Last Updated:
ಮಂಡ್ಯ ರೈತರು ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ 1000 ಕಿಮೀ ಪಾದಯಾತ್ರೆ, 600ಕ್ಕೂ ಹೆಚ್ಚು ಗ್ರಾಮ ಭೇಟಿ, ಸಿಬಿಎಸ್ಇ ದ್ವಿಭಾಷಾ ಪಠ್ಯ, ನವೋದಯ ಮಾದರಿ, ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ಬೇಡಿಕೆ
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಈಗೊಂದು ಅಭೂತಪೂರ್ವ ಇತಿಹಾಸ ಸೃಷ್ಟಿಯಾಗಿದೆ. ಕನ್ನಡ ಶಾಲೆಗಳನ್ನು (Kannada Schools) ಉಳಿಸಲೇಬೇಕು ಎಂದು ಪಣತೊಟ್ಟಿರುವ ಮಂಡ್ಯದ ರೈತರು (Farmers) ಇಡೀ ರಾಜ್ಯವೇ ತಿರುಗಿ ನೋಡುವಂತಹ ವಿನೂತನ ಹೋರಾಟಕ್ಕೆ ದುಮುಕಿದ್ದಾರೆ. ‘ಸರ್ಕಾರಿ ಶಾಲೆ (Govt School) ನನ್ನವ್ವ’ ಎಂಬ ಮನಕಲಕುವ ಘೋಷವಾಕ್ಯದೊಂದಿಗೆ ಆರಂಭವಾಗಿರುವ ಈ ಕಾಲ್ನಡಿಗೆ ಪಾದಯಾತ್ರೆ, ಬರೋಬ್ಬರಿ 1,000 ಕಿಲೋಮೀಟರ್ ಕ್ರಮಿಸುವ ಮೂಲಕ ಹೋರಾಟದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದೆ.
ಈ ಹೋರಾಟ ಕೇವಲ ನಡಿಗೆಗೆ ಸೀಮಿತವಾಗಿಲ್ಲ, ಬದಲಿಗೆ ಸರ್ಕಾರದ ಮುಂದೆ ಕೆಲವು ಗಟ್ಟಿ ಬೇಡಿಕೆಗಳನ್ನು ಇಟ್ಟಿದೆ.
ನವೋದಯ ಮಾದರಿ- ಪ್ರತಿ ಸರ್ಕಾರಿ ಶಾಲೆಯಲ್ಲೂ 6 ರಿಂದ 12ನೇ ತರಗತಿವರೆಗೆ ನವೋದಯ ಮಾದರಿಯ ಉಚಿತ ಶಿಕ್ಷಣ ಸಿಗಬೇಕು.
ಕಡ್ಡಾಯ ನಿಯಮ- ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಬೇಕು.
ಈಗಾಗಲೇ ಸಾರ್ವಜನಿಕರಲ್ಲಿ ದೊಡ್ಡ ಆಶಾಭಾವನೆ ಮೂಡಿಸಿರುವ ಈ ಪಾದಯಾತ್ರೆ ಜೂನ್ 6 ರಂದು ಅಂತ್ಯಗೊಳ್ಳಲಿದೆ. ಅಂದು ಮಂಡ್ಯದ ಇಂಡುವಾಳು ಗ್ರಾಮದಿಂದ ಮಂಡ್ಯ ನಗರದವರೆಗೆ ಬೃಹತ್ ‘ಪಂಜಿನ ಮೆರವಣಿಗೆ’ ನಡೆಯಲಿದ್ದು, ಹೋರಾಟದ ತೀವ್ರತೆಯನ್ನು ಸರ್ಕಾರಕ್ಕೆ ತಲುಪಿಸಲಿದೆ. ರೈತರ ಈ ಮಹಾ ಯಜ್ಞಕ್ಕೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಇಡೀ ಕರ್ನಾಟಕವೇ ಕಾದು ನೋಡುತ್ತಿದೆ.
Mandya,Mandya,Karnataka
