Last Updated:
Govt Job: ನಿಮಗೂ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯಬೇಕೆಂದು ಆಸೆನಾ? ಹಾಗಾದ್ರೆ ಇಲ್ಲಿದೆ ತನಿಖೆ ಮಾಡಲು ಅವಕಾಶ: ಹಾಗಾದ್ರೆ ಕಂದಾಯ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಸಂಬಳ 55 ಸಾವಿರ:
ಬೆಂಗಳೂರು: ನಿಮಗೂ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯಬೇಕೆಂದು ಆಸೆನಾ? ಹಾಗಾದ್ರೆ ಇಲ್ಲಿದೆ ತನಿಖೆ ಮಾಡಲು ಅವಕಾಶ: ಹಾಗಾದ್ರೆ ಕಂದಾಯ ಇಲಾಖೆಯಲ್ಲಿದೆ (Revenue Department) ಭರ್ಜರಿ ಉದ್ಯೋಗಾವಕಾಶ (Great job opportunity); ಸಂಬಳ 55 ಸಾವಿರ:
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿ (ಐಎಂಎ ಮತ್ತು ಇತರೆ ಕಂಪನಿ ವಂಚನೆ ಪ್ರಕರಣಗಳು) ಮಾನವ ಸಂಪನ್ಮೂಲ ಸೇವೆಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಗೆ (Recruitment) ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮೆಗಳನ್ನು 2025ರ ನವೆಂಬರ್ 9ರೊಳಗೆ ಸಲ್ಲಿಸಬೇಕು. ಈ ಅಧಿಸೂಚನೆಯು ಅಕ್ಟೋಬರ್ 28, 2025ರಂದು ಅಧಿಕೃತವಾಗಿ ಪ್ರಕಟಗೊಂಡಿದೆ.
ಈ ಹುದ್ದೆಗಳ ನೇಮಕಾತಿ ಕಾರ್ಯವು ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿಯ ಮೂಲಕ ನಡೆಯಲಿದೆ.
- ವಿಳಾಸ: ಪೋಡಿಯಂ ಬ್ಲಾಕ್, 3ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು – 560001
- ಇಮೇಲ್: splocaima21@gmail.com
- ದೂರವಾಣಿ ಸಂಖ್ಯೆ: 080-29565353
ರೆಸ್ಯೂಮೆ ಸಲ್ಲಿಸಲು ಕೊನೆಯ ದಿನಾಂಕ 09.11.2025 ಎಂದು ತಿಳಿಸಲಾಗಿದೆ.
ಈ ಹುದ್ದೆಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರ್ ಅಥವಾ ಉಪ ತಹಶೀಲ್ದಾರ್ ಹುದ್ದೆಯಿಂದ ನಿವೃತ್ತರಾದವರು ಮಾತ್ರ ಅರ್ಹರಾಗಿದ್ದಾರೆ. ಅಭ್ಯರ್ಥಿಯು ಯಾವುದೇ ರೀತಿಯ ಇಲಾಖಾ ವಿಚಾರಣೆ ಅಥವಾ ಅಪರಾಧಿಕ ಮೊಕದ್ದಮೆ ಹೊಂದಿರಬಾರದು. ವಯೋಮಿತಿ ಗರಿಷ್ಠ 65 ವರ್ಷ. ಆಯ್ಕೆಯಾದವರಿಗೆ ತಿಂಗಳಿಗೆ ರೂ. 52,000 ರಿಂದ ರೂ. 55,000 ವರೆಗೆ ಗುತ್ತಿಗೆ ವೇತನ ನೀಡಲಾಗುತ್ತದೆ. ವೇತನವು ವಿದ್ಯಾರ್ಹತೆ, ಅನುಭವ ಹಾಗೂ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ.
ಈ ಹುದ್ದೆಗೆ ಎಂ.ಕಾಂ ಅಥವಾ ಎಂ.ಟೆಕ್ (ದತ್ತಾಂಶ ವಿಜ್ಞಾನ ಅಥವಾ ಸಂಖ್ಯಾಶಾಸ್ತ್ರ) ಅಥವಾ ಎಂ.ಎಸ್ಸಿ (ಗಣಿತ) ಪದವಿದಾರರು ಅರ್ಹರು. ದತ್ತಾಂಶ ವಿಜ್ಞಾನದಲ್ಲಿ ಪ್ರತ್ಯೇಕ ಪ್ರಮಾಣಪತ್ರ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಬ್ಯಾಂಕ್ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಆಡಿಟರ್, ಲೆಕ್ಕಪತ್ರ ನಿರ್ವಾಹಕ ಅಥವಾ ಫೋರೆನ್ಸಿಕ್ ಆಡಿಟ್ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಅಗತ್ಯ. 10 ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ. ಆಯ್ಕೆಯಾದವರಿಗೆ ಮಾಸಿಕ ವೇತನ ರೂ. 50,000 ರಿಂದ ರೂ. 55,000 ವರೆಗೆ ನೀಡಲಾಗುತ್ತದೆ.
ಈ ಹುದ್ದೆಗೆ ಬಿಇ (ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಶನ್ ಸೈನ್ಸ್) ಪದವಿಯ ಜೊತೆಗೆ ನೆಟ್ವರ್ಕಿಂಗ್ ಅಥವಾ ಪೈಥಾನ್ ಸರ್ಟಿಫಿಕೇಟ್ ಅಗತ್ಯವಿದೆ. ಕನಿಷ್ಠ ಒಂದು ವರ್ಷದ ಪ್ರೋಗ್ರಾಮಿಂಗ್ ಅಥವಾ ಡೇಟಾ ಸೈನ್ಸ್ ಅನುಭವ ಕಡ್ಡಾಯ. ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ವೇತನ ರೂ. 45,000 ರಿಂದ ರೂ. 50,000 ವರೆಗೆ ನಿಗದಿಯಾಗಿದೆ.
ಈ ಎಲ್ಲಾ ಹುದ್ದೆಗಳು ಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಇರುತ್ತವೆ. ಶಾಶ್ವತ ಸರ್ಕಾರಿ ಸೇವೆಯ ಭಾಗವಾಗುವುದಿಲ್ಲ. ಗುತ್ತಿಗೆ ಅವಧಿ ವರ್ಷದಿಂದ ವರ್ಷಕ್ಕೆ ನವೀಕರಿಸಲಾಗುತ್ತದೆ ಮತ್ತು ಅದು ನೌಕರರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ವೇತನದ ಪರಿಷ್ಕರಣೆಗೂ ಇದೇ ಅಂಶಗಳು ಅನ್ವಯವಾಗುತ್ತವೆ.
ಈ ನೇಮಕಾತಿಯು ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳನ್ನು ನಿರ್ವಹಿಸಲು ವಿಶೇಷಾಧಿಕಾರಿ ಕಚೇರಿಯ ಆಡಳಿತ ಮತ್ತು ತಾಂತ್ರಿಕ ತಂಡವನ್ನು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಸರ್ಕಾರಿ ನಿವೃತ್ತ ಅಧಿಕಾರಿಗಳು ಹಾಗೂ ತಜ್ಞರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
Bangalore,Karnataka
November 03, 2025 8:22 PM IST
Govt Job: ನಿಮಗೂ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯಬೇಕೆಂದು ಆಸೆನಾ? ಹಾಗಾದ್ರೆ ಇಲ್ಲಿದೆ ತನಿಖೆ ಮಾಡಲು ಅವಕಾಶ; ಸಂಬಳ 55 ಸಾವಿರ

