ಆದರೆ ಇನ್ನೂ ಕೆಲವರು ಒಂದು ಅವಕಾಶ ಹೋದರೆ ಏನಾಯ್ತು, ಮತ್ತೊಂದು ಒಳ್ಳೆಯ ಅವಕಾಶವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಅಂತ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇಲ್ಲಿಯೂ ಸಹ ಇಂತಹದೇ ಒಂದು ಯಶಸ್ಸಿನ ಸ್ಟೋರಿ (Success Story) ಇದೆ ನೋಡಿ.
ಐಐಟಿ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡುವಲ್ಲಿ ವಿಫಲರಾದ ವೀರಜ್ ಗಡ್ಡಾ ಅವರು ಎಂಜಿನಿಯರಿಂಗ್ ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಲು ಮನಸ್ಸು ಮಾಡಿದರು. ಅವರ ಪೋಷಕರು ಸಹ ಅವರ ಯುಎಸ್ ಶಿಕ್ಷಣಕ್ಕಾಗಿ ಗಣನೀಯ ಸಾಲವನ್ನು ಸಹ ಪಡೆದರು. ಆರಂಭಿಕ ಶೈಕ್ಷಣಿಕ ಹೋರಾಟಗಳು ಮತ್ತು ಟೀಕೆಗಳ ಹೊರತಾಗಿಯೂ, ಅವರು ತಮ್ಮ ಅಧ್ಯಯನ ಮತ್ತು ಉದ್ಯೋಗ ಹುಡುಕಾಟಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು.
ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಕಂಡ ವಿಫಲತೆಯ ನಿರಾಶೆ ಅವರ ಭವಿಷ್ಯವನ್ನು ವ್ಯಾಖ್ಯಾನಿಸಲು ಬಿಡಲಿಲ್ಲ, ಅವರು ಅದನ್ನು ತಾತ್ಕಾಲಿಕ ಹಿನ್ನಡೆ ಎಂದು ಪರಿಗಣಿಸಿದರು. ವರ್ಷಗಳ ನಂತರ, ಅವರು ಇಲಿನಾಯ್ಸ್ನಲ್ಲಿ ಒಂದು ಸ್ವಂತ ಮನೆಯ ಮಾಲೀಕರಾದರು, ಇದು ಒಂದು ಕಾಲದಲ್ಲಿ ಅವರಿಗೆ ಊಹಿಸಲಾಗದ ಮೈಲಿಗಲ್ಲು ಆಗಿತ್ತು. ದಿ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗೆ ತಮ್ಮ ಜೀವನ ಪ್ರಯಾಣವನ್ನು ಪ್ರತಿಬಿಂಬಿಸುತ್ತಾ, ವೀರಜ್ ಅವರ ಪರಿಶ್ರಮವು ತಮ್ಮ ಹಣೆಬರಹವನ್ನು ಹೇಗೆ ಮರುರೂಪಿಸಿತು ಎಂಬುದನ್ನು ವಿವರಿಸಿದರು.
ಮುಂಬೈನ ದಾದರ್ನಲ್ಲಿ ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ವೀರಜ್, ತನ್ನ ತಂದೆ ದಣಿವರಿಯಿಲ್ಲದೆ ಕೆಲಸ ಮಾಡುವುದನ್ನು ನೋಡುತ್ತಾ ಬೆಳೆದರು. ಅವರ ತಂದೆ ಸಣ್ಣ ಪೀಠೋಪಕರಣ ಅಂಗಡಿಯನ್ನು ನಡೆಸುತ್ತಿದ್ದರು. ಸೀಮಿತ ಆದಾಯದ ಹೊರತಾಗಿಯೂ, ಅವರು ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಹೊಂದಿದ್ದರು.
ಅವರ ಮೂವರು ಮಕ್ಕಳು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಬೇಕು ಅನ್ನೋ ಆಕಾಂಕ್ಷೆಗೆ ವಾಸ್ತವದ ರೂಪ ನೀಡಲು, ಅವರು ಪ್ರತಿದಿನ ಮುಂಜಾನೆಯಿಂದ ತಡರಾತ್ರಿಯವರೆಗೆ ಶ್ರಮಿಸಿದರು.
