Advertisement
Advertisement

SSLC Exam Results 2026: ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು; SSLC ಪರೀಕ್ಷೆಯಲ್ಲಿ ಗಂಡುಮಕ್ಕಳ ಬೃಹತ್ ಸಾಧನೆ

Madhu bangarappa 2026 04 f4257029b1ab2858bef568ee0315b7f0.jpg


Last Updated:

ವಿಶೇಷ ಎಂದರೇ, ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಾಲಕರ ಫಲಿತಾಂಶ ಉತ್ತಮವಾಗಿ ಬಂದಿದೆ. 2024-25ನೇ ಅವಧಿಯಲ್ಲಿ ಕೇವಲ ಶೇಕಡಾ 74.25 ಫಲಿತಾಂಶ ಮಾತ್ರ ಬಾಲಕರು ಪಡೆದುಕೊಂಡಿದ್ದರು.

ಸಚಿವ ಮಧು ಬಂಗಾರಪ್ಪ (ಸಂಗ್ರಹ ಚಿತ್ರ)
ಸಚಿವ ಮಧು ಬಂಗಾರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದ ಎಸ್​​ಎಸ್​​ಎಲ್​ಸಿ ಫಲಿತಾಂಶ (Karnataka Secondary Education Examination Board ) ಇಂದು ಮಧ್ಯಾಹ್ನ 12 ಗಂಟೆಗೆ ಘೋಷಣೆ ಮಾಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ (Minister Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ಪ್ರಕಟಿಸಿದ್ದಾರೆ. ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದ 7,70,209 ವಿದ್ಯಾರ್ಥಿಗಳಲ್ಲಿ 7,24,794 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ (SSLC Students). ಇದರೊಂದಿಗೆ ಈ ಬಾರಿ ದಾಖಲೆಯ ಶೇಕಡಾ 94.1 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇಕಡಾವಾರು ಫಲಿತಾಂಶ 13.7 ರಷ್ಟು ಹೆಚ್ಚಾಗಿದೆ. 2024-25ರಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ 80.04 ರಷ್ಟು ಲಭಿಸಿತ್ತು.

ಲಿಂಗವಾರು ಫಲಿತಾಂಶ ನೋಡುವುದಾದರೆ, ಈ ಬಾರಿಯೂ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 3,92,922 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 3,77,922 ಮಂದಿ ವಿದ್ಯಾರ್ಥಿನಿಯರು ಪಾಸ್ ಆಗುವ ಮೂಲಕ ಶೇಕಡಾ 96.18 ರಷ್ಟು ಫಲಿತಾಂಶವನ್ನು ಸಾಧನೆ ಮಾಡಿದ್ದಾರೆ. ಇನ್ನು ಬಾಲಕರಲ್ಲಿ 3,77,287 ಮಂದಿಯಲ್ಲಿ 3,46,872 ಮಂದಿ ಬಾಲಕರು ಉತೀರ್ಣರಾಗಿ ಶೇಕಡಾ 91.94 ರಷ್ಟು ಫಲಿತಾಂಶ ಸಾಧನೆ ಮಾಡಿದ್ದಾರೆ.

ವಿಶೇಷ ಎಂದರೇ, ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಾಲಕರ ಫಲಿತಾಂಶ ಉತ್ತಮವಾಗಿ ಬಂದಿದೆ. ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇಕಡಾ 91.94 ರಷ್ಟು ಬಾಲಕರು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. 2024-25ನೇ ಅವಧಿಯಲ್ಲಿ ಕೇವಲ ಶೇಕಡಾ 74.25 ಫಲಿತಾಂಶ ಮಾತ್ರ ಬಾಲಕರು ಪಡೆದುಕೊಂಡಿದ್ದರು. ಅಂದರೆ 3,93,862 ಬಾಲಕರು ಪರೀಕ್ಷೆ ಬರೆದು 2,92,438 ಮಂದಿ ಮಾತ್ರ ಉತೀರ್ಣರಾಗಿದ್ದರು. ಇದರೊಂದಿಗೆ ಈ ಬಾರಿ ಬಾಲಕರ ಫಲಿತಾಂಶವೂ ಶೇಕಡಾ 17.69 ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಬಾಲಕರಿಗೆ ವಿಶೇಷವಾಗಿ ಶುಭಾಶಯಾಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Karnataka SSLC Results 2026 Live: ಎಸ್​​ಎಸ್​​ಎಲ್​ಸಿ 2ನೇ ಪರೀಕ್ಷೆಗೆ ದಿನಾಂಕ ಘೋಷಣೆ! 3ನೇ ಪರೀಕ್ಷೆ ಇಲ್ಲ!

ಇನ್ನು, ಇದೇ ವೇಳೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಬಗ್ಗೆ ಸ್ಪಷ್ಟನೆ ನೀಡಿರು ಸಚಿವರು, ಹೈಕೋರ್ಟ್ ಆದೇಶ ದಂತೆ ಗ್ರೇಡ್ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ನ್ಯಾಯಾಲಯ ಆದೇಶ ಮತ್ತು ಇಲಾಖೆಯ ನಿರ್ಧಾರದ ಕುರಿತು ಬುಧವಾರ ಸಂಜೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಇ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಮಾನ ಪಾಲನೆಗೆ ತೀರ್ಮಾನಿಸಲಾಗಿತ್ತು.



Source link

Leave a Reply

Your email address will not be published. Required fields are marked *

TOP