Last Updated:
ತಮಿಳುನಾಡು, ಗುಜರಾತ್, ಛತ್ತೀಸ್ಗಢ ಮತ್ತು ಅಸ್ಸಾಂನ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಪ್ರಸಾರವಾದ ಪರೀಕ್ಷಾ ಪೆ ಚರ್ಚಾದ ಒಂಬತ್ತನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ಸು ಮತ್ತು ಒತ್ತಡ ನಿರ್ವಹಣೆಗೆ ಸಲಹೆಗಳನ್ನು ನೀಡಿದ್ದಾರೆ. ತಾವು ತಮ್ಮ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಸಹ ಹೇಳಿಕೊಂಡಿದ್ದಾರೆ.
ಶಿಕ್ಷಣ ಸಚಿವಾಲಯ ಮಂಗಳವಾರ ಪರೀಕ್ಷಾ ಪೆ ಚರ್ಚಾದ (Pariksha Pe Charcha) ಒಂಬತ್ತನೇ ಆವೃತ್ತಿಯ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಿದೆ. ಈ ಸಂಚಿಕೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮಿಳುನಾಡು, ಗುಜರಾತ್, ಛತ್ತೀಸ್ಗಢ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ಸಂವಹನ (Meeting) ನಡೆಸುತ್ತಿರುವುದು ಕಂಡುಬರುತ್ತದೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೀವನದ ಒತ್ತಡವನ್ನು (Stress) ಹೇಗೆ ನಿಭಾಯಿಸುತ್ತಾರೆ ಎಂದು ಹೇಳುತ್ತಾ ಮಕ್ಕಳಿಗೆ ಒತ್ತಡದಿಂದ ದೂರ ಸರಿಯುವುದು ಹೇಗೆ ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.
ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಸಕಾರಾತ್ಮಕ ಮನೋಭಾವದಿಂದ ಮುಂದುವರಿಯಲು ಅವರನ್ನು ಪ್ರೇರೇಪಿಸುವುದು ಪ್ರಧಾನ ಮಂತ್ರಿಯವರ ಕಾರ್ಯಕ್ರಮದ ಗುರಿಯಾಗಿದೆ.
ಪರೀಕ್ಷಾ ಪೇ ಚರ್ಚಾದಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಾಗ, ಪ್ರಧಾನಿಯವರು ಸ್ಟಾರ್ಟ್ಅಪ್ಗಳು ಮತ್ತು ನಾವೀನ್ಯತೆಗೆ ಒತ್ತು ನೀಡಿದರು. ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಟಾರ್ಟ್ಅಪ್ ಪ್ರಾರಂಭಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ, ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಕಲ್ಪನೆ ಎಂದು ಹೇಳಿದರು. “ಪರೀಕ್ಷಾ ಪೆ ಚರ್ಚಾ” (ಪರೀಕ್ಷಾ ಚರ್ಚೆ) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಧ್ಯಯನ ಮತ್ತು ಉತ್ಸಾಹವು ವಿರುದ್ಧವಲ್ಲ, ಬದಲಾಗಿ ಪೂರಕವಾಗಿದೆ ಎಂದು ಹೇಳಿದರು. ಕಲೆಯನ್ನು ಆನಂದಿಸುವ, ಚಿತ್ರಗಳ ಮೂಲಕ ವಿಜ್ಞಾನ ಪ್ರಯೋಗಗಳನ್ನು ಕಲಿಯುವ ವ್ಯಕ್ತಿಯ ಉದಾಹರಣೆಯನ್ನು ಅವರು ಉಲ್ಲೇಖಿಸಿದರು, ಇದು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ತ್ವರಿತ ಕಂಠಪಾಠಕ್ಕೆ ಸಹಾಯ ಮಾಡುತ್ತದೆ. ಒಬ್ಬರ ಉತ್ಸಾಹವನ್ನು ಮುಂದುವರಿಸಲು ಪ್ರತಿ ವಾರ ಸ್ವಲ್ಪ ಸಮಯವನ್ನು ಮೀಸಲಿಡಲು ಸಲಹೆ ನೀಡಿದರು.
ಗುಜರಾತ್ನ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಒತ್ತಡವನ್ನು ನಿಭಾಯಿಸುವ ಬಗ್ಗೆ ಸಲಹೆಗಳನ್ನು ನೀಡಿದರು. ಮೀಟ್ ಚೌಧರಿ ಎಂಬ ವಿದ್ಯಾರ್ಥಿನಿ, ‘ಸರ್, ಪಹಲ್ಗಾಮ್ ದಾಳಿಯ ನಂತರ ಇಡೀ ದೇಶವೇ ನಿಮ್ಮನ್ನು ನೋಡುತ್ತಿರುವಾಗ ನೀವು ಒತ್ತಡವನ್ನು ಹೇಗೆ ನಿಭಾಯಿಸಿದ್ದೀರಿ? ನಮಗೆ ಪರೀಕ್ಷೇಯೇ ಒತ್ತಡ ಎಂದು ಅನುಭವಿಸುತ್ತಿದೆ’ ಎಂದು ಕೇಳಿದರು.
