ಸಂದರ್ಶನದ ಸಮಯದಲ್ಲಿ ಅವರೊಂದಿಗೆ ಅಗೌರವದಿಂದ ನಡೆದುಕೊಂಡದ್ದೇ ಅವರು ಆಫರ್ ತಿರಸ್ಕರಿಸಿದ್ದಕ್ಕೆ ಕಾರಣ ಎಂದು ಪೂರ್ವಿ ಷಾ ಬರೆದುಕೊಂಡಿದ್ದು, ಒಬ್ಬ ಉದ್ಯೋಗಿಗೆ ಸೆಲ್ಫ್ ರೆಸ್ಪೆಕ್ಟ್ ಎಂಬುದು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಹೈರಿಂಗ್ ಮ್ಯಾನೇಜರ್ ಅಂತಿಮ ಸುತ್ತಿನಲ್ಲಿ ಮಾತನಾಡಲು ಅವಕಾಶ ನೀಡದೇ ಪದೇ ಪದೇ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಉದ್ಯೋಗಿ ಪ್ರಭಾವಶಾಲಿ ಪ್ಯಾಕೇಜ್ ಅನ್ನು ನೀಡಿದ್ದರೂ ಅದನ್ನು ತಿರಸ್ಕರಿಸಿ ಹೊರಟು ಹೋದರು ಎಂದು ಬರೆದುಕೊಂಡಿದ್ದಾರೆ.
ಕೆಲಸಕ್ಕೆ ಸೇರುವ ಮೊದಲೇ ಅವರು ನನ್ನ ಮಾತುಗಳನ್ನು ಕೇಳಲು ಇಷ್ಟಪಡಲಿಲ್ಲ ಇನ್ನು ಕೆಲಸಕ್ಕೆ ಸೇರಿದ ನಂತರ ನನ್ನ ಮಾತುಗಳನ್ನು ಆಲಿಸಲು ಇಷ್ಟಪಡುತ್ತಾರೆಯೇ ಎಂದು ಅವರು ನನ್ನ ಬಳಿ ಹೇಳಿಕೊಂಡರು ಎಂದು ಪೂರ್ವಿ ಷಾ ಬರೆದಿದ್ದು, ಆಧುನಿಕ ಕೆಲಸದ ಸ್ಥಳಗಳಲ್ಲಿ ನಡೆಯುವ ಇಂತಹ ತಪ್ಪುಗಳೇ ಒಳ್ಳೊಳ್ಳೆಯ ಉದ್ಯೋಗಿಗಳು ಕೈಬಿಟ್ಟು ಹೋಗುವಂತೆ ಮಾಡುತ್ತದೆ ಹಾಗೂ ಏನು ತಪ್ಪಾಗಿದೆ ಎಂಬುದನ್ನು ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.
ಷಾ ಹೇಳುವಂತೆ ಅನೇಕ ಸಂಸ್ಥೆಗಳು ಉದ್ಯೋಗಿಯ ಮಾತುಗಳನ್ನು ಆಲಿಸುವುದಿಲ್ಲ ತಮ್ಮ ಮಾತೇ ನಡೆಯಬೇಕೆಂದು ಬಯಸುತ್ತಾರೆ, ಇದೊಂದು ಹೆಮ್ಮೆಯ ಸಂಗತಿ ಎಂದವರು ಭಾವಿಸುತ್ತಾರೆ. ಆದರೆ ಇದುವೇ ಅವರ ಹಿನ್ನಡೆಯಾಗಿದೆ ಎಂದು ಷಾ ಹೇಳಿದ್ದು, ಸಹಾನುಭೂತಿಯ ಬಗ್ಗೆ ಮಾತನಾಡುವ ಇಂತಹ ಸಂಸ್ಥೆಗಳು ನಿಜವಾದ ಸಂದರ್ಭಗಳಲ್ಲಿ ಅದನ್ನು ತೋರ್ಪಡಿಸಲು ವಿಫಲರಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಕೊನೆಗೂ ಈ ಉದ್ಯೋಗಿ ಇನ್ನೊಂದು ಸಂಸ್ಥೆಯನ್ನು ಸೇರಿದ್ದಾರೆ ಎಂದು ಷಾ ಬರೆದಿದ್ದು, ಅದೊಂದು ಸಣ್ಣ ಸಂಸ್ಥೆ ಇಲ್ಲಿನಷ್ಟು ಪ್ಯಾಕೇಜ್ ಕೂಡ ಇಲ್ಲ ಆದರೆ ಆ ತಂಡ ಆಕೆಯ ಮಾತುಗಳನ್ನು ಆಲಿಸಿದೆ ಹಾಗೂ ಪರಿಗಣಿಸಿದೆ. ಆರು ತಿಂಗಳ ಬಳಿಕ, ಆಕೆ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಳ್ಳಲಿದ್ದಾರೆ ಹಾಗೂ ತಮ್ಮದೇ ಒಂದು ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಇತ್ತೀಚೆಗೆ ಆಕೆ ಹೇಳಿದ್ದೇನೆಂದರೆ, ನನಗಿಲ್ಲಿ ಕಡಿಮೆ ಸಂಬಳವಿರಬಹುದು, ಆದರೆ ನಾನು ಚೆನ್ನಾಗಿ ನಿಶ್ಚಿಂತೆಯಿಂದ ನಿದ್ರಿಸಬಹುದು.
