Last Updated:
ಚಿಕ್ಕಮಗಳೂರು ಸರ್ಕಾರಿ ಶಾಲಾ ಮಕ್ಕಳಿಗೆ ಜಿಲ್ಲಾ ಪಂಚಾಯಿತಿ, ಕೀರ್ತನಾ ಹೆಚ್.ಎಸ್. ಮತ್ತು ಕ್ಯಾನನ್ ಸಹಯೋಗದಲ್ಲಿ ಬೇಸಿಗೆ ಬೆಸುಗೆ ಫೋಟೋಗ್ರಫಿ ಶಿಬಿರ, ಹಳ್ಳಿಯ ಮಕ್ಕಳು ಪ್ರೊಫೆಷನಲ್ ತರಬೇತಿ ಪಡೆಯುತ್ತಿದ್ದಾರೆ.
ಚಿಕ್ಕಮಗಳೂರು: ಬೇಸಿಗೆ (Summer) ರಜೆ ಬಂತೆಂದರೆ ಶ್ರೀಮಂತರ ಮಕ್ಕಳು ಸಾವಿರಾರು ರೂಪಾಯಿ ಫೀಸ್ ಕಟ್ಟಿ ಹೈಟೆಕ್ ಸಮ್ಮರ್ ಕ್ಯಾಂಪ್ಗಳಿಗೆ (Camp) ಹೋಗುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಸರ್ಕಾರಿ ಶಾಲೆಯ (Govt School) ಮಕ್ಕಳು ಈಗ ವಿಶ್ವದರ್ಜೆಯ ಕ್ಯಾಮೆರಾ ಹಿಡಿದು ಫೋಟೋಗ್ರಫಿ (Photography) ಕಲಿಯುತ್ತಿದ್ದಾರೆ. ಹೌದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಹೆಚ್.ಎಸ್. ಅವರ ದೂರದೃಷ್ಟಿಯ ಫಲವಾಗಿ ಬೇಸಿಗೆ ಬೆಸುಗೆ ಎಂಬ ವಿನೂತನ ಶಿಬಿರ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ.
ಕೇವಲ ಆಟ-ಪಾಠಕ್ಕಷ್ಟೇ ಸೀಮಿತವಾಗದ ಈ ಶಿಬಿರದಲ್ಲಿ ಗ್ರಾಮೀಣ ಕ್ರೀಡೆಗಳ ಜೊತೆಗೆ ಇಂತಹ ವೃತ್ತಿಪರ ಕೌಶಲಗಳನ್ನು ಪರಿಚಯಿಸುತ್ತಿರುವುದು ಮಕ್ಕಳಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಈ ಶಿಬಿರ ನಡೆಯುತ್ತಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ ಈ ರಜೆ ನಿಜಕ್ಕೂ ನೆನಪಿನಲ್ಲಿ ಉಳಿಯುವಂತಾಗಿದೆ. ಒಟ್ಟಿನಲ್ಲಿ, ಕಾಫಿನಾಡಿನ ಈ ಹೊಸ ಪ್ರಯತ್ನವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.
Chikmagalur,Chikmagalur,Karnataka