ಇದಕ್ಕೆ ಪ್ರಧಾನಿ ಮೋದಿ ಉತ್ತರಿಸದ್ದು, ‘ನೀವು ಪರೀಕ್ಷಾ ಒತ್ತಡವನ್ನು ಏಕೆ ಅನುಭವಿಸುತ್ತೀರಿ? ನೀವು ಈ ಹಿಂದೆ ಹಲವು ಪರೀಕ್ಷೆಗಳಿಗೆ ಹಾಜರಾಗಿದ್ದೀರಿ. ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದರೆ ಬರೆಯುವುದನ್ನು ಅಭ್ಯಾಸ ಮಾಡುವುದು ಮತ್ತು ಪತ್ರಿಕೆಗಳನ್ನು ಪರಿಹರಿಸುವುದು. ಇದು ನಿಮ್ಮ ವೇಗ ಮತ್ತು ಕೈಬರಹವನ್ನು ಸುಧಾರಿಸುತ್ತದೆ. ಉತ್ತಮ ನಿದ್ರೆ ಪಡೆಯುವುದು ಸಹ ನಿರ್ಣಾಯಕವಾಗಿದೆ. 8 ಗಂಟೆಗಳ ನಿದ್ರೆ ನಿಮ್ಮನ್ನು ತಾಜಾವಾಗಿರಿಸುತ್ತದೆ ಮತ್ತು ನಿಮಗೆ ಹೊಸ ಆಲೋಚನೆಗಳನ್ನು ನೀಡುತ್ತದೆ’ ಎಂದು ಉತ್ತರಿಸಿದರು.
ಒಬ್ಬ ವಿದ್ಯಾರ್ಥಿ ಪ್ರಧಾನಿ ಮೋದಿಯವರನ್ನು ‘ಸರ್, ದೇಶವನ್ನು ನಡೆಸುವಾಗ ನೀವು ಪುಸ್ತಕಗಳನ್ನು ಬರೆಯಲು (ಪರೀಕ್ಷಾ ಯೋಧನಂತೆ) ಹೇಗೆ ಸಮಯ ಕಂಡುಕೊಳ್ಳುತ್ತೀರಿ? ಮತ್ತು ನೀವು ಒತ್ತಡವಿಲ್ಲದೆ ಹೇಗೆ ಇರುತ್ತೀರಿ?’ ಎಂದು ಕೇಳಿದಾಗ ಪ್ರಧಾನಿ ಮೋದಿ, ‘ನನ್ನ ಪುಸ್ತಕಗಳು ವಾಸ್ತವವಾಗಿ ನಿಮ್ಮಂತಹ ಮಕ್ಕಳೊಂದಿಗೆ ಮಾತನಾಡಿದ ಫಲಿತಾಂಶ. ಒತ್ತಡವಿಲ್ಲದೆ ಇರಲು ಮಾರ್ಗವೆಂದರೆ ವರ್ತಮಾನದಲ್ಲಿ ಬದುಕುವುದು. ನೀವು ಊಟ ಮಾಡುವಾಗ, ಆಹಾರದ ಮೇಲೆ ಕೇಂದ್ರೀಕರಿಸಿ; ನೀವು ನನ್ನೊಂದಿಗೆ ಇರುವಾಗ, ಆ ಕ್ಷಣವನ್ನು ಆನಂದಿಸಿ. ನಾನು ಯಾವಾಗಲೂ ನನ್ನನ್ನು ವಿದ್ಯಾರ್ಥಿ ಎಂದು ಪರಿಗಣಿಸುತ್ತೇನೆ ಮತ್ತು ಎಲ್ಲರಿಂದ ಏನನ್ನಾದರೂ ಕಲಿಯುತ್ತೇನೆ’ ಎಂದು ಉತ್ತರಿಸಿದರು.
Modi Stress Relief Formula: ಒತ್ತಡವನ್ನು ಹೇಗೆ ನಿಭಾಯಿಸ್ತಾರೆ ಮೋದಿ? ಮಕ್ಕಳಿಗೆ ಸ್ಟ್ರೆಸ್ ದೂರ ಮಾಡೋ ಸೀಕ್ರೆಟ್ ಹೇಳಿಕೊಟ್ಟ ಪ್ರಧಾನಿ!

