Last Updated:
ಬಾಳೆಹೊನ್ನೂರು ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ PUC ವಿಜ್ಞಾನ ಪ್ರವೇಶ ಆರಂಭ, SSLCಯಲ್ಲಿ ಕನಿಷ್ಠ 60 ಅಂಕ ಅಗತ್ಯ, ಉಚಿತ ಶಿಕ್ಷಣ, ವಸತಿ, ವಿದ್ಯಾರ್ಥಿವೇತನ ಸೌಲಭ್ಯಗಳು ಲಭ್ಯ.
ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದೀರಾ? ವಿಜ್ಞಾನ ವಿಭಾಗದಲ್ಲಿ ಓದಬೇಕೆಂಬ ಕನಸು ಕಾಣುತ್ತಿದ್ದೀರಾ? ಆರ್ಥಿಕ ಮುಗ್ಗಟ್ಟಿನಿಂದ ಉನ್ನತ ಶಿಕ್ಷಣ ಕಷ್ಟ ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ (Students) ಇಲ್ಲಿದೆ ಒಂದು ಅದ್ಭುತ ಸುದ್ದಿ. ಬಾಳೆಹೊನ್ನೂರು ಸಮೀಪದ ಸಗೋಡಿನ ಪ್ರತಿಷ್ಠಿತ ಜವಾಹರ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಪ್ರಥಮ ಪಿಯುಸಿ (PUC) ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಆರಂಭವಾಗಿದೆ. ಇದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ.
ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ. 60 ಅಂಕ ಪಡೆದಿರಬೇಕು.ಅದರಲ್ಲೂ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ತಲಾ 60 ಅಂಕ ಕಡ್ಡಾಯ. ಅರ್ಜಿ ಸಲ್ಲಿಸಲು ಜೂನ್ 25 ಅಂತಿಮ ದಿನ. ಅಂದರೆ ನಾಳೆಯೇ ಕೊನೆಯ ದಿನವಾಗಿದೆ, ತಡಮಾಡಬೇಡಿ.
ಈ ಕೂಡಲೇ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ನೇರವಾಗಿ ವಿದ್ಯಾಲಯಕ್ಕೆ ಭೇಟಿ ನೀಡಿ
ಎ.ಪಿ. ನಾಗರಾಜ್ (ಕನ್ನಡ ಉಪನ್ಯಾಸಕ): 9449795480,ಜಿ.ಆರ್. ದೊರೆರಾಜ್: 6360626516, ಪ್ರಭಾರಿ ಪ್ರಾಚಾರ್ಯರು: 9448547259
Chikmagalur,Chikmagalur,Karnataka

