೆ (permanent) ಆರೋಗ್ಯ ಇಲಾಖೆ ಮುಂದಾಗಿದೆ. ಸುಮಾರು 1000 ಸಾವಿರ ವೈದ್ಯರ ವಾಕ್ ಇನ್ ಇಂಟರ್ವ್ಯೂವ್ ನಡೆಸಲು ತೀರ್ಮಾನಿಸಿದ್ದಾರೆ. ಡಿಎಚ್ಒ ಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿಗೆ ಒಳಪಡಬಹುದಾಗಿದ್ದು, ಐದು ವರ್ಷಗಳ ಸೇವೆ ಸಲ್ಲಿಕೆ ಬಳಿಕ ಸಾಧನೆ ಪರಿಗಣಿಸಿ ಖಾಯಂ ನೇಮಕಾತಿಯ ಭರವಸೆ ನೀಡಲಾಗಿದೆ. ವೈದ್ಯರ ಜೊತೆ 400 ನರ್ಸ್, 400 ಫಾರ್ಮಸಿಸ್ಟ್, 400 ಲ್ಯಾಬ್ ಟೆಕ್ನಿಶಿಯನ್ಸ್ಗಳ ನೇಮಕಾತಿಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಮೊದಲ ಸಮಸ್ಯೆ ವೈದ್ಯರ ಕೊರತೆ ಇದೆ. ಎಂಬಿಬಿಎಸ್ 1280 ಕೊರತೆ, 924 ಸ್ಪೆಷಲಿಸ್ಟ್, 892 ನರ್ಸ್ಗಳ ಕೊರತೆ ಇದೆ. ನೇಮಕಾತಿಗೆ ನಾವು ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ವಾಕ್ ಇನ್ ಇಂಟ್ರವ್ಯೂ ಮಾಡಲು ನಿರ್ಧರಿಸಿದ್ದೇವೆ. ಡಿಹೆಚ್ಓಗಳಿಗೆ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಎಂಬಿಬಿಎಸ್ ವೈದ್ಯರಿಗೆ 1,10,000 ರೂ, ಸ್ಟೂಡೆಂಟ್ಗಳಿಗೆ 10 ಸಾವಿರ ಕೊಡಲಾಗುತ್ತದೆ. ಕಂಟ್ರ್ಯಾಕ್ಟ್ನಲ್ಲಿ ಕೆಲಸ ಮಾಡುವವರಿಗೆ (ಉತ್ತಮ ಕೆಲಸ ಮಾಡಿದವರು) ಪರ್ಮನೆಂಟ್ ಜಾಬ್ ಮಾಡಲು ನಿರ್ಧರಿಸಿದ್ದೇವೆ. ಪಿಜಿ ಅವಕಾಶ ಕೊಡಲಾಗುತ್ತದೆ. ಎಂಬಿಬಿಎಸ್ ಮಾಡುವವರಿಗೆ ಪಿಜಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ನಗರ ಮಟ್ಟದಲ್ಲಿ ವೈದ್ಯರಿದ್ದಾರೆ ಆದ್ರೆ ಗ್ರಾಮೀಣ, ಗುಡ್ಡಗ್ರಾಮದಲ್ಲಿ ವೈದ್ಯರ ಕೊರತೆ ಇದೆ ಎಂದರು.
(ವರದಿ: ಹಂಸಶ್ಯಾಮಲ, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka

