Last Updated:
IAS Success Story: ಕ್ಲಾಸ್ನ ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಸಾಮಾನ್ಯ ಹುಡುಗಿಯೊಬ್ಬಳು, ಒಂದು ದಿನ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಉತ್ತರ ಪ್ರದೇಶದ ಈ ಹುಡುಗಿ ತನ್ನ ಹಠ, ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಎಲ್ಲರ ಊಹೆಗಳನ್ನು ಸುಳ್ಳು ಎನ್ನುತ್ತಾ UPSC ಪರೀಕ್ಷೆಯನ್ನ ಒಂದಲ್ಲಾ ನಾಲ್ಕು ಬಾರಿ ಪಾಸ್ ಮಾಡಿದ್ದಾರೆ. ಈ ಮೂಲಕ ಶಾಲೆಯ ಅಂಕಗಳು ಜೀವನದ ಗುರಿಯನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.
IAS Success Story: ಕ್ಲಾಸ್ನ ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಸಾಮಾನ್ಯ ಹುಡುಗಿಯೊಬ್ಬಳು, ಒಂದು ದಿನ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಸಿವಿಲ್ ಸರ್ವೀಸ್ ಪರೀಕ್ಷೆಯನ್ನು (Civil Service Examination) ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗುತ್ತಾರೆ (IAS officer) ಎಂದು ಯಾರೂ ಊಹಿಸಿರಲಿಲ್ಲ. ಆದರೆ ಉತ್ತರ ಪ್ರದೇಶದ ಈ ಹುಡುಗಿ ತನ್ನ ಹಠ, ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಎಲ್ಲರ ಊಹೆಗಳನ್ನು ಸುಳ್ಳು ಎನ್ನುತ್ತಾ UPSC ಪರೀಕ್ಷೆಯನ್ನ ಒಂದಲ್ಲಾ ನಾಲ್ಕು ಬಾರಿ ಪಾಸ್ ಮಾಡಿದ್ದಾರೆ. ಈ ಮೂಲಕ ಶಾಲೆಯ ಅಂಕಗಳು ಜೀವನದ ಗುರಿಯನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.
ಯುಪಿಎಸ್ಸಿ ಕೇವಲ ಪುಸ್ತಕದ ಬದನೆಕಾಯಿ ಅಥವಾ ಶಾಲೆಯಲ್ಲಿ ಟಾಪರ್ಗಳಿಗೆ ಮಾತ್ರ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಿವಾಸಿ ತೃಪ್ತಿ ಕಲ್ಹನ್ಸ್ ಈ ಮಾತನ್ನು ಸುಳ್ಳು ಎಂದು ಸಾಬೀತು ಮಾಡಿದರು. ಯಾಕೆಂದರೆ, ಅವರು ಎಂದಿಗೂ ತರಗತಿಯ ಟಾಪರ್ ಆಗಿರಲಿಲ್ಲ. ಬದಲಿಗೆ, ಶಾಲಾ ದಿನಗಳಲ್ಲಿ ಲಾಸ್ಟ್ ಬೆಂಚಿನಲ್ಲಿ ಕುಳಿತು ಮೋಜು-ಮಸ್ತಿ ಜೊತೆಗೆ ಯಾವುದೇ ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳಿಸದ ತೃಪ್ತಿಯವರು ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಿಂದ ಬಿಕಾಂ ಪದವಿ ಪಡೆದರು.
