Advertisement
Advertisement

School: 105 ವರ್ಷಗಳ ಇತಿಹಾಸವಿರುವ ಶಾಲೆಗೆ ಹೊಸ ಮೆರಗು, ಮಾಜಿ ವಿದ್ಯಾರ್ಥಿಯ ಅಚ್ಚರಿಯ ಕಾಣಿಕೆ!

WhatsApp Image 2026 07 06 at 11.06.00 AM 2026 07 f7813196744be3cf6899e73b0b38da1a 1200x675.jpeg


Last Updated:

ಚಿಕ್ಕಮಗಳೂರಿನ 105 ವರ್ಷದ ಶಾಲೆಗೆ ಎಂ.ಆರ್. ಜಯಶಂಕರ್ 2 ಕೋಟಿ ರೂ. ಅನುದಾನ ನೀಡಿ ನವೀಕರಿಸಿದ್ದಾರೆ. ಇಲ್ಲಿ ಓದಿದವರು 33 ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿರುವ ಈ ಶಾಲೆಗೆ (School) ಸುಮಾರು 105 ವರ್ಷ. ಇಲ್ಲಿ ಓದಿದ ಅದೆಷ್ಟೋ ಮಕ್ಕಳು (Students) ಪ್ರಪಂಚದ 33 ದೇಶಗಳಲ್ಲಿ ಈಗಲೂ ಕೆಲ್ಸ ಮಾಡ್ತಾ ಇದ್ದಾರೆ. ಕೆಲವರು ಇಡಿ ದೇಶದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡು ಹೆಸರುವಾಸಿ ಆಗಿದ್ದಾರೆ. ಸದ್ಯ ಇಂತಹ ಶಾಲೆಗೆ ಸುಮಾರು 2 ಕೋಟಿ (Crore) ರೂಪಾಯಿ ವೆಚ್ಚದಲ್ಲಿ ಅನುದಾನ ನೀಡಿ ತಾನು ಓದಿದ ಶಾಲೆಯನ್ನು ನವೀಕರಣ ಮಾಡಿದ್ರು ಹಾಗಿದ್ರೆ ಈ ಶಾಲೆಗೆ 2 ಕೋಟಿ ಅನುದಾನ ನೀಡಿದ್ದು ಯಾರು ಅಂತ ಗೊತ್ತಾ?

ಶಾಲೆಗೆ ಹೊಸ ರೂಪ

ಚಿಕ್ಕಮಗಳೂರು ನಗರದ ಹೊಸ ಮನೆ ಬಡಾವಣೆಯಲ್ಲಿ ಇರುವ ಈ ವಿಶ್ವ ವಿದ್ಯಾಲಯ ಶಾಲೆ ಈಗ ಹೊಸ ರೂಪ ಪಡೆದಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಈ ಬ್ರಿಗೇಡ್ ಫೌಂಡೇಶನ್ ಸಂಸ್ಥಾಪಕ ಎಂ ಆರ್ ಜಯಶಂಕರ್ ಹೌದು ಮೂಲತಃ ಎಂ ಆರ್ ಜಯಶಂಕರ್ ಅವರು ಚಿಕ್ಕಮಗಳೂರು ನಗರದವರಗಿದ್ದರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೆ ಶಾಲೆಯಲ್ಲಿ ಮುಗಿಸದ್ದರಿಂದ ವಿದ್ಯಾರ್ಥಿ ಜೀವನದ ನೆನಪಿನೊಂದಿಗೆ ಶಾಲೆಗೆ ಭೇಟಿ ನೀಡಿದ್ದ ಬ್ರಿಗೇಡ್ ಸಮೂಹದ ಅಧ್ಯಕ್ಷ ಎಂ.ಆರ್. ಜಯಶಂಕರ್ ಅವರು ಶಾಲೆಯ ದುಸ್ಥಿಯನ್ನು ಕಣ್ಣಾರೆ ಕಂಡು ಮರುಗಿದ ಅವರು ಸುಮಾರು 2 ಕೋಟಿ ವೆಚ್ಚದಲ್ಲಿ ಶಾಲೆಯ ಕಟ್ಟಡ, ಆಟದ ಮೈದಾನ, ಅಡುಗೆ ಮನೆ, ಶೌಚಾಲಯ, ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆ ಸೇರಿ ವಿವಿಧ ಮೂಲ ಸೌಕರ್ಯ ಒದಗಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸೇವೆ

1921ರಲ್ಲಿ ಆರಂಭಗೊಂಡಿರುವ ಶಾಲೆ ಹಲವು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೀಕ್ಷೆ ನೀಡಿ ಸಮಾಜದ ಉತ್ತಮ ನಾಗರಿಕರನ್ನು ರೂಪಿಸಿದೆ. ವಿಶ್ವವಿದ್ಯಾಲಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ವೈದ್ಯರು, ಎಂಜಿನಿಯರ್, ಉಪನ್ಯಾಸಕರು, ಆಡಳಿತಾಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .
ಹಲವು ಗಣ್ಯರು ಓದಿದ ಶಾಲೆ

ಮಲೆನಾಡು ಗಾಂಧಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಿಕ್ಷಣ ಸಚಿವರಾದ ಎಚ್.ಜಿ. ಗೋವಿಂದೇಗೌಡರು ಕೂಡ ಇದೆ ಶಾಲೆಯಲ್ಲಿ ಓದಿದ್ದರು. ಅಲ್ಲದೆ ಕರ್ನಾಟಕ ವಿಧಾನ ಪರಿಷತ್ ಉಪಾಸಭಪತಿ ಆಗಿರುವ ಎಂ ಕೆ ಪ್ರಾಣೇಶ್ ಸೇರಿದಂತೆ ಹಲವಾರು ಗಣ್ಯರು ಈ ಶಾಲೆಯಲ್ಲಿ ಓದಿದ್ದಾರೆ.

ಜಿಲ್ಲೆಯ ಹೆಮ್ಮೆಯ ಶತಮಾನದ ಶಾಲೆ

ಸರ್ಕಾರದ ಅನುದಾನಿತ ಶಾಲೆಯಗಿರುವ ಈ ವಿಶ್ವವಿದ್ಯಾಲಯ ಶಾಲೆಯು ಶತಮಾನದ ಇತಿಹಾಸ ಹೊಂದಿದೆ ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಈಗಲೂ ಪ್ರಪಂಚ ಸುಮಾರು 33 ದೇಶಗಳಲ್ಲಿ ಕೆಲ್ಸ ಮಾಡ್ತಾ ಇದ್ದಾರೆ.

ವಿಶ್ವವಿದ್ಯಾಲಯ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್‍ಕೆಜಿ, ಯುಕೆಜಿ ಆರಂಭಿಸಲಾಗಿದ್ದು, ಮುಂದಿನ ವರ್ಷದಿಂದ 1ರಿಂದ 5ನೇ ತರಗತಿ ತನಕ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಮಲೆನಾಡಿನ ಮಡಿಲಿನಲ್ಲಿರುವ ಇದೊಂದು ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕೊಟ್ಟು ಅದೇ ವಿದ್ಯಾರ್ಥಿಯಿಂದ ಮತ್ತೆ ನವಿಕೃತ ಗೊಂಡಿರುವುದು ಖುಷಿಯ ವಿಚಾರ.



Source link

Leave a Reply

Your email address will not be published. Required fields are marked *

TOP