Advertisement
Advertisement

Direct interview: ನಿರುದ್ಯೋಗಿಗಳಿಗೆ ಬಂಪರ್ ಆಫರ್, ಚಿಕ್ಕಮಗಳೂರಿನಲ್ಲೇ ಸಿಗಲಿದೆ ಸರ್ಕಾರಿ ಕಚೇರಿಯಲ್ಲಿ ಉದ್ಯೋಗದ ಭಾಗ್ಯ!

Whatsapp image 2026 03 10 at 1.53.58 pm 2026 03 b36de513fdd236de9127bd71e1ef11e4 1200x675.jpeg


Last Updated:

ಏಪ್ರಿಲ್ 27 ರಂದು ಚಿಕ್ಕಮಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನವಭಾರತ್ ಫರ್ಟಿಲೈಸರ್, ಶೃತಿ ಮೋಟಾರ್ಸ್ ಕಂಪನಿಗಳಿಂದ ಉಚಿತ ನೇರ ಸಂದರ್ಶನ, 18-35 ವಯಸ್ಸಿನವರಿಗೆ ಅವಕಾಶ

ನೇರ ಸಂದರ್ಶನ
ನೇರ ಸಂದರ್ಶನ

ಚಿಕ್ಕಮಗಳೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಪದವಿಗಳನ್ನು (Degree) ಪಡೆದರೂ ಸೂಕ್ತ ಉದ್ಯೋಗ (Job) ಸಿಗುವುದು ಬಹುದೊಡ್ಡ ಸವಾಲಾಗಿದೆ. ಎಲ್ಲೆಡೆ ಅನುಭವ ಕೇಳುತ್ತಾರೆ, ನಮಗೆ ಕೆಲಸ ಸಿಗುವುದು ಯಾವಾಗ? ಎಂದು ಹತಾಶರಾಗಿರುವ ನಿರುದ್ಯೋಗಿ (

Unemployed) ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನಿಮ್ಮ ಸ್ವಂತ ಜಿಲ್ಲೆ ಚಿಕ್ಕಮಗಳೂರಿನಲ್ಲೇ (Chikkamagaluru) ಕೆಲಸ ಗಿಟ್ಟಿಸಿಕೊಳ್ಳುವ ಅದ್ಭುತ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ.

ನೇರ ಸಂದರ್ಶನದ ವಿವರ

ಬರುವ ಏಪ್ರಿಲ್ 27 ರಂದು ಚಿಕ್ಕಮಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಚೇರಿಯಲ್ಲಿ ಖಾಸಗಿ ವಲಯದ ಪ್ರತಿಷ್ಠಿತ ಕಂಪನಿಗಳಾದ ನವಭಾರತ್ ಫರ್ಟಿಲೈಸರ್ ಮತ್ತು ಶೃತಿ ಮೋಟಾರ್ಸ್ ವತಿಯಿಂದ ಬೃಹತ್ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10:30 ಗಂಟೆಗೆ ಸಂದರ್ಶನ ಆರಂಭವಾಗಲಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು.

ಯಾವೆಲ್ಲಾ ಹುದ್ದೆಗಳಿವೆ?

ಏಜೆಂಟ್

ಫೀಲ್ಡ್ ಸೇಲ್ಸ್ ಎಕ್ಸಿಕ್ಯುಟಿವ್

ಟೆಲಿ ಕಾಲರ್

ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ಯಾವುದೇ ದೊಡ್ಡ ಪದವಿ ಇಲ್ಲದಿದ್ದರೂ ಚಿಂತಿಸಬೇಡಿ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು.
ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು

ಸಂದರ್ಶನಕ್ಕೆ ಬರುವಾಗ ನಿಮ್ಮ ಅಪ್‍ಡೇಟೆಡ್ ರೆಸ್ಯೂಮ್ ಅಥವಾ ಬಯೋಡಾಟಾದ ಒಂದು ಸೆಟ್ ಪ್ರತಿಗಳನ್ನು ತರುವುದು ಕಡ್ಡಾಯ. ಈ ಸಂದರ್ಶನಕ್ಕೆ ಯಾವುದೇ ಪ್ರವೇಶ ದರ ಇರುವುದಿಲ್ಲ, ಇದು ಸಂಪೂರ್ಣ ಉಚಿತ ಅವಕಾಶವಾಗಿದೆ.

ಸಂಪರ್ಕ ಮಾಹಿತಿ

ಹೆಚ್ಚಿನ ವಿವರಗಳಿಗಾಗಿ ಅಥವಾ ಗೊಂದಲಗಳಿದ್ದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದೂರವಾಣಿ ಸಂಖ್ಯೆಗಳಾದ 08262-295538 ಅಥವಾ 9945198500 ಗೆ ಕರೆ ಮಾಡಬಹುದು.



Source link

Leave a Reply

Your email address will not be published. Required fields are marked *

TOP