ಇದೆಲ್ಲಾ ಕೆಲವು ಸಣ್ಣ ಸಣ್ಣ ಸೂಚನೆಗಳಾಗಿದ್ದು ನಿಜವಾದ ಸತ್ಯವನ್ನು ಬಹಿರಂಗಪಡಿಸುತ್ತವೆ. ಸಂಸ್ಕೃತಿ ಎಂಬುದು ಒಳ್ಳೆಯ ವೇತನ, ಸೌಲಭ್ಯಗಳು, ಉಚಿತ ಆಹಾರಗಳು, ಆಕರ್ಷಕ ಆಫೀಸ್ ವಾಲ್ಗಳಲ್ಲಿಲ್ಲ. ನೀವು ಮಾತನಾಡುವಾಗ ಜನರು ನಿಮ್ಮನ್ನು ಹೇಗೆ ಆಲಿಸುತ್ತಾರೆ, ಆದರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ, ಜೀವನದ ದೀರ್ಘ ಪ್ರಯಾಣದಲ್ಲಿ ಹಣವನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು, ಆದರೆ ಗೌರವ ಎಂಬುದು ಶಾಶ್ವತವಾಗಿರುತ್ತದೆ ಎಂದು ಬರೆಯುವ ಮೂಲಕ ತಮ್ಮ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ಈ ಪೋಸ್ಟ್ ಚರ್ಚೆಗೆ ನಾಂದಿ ಹಾಡಿತು, ಗೌರವ ಸಹಾನುಭೂತಿ ಹಾಗೂ ಸಂವಹನ ಕೆಲಸದ ಸ್ಥಳದಲ್ಲಿ ಎಷ್ಟು ಮುಖ್ಯ ಎಂಬುದನ್ನು ತೋರಿಸಿತು. ಒಬ್ಬ ಬಳಕೆದಾರರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದು, ಇದೇ ರೀತಿಯ ಅನುಭವ ತಮಗೂ ಆಗಿದೆ ಎಂದು ಹೇಳಿಕೊಂಡಿದ್ದಾರೆ ಆದರೆ ಆ ಕಂಪನಿ ನನ್ನ ಸಿಟಿಸಿಗಿಂತ ಕಡಿಮೆ ಆಫರ್ ಮಾಡಿತ್ತು ಹಾಗೂ ನಾನು ಇದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿತ್ತು.
ದುರಾದೃಷ್ಟವಶಾತ್ ನೇಮಕಾತಿ ವ್ಯವಸ್ಥಾಪಕರು ಕೂಡ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು. ಜನರು ಈ ಸಮಯದಲ್ಲಿ ಮಾತನಾಡಬೇಕು ಹಾಗೂ ತಮ್ಮ ಹಕ್ಕಿಗಾಗಿ ಹೋರಾಡಬೇಕು ಎಂದು ಭಾವಿಸುತ್ತೇನೆ. ಜನರು ಉದ್ಯೋಗಗಳನ್ನು ಹುಡುಕುತ್ತಿರುವ ಸಮಯದಲ್ಲಿ ಅವರ ತಾಳ್ಮೆಯನ್ನು ಪರಿಶೀಲಿಸಲಾಗುತ್ತದೆ ಇದು ಸರಿಯಲ್ಲ ಎಂದವರು ಹೇಳಿದ್ದಾರೆ.
ಕೊನೆಗೆ ಉದ್ಯೋಗ ಸ್ಥಳವೆಂಬುದು ಎಲ್ಲರಿಗೂ ಮಾತನಾಡುವ ಅವರು ಹೇಳಿದ್ದನ್ನು ಕೇಳಿಸುವಂತಿರಬೇಕು, ಇಂತಹ ಭಾವನೆ ಇರುವ ಪರಿಸರದಲ್ಲಿಯೇ ಅವರು ಇರಬೇಕು. ಬರಿಯ ಸಂಬಳ ಮಾತ್ರವೇ ಮುಖ್ಯವಲ್ಲ, ಸಾಕಷ್ಟು ಕಂಪನಿಗಳು ಈ ಪಾಠವನ್ನು ಮನಗಾಣಬೇಕು ಎಂದು ಬರೆದಿದ್ದಾರೆ.
November 07, 2025 4:30 PM IST
