Last Updated:
ಚಿಕ್ಕಮಗಳೂರಿನ 105 ವರ್ಷದ ಶಾಲೆಗೆ ಎಂ.ಆರ್. ಜಯಶಂಕರ್ 2 ಕೋಟಿ ರೂ. ಅನುದಾನ ನೀಡಿ ನವೀಕರಿಸಿದ್ದಾರೆ. ಇಲ್ಲಿ ಓದಿದವರು 33 ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಚಿಕ್ಕಮಗಳೂರು: ಕಾಫಿನಾಡಿನಲ್ಲಿರುವ ಈ ಶಾಲೆಗೆ (School) ಸುಮಾರು 105 ವರ್ಷ. ಇಲ್ಲಿ ಓದಿದ ಅದೆಷ್ಟೋ ಮಕ್ಕಳು (Students) ಪ್ರಪಂಚದ 33 ದೇಶಗಳಲ್ಲಿ ಈಗಲೂ ಕೆಲ್ಸ ಮಾಡ್ತಾ ಇದ್ದಾರೆ. ಕೆಲವರು ಇಡಿ ದೇಶದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡು ಹೆಸರುವಾಸಿ ಆಗಿದ್ದಾರೆ. ಸದ್ಯ ಇಂತಹ ಶಾಲೆಗೆ ಸುಮಾರು 2 ಕೋಟಿ (Crore) ರೂಪಾಯಿ ವೆಚ್ಚದಲ್ಲಿ ಅನುದಾನ ನೀಡಿ ತಾನು ಓದಿದ ಶಾಲೆಯನ್ನು ನವೀಕರಣ ಮಾಡಿದ್ರು ಹಾಗಿದ್ರೆ ಈ ಶಾಲೆಗೆ 2 ಕೋಟಿ ಅನುದಾನ ನೀಡಿದ್ದು ಯಾರು ಅಂತ ಗೊತ್ತಾ?
ಮಲೆನಾಡು ಗಾಂಧಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಿಕ್ಷಣ ಸಚಿವರಾದ ಎಚ್.ಜಿ. ಗೋವಿಂದೇಗೌಡರು ಕೂಡ ಇದೆ ಶಾಲೆಯಲ್ಲಿ ಓದಿದ್ದರು. ಅಲ್ಲದೆ ಕರ್ನಾಟಕ ವಿಧಾನ ಪರಿಷತ್ ಉಪಾಸಭಪತಿ ಆಗಿರುವ ಎಂ ಕೆ ಪ್ರಾಣೇಶ್ ಸೇರಿದಂತೆ ಹಲವಾರು ಗಣ್ಯರು ಈ ಶಾಲೆಯಲ್ಲಿ ಓದಿದ್ದಾರೆ.
ಸರ್ಕಾರದ ಅನುದಾನಿತ ಶಾಲೆಯಗಿರುವ ಈ ವಿಶ್ವವಿದ್ಯಾಲಯ ಶಾಲೆಯು ಶತಮಾನದ ಇತಿಹಾಸ ಹೊಂದಿದೆ ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಈಗಲೂ ಪ್ರಪಂಚ ಸುಮಾರು 33 ದೇಶಗಳಲ್ಲಿ ಕೆಲ್ಸ ಮಾಡ್ತಾ ಇದ್ದಾರೆ.
ವಿಶ್ವವಿದ್ಯಾಲಯ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಕೆಜಿ, ಯುಕೆಜಿ ಆರಂಭಿಸಲಾಗಿದ್ದು, ಮುಂದಿನ ವರ್ಷದಿಂದ 1ರಿಂದ 5ನೇ ತರಗತಿ ತನಕ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಮಲೆನಾಡಿನ ಮಡಿಲಿನಲ್ಲಿರುವ ಇದೊಂದು ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕೊಟ್ಟು ಅದೇ ವಿದ್ಯಾರ್ಥಿಯಿಂದ ಮತ್ತೆ ನವಿಕೃತ ಗೊಂಡಿರುವುದು ಖುಷಿಯ ವಿಚಾರ.
Chikmagalur,Chikmagalur,Karnataka
Jul 06, 2026 11:32 AM IST