ವೀರಜ್ ಅವರು ಐಐಟಿಗೆ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗದೆ ಇದ್ದಾಗ ನಂತರ ಸಾಮಾನ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿ ಮುಗಿಸಿದ ನಂತರ ತಮ್ಮ ಸ್ನೇಹಿತರಿಗೆ ಕ್ಯಾಂಪಸ್ ಇಂಟರ್ವ್ಯೂವ್ನಲ್ಲಿ ಉದ್ಯೋಗ ಸಿಕ್ಕಿತು, ಇವರಿಗೆ ಮಾತ್ರ ಸಿಗಲಿಲ್ಲ. ಹಾಗಾಗಿ ಈ ಸಮಯದಲ್ಲಿ ಅವರು ತುಂಬಾನೇ ಟೀಕೆಗಳನ್ನು ಎದುರಿಸಿದರು ಮತ್ತು ನಿರಾಶೆಯನ್ನು ಸಹ ಅನುಭವಿಸಿದರು.
ಹೆತ್ತವರು ಅವರ ಬೆಂಬಲಕ್ಕೆ ನಿಂತರು ಮತ್ತು ಅಮೆರಿಕದಲ್ಲಿ ಎಂ ಎಸ್ ಮಾಡಲು ಹಣಕಾಸು ನೆರವು ಒದಗಿಸಲು 40 ಲಕ್ಷ ರೂಪಾಯಿ ಸಾಲವನ್ನು ಪಡೆದರು. ಅಮೆರಿಕದಲ್ಲಿ ಓದಲು ಹೋದ ಅವರು ಮೊದಲ ಸೆಮಿಸ್ಟರ್ನಲ್ಲಿಯೇ ಕೆಟ್ಟ ಅಂಕಗಳನ್ನು ಪಡೆದರು ಮತ್ತು ಅವರು ಅಲ್ಲಿನ ವೇಗಕ್ಕೆ ಸರಿಹೊಂದಲು ತುಂಬಾನೇ ಹೆಣಗಾಡಿದರು.
ಪರೀಕ್ಷೆಯ ನಂತರ, ಸಹೋದ್ಯೋಗಿಗಳು ಉದ್ಯೋಗಾವಕಾಶಗಳ ಬಗ್ಗೆ ಚರ್ಚಿಸುವುದನ್ನು ಅವರು ಕೇಳಿಸಿಕೊಂಡರು ಮತ್ತು ಅವರ ಹೆಸರು ಕಾಣಿಸಿಕೊಂಡಾಗ, ಅವರ ಕಡಿಮೆ ಅಂಕಗಳು ಮತ್ತು ಕೌಶಲ್ಯದ ಕೊರತೆಯು ಅವರನ್ನು ಉದ್ಯೋಗವನ್ನು ಪಡೆಯುವುದನ್ನು ತಡೆಯುತ್ತದೆ ಎಂದು ಯಾರೋ ಗಮನಿಸಿದರು. ಈ ರೀತಿಯ ಅನಿಸಿಕೆಗಳು ಅವರ ಮೇಲೆ ತೀವ್ರ ಪರಿಣಾಮ ಬೀರಿದವು.
ಅವರ ವೀಸಾದಲ್ಲಿ ಕೇವಲ 90 ದಿನಗಳು ಮಾತ್ರವೇ ಉಳಿದಿದ್ದು, ಯಾವುದೇ ಉದ್ಯೋಗದ ಪ್ರಸ್ತಾಪವಿಲ್ಲದ ಕಾರಣ ಅವರು ತುಂಬಾನೇ ಬೇಸರ ಮಾಡಿಕೊಂಡರು. ತಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದ ಅವರು ಪ್ರತಿದಿನ 14 ಗಂಟೆಗಳವರೆಗೆ ಅಧ್ಯಯನ ಮಾಡಿದರು, ಲೆಕ್ಕವಿಲ್ಲದಷ್ಟು ಉದ್ಯೋಗ ಅರ್ಜಿಗಳನ್ನು ಸಲ್ಲಿಸಿದರು ಮತ್ತು ನಿರಂತರ ನಿರಾಕರಣೆಯನ್ನು ಸಹಿಸಿಕೊಂಡರು.
ತಮ್ಮ ಉದ್ಯೋಗ ಹುಡುಕಾಟದ ಎಪ್ಪತ್ತೊಂದನೇ ದಿನದಂದು, ಅವರು ನಾಲ್ಕು ಕಠಿಣ ಸುತ್ತುಗಳನ್ನು ಒಳಗೊಂಡ ಸಂದರ್ಶನಕ್ಕಾಗಿ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು. ಸ್ವಲ್ಪ ಸಮಯದ ನಂತರ, ಅವರಿಗೆ ಒಂದು ಆಫರ್ ಬಂದಿತು.
