Advertisement
Advertisement

Path Of Knowledge: ಬೇಸಿಗೆ ರಜೆಯಲ್ಲಿ ಮಕ್ಕಳು ಫೋನ್ ಹಿಡಿಯೋದನ್ನೇ ಮರೆತುಬಿಟ್ಟರು, ಮೈಸೂರಿನಲ್ಲಿ ನಡೆದ ಆ ಮ್ಯಾಜಿಕ್ ಏನು?

Whatsapp image 2026 05 11 at 4.57.03 pm 2026 05 a837224a33cceb0f7d35610baad14aa2 1200x675.jpeg


Last Updated:

ಮೈಸೂರಿನಲ್ಲಿ ಬುದ್ಧ ಪ್ರಜ್ಞೆ ಫೆಸ್ಟ್ ನಲ್ಲಿ ಮಕ್ಕಳು Mobile ಬಿಟ್ಟು Digital ಜಗತ್ತಿನಿಂದ ದೂರವಾಗಿ ಚಿತ್ರಕಲೆ, ಗಾಯನ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೊಡಗಿ ಇತಿಹಾಸ, ಸಮಾನತೆ ಪಾಠ ಕಲಿಸಿದರು

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮೈಸೂರು: ಇಂದಿನ ಕಾಲದಲ್ಲಿ ಮಕ್ಕಳು ಒಂದು ನಿಮಿಷ ಮೊಬೈಲ್ (Mobile) ಇಲ್ಲದಿದ್ದರೆ ಹಠ ಮಾಡುತ್ತಾರೆ, ಊಟ ಮಾಡುವುದಕ್ಕೂ ಸ್ಕ್ರೀನ್ ಬೇಕೇ ಬೇಕು ಎನ್ನುವ ಸ್ಥಿತಿ ಇದೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಒಂದು ಅಚ್ಚರಿಯ ಬದಲಾವಣೆ ನಡೆದಿದೆ. ಬೇಸಿಗೆ (Summer) ರಜೆಯ ಮೋಜಿನ ನಡುವೆಯೇ ಮಕ್ಕಳು ಡಿಜಿಟಲ್ (Digital) ದುನಿಯಾದಿಂದ ಹೊರಬಂದು ಜ್ಞಾನದ ಹಾದಿ (Path Of Knowledge) ಹಿಡಿದಿದ್ದಾರೆ.

ಏನಿದು ವಿಶೇಷ?

ಮೈಸೂರಿನ ಡಾ. ವಿಷ್ಣುವರ್ಧನ್ ಸ್ಮಾರಕದ ಬಳಿ ಆಯೋಜಿಸಲಾಗಿದ್ದ ಬುದ್ಧ ಪ್ರಜ್ಞೆ ಫೆಸ್ಟ್ ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯದೆ, ಮಕ್ಕಳಲ್ಲಿ ಹೊಸ ಸಂಚಲನ ಮೂಡಿಸಿದೆ. ಕೈಯಲ್ಲಿ ಗೇಮ್ಸ್ ಆಡುತ್ತಿದ್ದ ಪುಟಾಣಿಗಳು, ಇಲ್ಲಿ ಮಹಾಪುರುಷರ ವೇಷಧರಿಸಿ ಮಿನುಗಿದರು. ಯಾರೂ ಊಹಿಸದ ರೀತಿಯಲ್ಲಿ ಗೌತಮ ಬುದ್ಧ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಕ್ರಾಂತಿಯೋಗಿ ಬಸವಣ್ಣ ಮತ್ತು ವೀರವನಿತೆ ಕಿತ್ತೂರು ಚೆನ್ನಮ್ಮನಾಗಿ ಬದಲಾದ ಮಕ್ಕಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಪೋಷಕರ ಕಣ್ಣಲ್ಲಿ ಆನಂದಬಾಷ್ಪ

ನಮ್ಮ ಮಕ್ಕಳು ಫೋನ್ ಬಿಟ್ಟು ಇಷ್ಟು ಕ್ರಿಯಾಶೀಲರಾಗುತ್ತಾರೆ ಎಂದು ನಾವು ಅಂದುಕೊಂಡಿರಲೇ ಇಲ್ಲ ಎನ್ನುತ್ತಾರೆ ಇಲ್ಲಿಗೆ ಬಂದಿದ್ದ ಪೋಷಕರು. ಕೇವಲ ವೇಷಭೂಷಣವಲ್ಲದೆ, ಚಿತ್ರಕಲೆ, ಗಾಯನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಅಡಗಿದ್ದ ನೈಜ ಪ್ರತಿಭೆ ಹೊರಬಂದಿದೆ. ಸಮಾನತೆ ಮತ್ತು ಮಾನವೀಯತೆಯ ಪಾಠಗಳನ್ನು ಆಟವಾಡುತ್ತಲೇ ಮಕ್ಕಳು ಕಲಿತಿದ್ದು ಈ ಉತ್ಸವದ ದೊಡ್ಡ ಗೆಲುವು.



Source link

Leave a Reply

Your email address will not be published. Required fields are marked *

TOP