ತಮ್ಮ ಕನಸಿನ ರೆಸ್ಟೋರೆಂಟ್ಗಾಗಿ ಎಲ್ಲಾ ಯೋಜನೆ ಹಾಕಿಕೊಂಡು ಇನ್ನೇನು ರೆಸ್ಟೋರೆಂಟ್ ಉದ್ಘಾಟಿಸಬೇಕು ಎಂದಾದಾಗ ನೈಸರ್ಗಿಕ ವಿಕೋಪ ಅವರನ್ನು ಕನಸನ್ನು ಛಿದ್ರ ಛಿದ್ರಗೊಳಿಸಿತ್ತು. ಅದರಂತೆ, 2013 ರ ನೈಸರ್ಗಿಕ ಪ್ರವಾಹ ಅವರ ರೆಸ್ಟೋರೆಂಟ್ ಅನ್ನು ಸಂಪೂರ್ಣವಾಗಿ ನೆಲಸಮ ಮಾಡಿತು. ಆರು ತಿಂಗಳ ಕಾಲ ಸಂಪೂರ್ಣ ರಸ್ತೆ ಬಂದ್ ಆಯಿತು. ಹೀಗೆ ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಬೇಕಾದ ನನ್ನ ರೆಸ್ಟೋರೆಂಟ್ ಸಂಪೂರ್ಣವಾಗಿ ಮುಚ್ಚಿತು ಎಂದು ಸಂದೀಪ್ ಸ್ಮರಿಸಿಕೊಳ್ಳುತ್ತಾರೆ.
ಅದಾಗ್ಯೂ 2009 ರಲ್ಲಿ ತಮ್ಮ ಇಂಜಿನಿಯರಿಂಗ್ ಉದ್ಯೋಗ ತೊರೆದು, ತಮ್ಮ ತವರಾದ ನೈನಿತಾಲ್ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು. ಸಂದೀಪ್ಗೆ ಆಗ ಮನಸ್ಸಿನಲ್ಲಿ ಇನ್ಯಾವುದೋ ಐಡಿಯಾ ಇರಲಿಲ್ಲ. ಅದರಂತೆ, ಪ್ರವಾಹ ಘಟಿಸಿ ಮೂರು ತಿಂಗಳ ನಂತರ, ಹೊಲದ ಮೂಲಕ ಸಂದೀಪ್ ಹಾದು ಹೋಗುತ್ತಿರುವಾಗ ಕೆಲವು ಮಹಿಳಾ ಕಾರ್ಮಿಕರು ಈರುಳ್ಳಿ ಹಾಗೂ ಪಹಾಡಿ ಉಪ್ಪಿನೊಂದಿಗೆ (ಸಾಂಪ್ರದಾಯಿಕ ರುಬ್ಬುವ ಕಲ್ಲಿನಲ್ಲಿ ತಯಾರಿಸಿದ ಉಪ್ಪು) ರೋಟಿ ಸೇವಿಸುತ್ತಿದ್ದರು.

ಬೆಳ್ಳುಳ್ಳಿ, ಹಸಿಮೆಣಸಿನಿಂದ ತಯಾರಿಸಿದ ಚಪಾತಿ ಹಾಗೂ ಉಪ್ಪನ್ನು ನೀಡಿದರು. ಅತ್ಯಂತ ರುಚಿಕರವಾದ ತಿನಿಸು ಇದಾಗಿತ್ತು. ಈ ಉಪ್ಪಿನೊಂದಿಗೆ ಸೌತೆಕಾಯಿ ಕೂಡ ಸವಿದೆ. ಜೊತೆಗೆ ಪಹಾಡಿ ಉಪ್ಪು ಯಾವುದೇ ಆಹಾರವನ್ನು ರುಚಿಕರವಾಗಿಸುತ್ತದೆ ಎಂಬುದನ್ನು ತಿಳಿದುಕೊಂಡೆ. ಅದೂ ಅಲ್ಲದೆ ನನ್ನ ತಾಯಿ ಕೂಡ ಈ ಉಪ್ಪನ್ನು ಪ್ಯಾಕ್ ಮಾಡಿ ನನಗೆ ನೀಡುತ್ತಿದ್ದರು. ಈ ಉಪ್ಪನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಚನೆ ಯಾರಲ್ಲೂ ಇರಲಿಲ್ಲ ಎಂದು ಸಂದೀಪ್ ಹೇಳುತ್ತಾರೆ.
ಈ ಮಹಿಳೆಯರು ಎಂಜಿಎನ್ಆರ್ಇಜಿಎ ಯೋಜನೆಯಡಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಹಾಗೂ ಅವರ ಪ್ರಮುಖ ಕೆಲಸವೇ ನೆಲ ಅಗೆಯುವುದು ಹಾಗೂ ಬಂಡೆಗಳನ್ನು ಎತ್ತುವುದಾಗಿತ್ತು. ಇನ್ನು ದಿನಕ್ಕೆ 270 ರೂಪಾಯಿ ಅವರಿಗೆ ದೊರೆಯುತ್ತಿತ್ತು. 100 ದಿನಗಳ ಕೆಲಸವಾದರೂ ಸಂಬಳ ಹಾಗೂ ಕೆಲಸದ ಕುರಿತು ಯಾವುದೇ ಭದ್ರತೆ ಇರಲಿಲ್ಲ ಎಂದು ಸಂದೀಪ್ ಹೇಳುತ್ತಾರೆ.