ಬ್ಯಾಕ್ಬೆಂಚರ್ ಆಗಿರುವುದರಲ್ಲಿ ಒಂದು ಲಾಭವಿದೆ ಎನ್ನುವ ಅವರು, ಬೀಳುವ ಭಯ ಕಡಿಮೆ, ಏಕೆಂದರೆ ಮೇಲೇಳಲು ಮಾತ್ರ ಅವಕಾಶ ಇರುತ್ತದೆ ಎಂಬುದು ಅವರ ವಿಶ್ವಾಸ. ಯಾಕೆಂದರೆ, ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ಸೋಲು ಕಂಡರು. ಹೌದು, ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕು ಭಾರಿ ಯುಪಿಎಸ್ಸಿ ಪರೀಕ್ಷೆಯನ್ನ ಪಾಸ್ ಮಾಡುವಲ್ಲಿ ವಿಫಲರಾದರು. ಇದಾದ ನಂತರ, ಸಂಬಂಧಿಕರ ಜೊತೆಗೆ ಅಕ್ಕ ಪಕ್ಕದ ಮನೆಯವರಿಂದ ದಿನವೂ ಟೀಕೆಗಳು ಹೆಚ್ಚಾದವು. ಆದರೆ, ಅವರು ಪ್ರತೀ ಸೋಲಿನ ನಂತರ ಮತ್ತಷ್ಟು ದೃಢವಾಗ ತೊಡಗಿದರು. ಅದರಂತೆ, ಐದನೇ ಬಾರಿಗೆ ಅವರು….
ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ತರ್ಗೆಡೆ ಹೊಂದದೆ ಇದ್ದಾಗ ಮನಸ್ಸು ಬದಲಾಯಿಸಿದ ಅವರು, ಟಾಪರ್ಗಳನ್ನೇ ಅನುಸರಿಸುವ ಬದಲು ತಮ್ಮ ಶಕ್ತಿಗೆ ತಕ್ಕಂತೆ ಪರೀಕ್ಷೆ ಪಾಸ್ ಮಾಡಲು ರೆಡಿಯಾದರು. ಅದರಂತೆ, ದಿನಕ್ಕೆ 18 ಗಂಟೆ ಓದುವುದರ ಬದಲು ಕಡಿಮೆ ಸಮಯದಲ್ಲಿಯೇ ಉತ್ತಮ ಗುಣಮಟ್ಟದ ಅಧ್ಯಯನಕ್ಕೆ ಒತ್ತು ನೀಡಿದರು. ಅದರಂತೆ, ಕಠಿಣ ವಿಷಯಗಳನ್ನು ಕಥೆಗಳಂತೆ, ತಮ್ಮದೇ ಭಾಷೆಯಲ್ಲಿ ಅರ್ಥಮಾಡಿಕೊಂಡ ಅವರು, ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಸಂಪೂರ್ಣವಾಗಿ ತಯಾರಿಯ ಮೇಲೆಯೇ ಗಮನ ಕೇಂದ್ರೀಕರಿಸಿದರು.
ಮುಂದುವರೆದು, ಯುಪಿಎಸ್ಸಿ ಸಂದರ್ಶನದ ವೇಳೆ ಸರಳತೆ ಹಾಗೂ ಅವರ ಪ್ರಾಮಾಣಿಕತೆಯು ಸಂದರ್ಶಕರನ್ನು ಆಕರ್ಷಿಸಿತು. ಯಾಕೆಂದರೆ ಅವರು ತಮ್ಮ ವಿದ್ಯಾಭ್ಯಾಸದ ಸರಾಸರಿ ಹಿನ್ನೆಲೆ ಮತ್ತು ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ಸೋಲುಗಳ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದರು. ಇದರ ಫಲವಾಗಿ 2023 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 199ನೇ ರ್ಯಾಂಕ್ ಪಡೆದು ಅವರು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಇಂದು ತೃಪ್ತಿ ಕಲ್ಹನ್ಸ್ ಅವರ ಸಾಧನೆಯು ಜೀವನದಲ್ಲಿ ಯಶಸ್ಸಿಗೆ ಚಿನ್ನದ ಪದಕವೇ ಗೆಲುವು ಆಗಬೇಕೆಂದಿಲ್ಲ. ಬದಲಿಗೆ ಕೇವಲ ಕಠಿಣ ಪರಿಶ್ರಮವೊಂದೆ ಸಾಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

