Advertisement
Advertisement

Job News: ವಕೀಲರಿಗೆ ಗುಡ್ ನ್ಯೂಸ್, ಚಿಕ್ಕಮಗಳೂರಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

Whatsapp image 2026 02 27 at 4.26.03 pm 2026 02 cf9840b7a47e41af4728ebe1aa611859 1200x675.jpeg


Last Updated:

ಚಿಕ್ಕಮಗಳೂರು ಜಿಲ್ಲೆಯ ಕಡೂರು ಕಂದಾಯ ತಾಲೂಕಿನಲ್ಲಿ ನೋಟರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ, ಅರ್ಜಿ ಸಲ್ಲಿಸಲು ಮಾರ್ಚ್ 25ರ ಸಂಜೆ 5 ಗಂಟೆಯೊಳಗೆ ಭೌತಿಕವಾಗಿ ಅರ್ಜಿ ಸಲ್ಲಿಸಬೇಕು.

ವಕೀಲರ ಉದ್ಯೋಗ
ವಕೀಲರ ಉದ್ಯೋಗ

ಚಿಕ್ಕಮಗಳೂರು: ನೀವು ವಕೀಲರ? (Lawyers) ನೋಟರಿ ಹುದ್ದೆ ಹುಡುಕಾಟ ನಡೆಸುತ್ತಾ ಇದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ ನೋಟರಿ ಹುದ್ದೆಗೆ (Job) ನೇಮಕಾತಿ ನಡಿತಾ ಇದೆ. ಕರ್ನಾಟಕ (Karnataka) ಸರ್ಕಾರದ ಆದೇಶದನ್ವಯ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಕಂದಾಯ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಸೃಷ್ಟಿಸಲಾಗಿರುವ ಒಂದು ನೋಟರಿ ಹುದ್ದೆಯನ್ನು ಭರ್ತಿ ಮಾಡುವ ಕುರಿತಂತೆ ಅರ್ಜಿ ಆಹ್ವಾನಿಸಲಾಗಿದೆ.

ವಕೀಲರಿಂದ ಅರ್ಜಿ ಆಹ್ವಾನ

ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ (ಆಡಳಿತ-2) ಯಿಂದ ಒಂದು ನೋಟರಿ ಹುದ್ದೆಯ ನೇಮಕಾತಿಗಾಗಿ ಸ್ಥಳೀಯ ಅರ್ಹ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಕೇಂದ್ರ ಸರ್ಕಾರದ ದಿನಾಂಕ: 24.02.2024ರ ಅಧಿಸೂಚನೆಯನ್ವಯ ನೋಟರೀಸ್ (ಅಮೆಂಡ್‍ಮೆಂಟ್) ರೂಲ್ಸ್ 2024ರ ಅನ್ವಯ ನಿಯಮ 4(2) ರಲ್ಲಿನ ಫಾರಂ-1 ರಂತೆ ಅರ್ಜಿದಾರರು ತಮ್ಮೆಲ್ಲ ವಿವರಗಳನ್ನು ಭರ್ತಿ ಮಾಡಿ, ಅಗತ್ಯವಾದ ದಾಖಲೆಗಳೊಂದಿಗೆ ಸಹಿಗಳನ್ನು ಕಡ್ಡಾಯವಾಗಿ ಮಾಡಿ ಮಾರ್ಚ್ 25ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

ಭೌತಿಕವಾಗಿ ಸಲ್ಲಿಸಬೇಕು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಚೇರಿ, ಚಿಕ್ಕಮಗಳೂರು ಇಲ್ಲಿಗೆ ಭೌತಿಕವಾಗಿ ಸಲ್ಲಿಸಬೇಕು.



Source link

Leave a Reply

Your email address will not be published. Required fields are marked *

TOP