ರುಬ್ಬುವ ಕಲ್ಲಿನಲ್ಲಿ ಉಪ್ಪನ್ನು ಯಾವುದೇ ಶಾಖವಿಲ್ಲದೆ ರುಬ್ಬಲಾಗುತ್ತದೆ. ಇದರಿಂದ ನೈಸರ್ಗಿಕ ರುಚಿ ಹಾಗೂ ಸುವಾಸನೆ ಹಾಗೆಯೇ ಇರುತ್ತದೆ. ಜೊತೆಗೆ ನಿಮ್ಮ ಮಿಕ್ಸಿ ಗ್ರೈಂಡರ್ನಲ್ಲಿ ಈ ಫ್ಲೇವರ್ ರುಚಿ ದೊರೆಯುವುದಿಲ್ಲ ಎಂದು ಸಂದೀಪ್ ಹೇಳುತ್ತಾರೆ. ರುಬ್ಬುವ ಕಲ್ಲಿನಲ್ಲಿ ಎಲ್ಲಾ ಗಿಡಮೂಲಿಕೆ ಮಸಾಲೆಗಳನ್ನು ಸೇರಿಸಿ ರುಬ್ಬಲಾಗುತ್ತದೆ ಇದರಿಂದ ಆಹಾರದ ರುಚಿ ಹೆಚ್ಚುತ್ತದೆ ಎಂಬುದು ಅವರ ಮಾತಾಗಿದೆ.
ರುಬ್ಬುವ ಕಲ್ಲನ್ನು ಮರುಪರಿಚಯಿಸುವ ಯೋಜನೆ ಕೂಡ ಅವರ ಮನದಲ್ಲಿತ್ತು. ಹೀಗಾಗಿ ರೂ 160 ಕ್ಕೆ ರುಬ್ಬುವ ಕಲ್ಲು, ತಾಜಾ ಕೊತ್ತಂಬರಿ, ಹಸಿಮೆಣಸಿನಕಾಯಿ ಖರೀದಿಸಿ ವ್ಯಾಪಾರ ಆರಂಭಿಸಿದರು. ಉತ್ಪನ್ನಗಳನ್ನು ಮಾರಾಟ ಮಾಡಲು, ಸಂದೀಪ್ ಮತ್ತು ಅವರ ಸ್ನೇಹಿತರು ಸ್ಥಳೀಯ ಮೇಳದಲ್ಲಿ ಸ್ಟಾಲ್ ಅನ್ನು ಆರಂಭಿಸಿದರು. ನಮ್ಮ ಉತ್ಪನ್ನಗಳನ್ನು ಗ್ರಾಹಕರು ತುಂಬಾ ಇಷ್ಟಪಟ್ಟರು.
ಮೂರೇ ದಿನದಲ್ಲಿ ಸ್ಟಾಲ್ನಲ್ಲಿದ್ದ ಎಲ್ಲಾ ಉತ್ಪನ್ನ ಖಾಲಿಯಾಗಿತ್ತು. ಸ್ಥಳೀಯರು ಮತ್ತು ಪ್ರವಾಸಿಗರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ನಂತರ ಹಲ್ದ್ವಾನಿಯಲ್ಲಿ ಸ್ಟಾಲ್ ಸ್ಥಾಪಿಸಿ ಏಳು ದಿನಗಳಲ್ಲಿ 1.5 ರಿಂದ 2 ಲಕ್ಷ ರೂ.ವರೆಗೆ ಮಾರಾಟ ಮಾಡಿದೆವು. ಸ್ಥಳೀಯ ಪತ್ರಿಕೆಗಳಲ್ಲಿ ಈ ವಿಷಯ ಸುದ್ದಿಯಾಯಿತು, ಇನ್ನಷ್ಟು ಖ್ಯಾತಿ ಗಳಿಸಿದೆವು ಅಂತೆಯೇ ಆರ್ಡರ್ಗಳ ಸಂಖ್ಯೆ ಕೂಡ ಹೆಚ್ಚಾಯಿತು ಎಂದು ಸಂದೀಪ್ ಹೇಳುತ್ತಾರೆ.
ಐದು ರುಚಿಗಳೊಂದಿಗೆ ಆರಂಭಿಸಿ ಇಂದು ಹಿಮಾಲಯನ್ ಫ್ಲೇವರ್ 52 ಬಗೆಯ ರುಚಿಗಳಲ್ಲಿ ಉಪ್ಪನ್ನು ಮಾರಾಟ ಮಾಡುತ್ತದೆ. ಸ್ಟಾರ್ಟಪ್ ಪಾಕ್ನಿಂದ ಪಿಂಕ್ ಕಲ್ಲುಪ್ಪುನ್ನು ಆಮದು ಮಾಡಿಕೊಳ್ಳುತ್ತದೆ.
ಹಾಗೆಯೇ ನೈನಿತಾಲ್, ಚಮೋಲಿ, ಅಲ್ಮೋರಾದ ಸುತ್ತಮುತ್ತಲಿನ 100 ಹಳ್ಳಿಗಳಿಂದ 1,000 ಕ್ಕೂ ಹೆಚ್ಚಿನ ಮಸಾಲೆ ಪದಾರ್ಥ ಹಾಗೂ ಗಿಡಮೂಲಿಕೆಗಳನ್ನು ಪಡೆದುಕೊಳ್ಳುತ್ತದೆ. ಈ ಸ್ಟಾರ್ಟಪ್ನಲ್ಲಿ 80 ಮಹಿಳೆಯರು ಉದ್ಯೋಗ ಮಾಡುತ್ತಿದ್ದು, ಮೂವರೂ ಸ್ನೇಹಿತರು ಅವರನ್ನು ಆರ್ಥಿಕವಾಗಿ ಸಬಲರಾಗಿಸಿದ್ದಾರೆ.
Uttarakhand (Uttaranchal)
June 08, 2025 11:28 PM IST
