Advertisement
Advertisement

UPSC ಪರೀಕ್ಷೆ ಬರೆಯಲು ಯೋಜಿಸುತ್ತಿದ್ದೀರಾ? ಇಲ್ಲಿವೆ ನೋಡಿ ವಿದ್ಯಾರ್ಥಿವೇತನ, ಉಚಿತ ತರಬೇತಿ ಮಾಹಿತಿ!

Upsc 2025 04 cb33a2d7deb189cda3fafac89e117dda 3x2.jpg


ಅದೆಷ್ಟೋ  ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಈ ಒಂದು ಅವಕಾಶದಿಂದ ವಂಚಿತರಾಗಬಾರದು ಅಂತಾನೆ ಅನೇಕ ರಾಜ್ಯದ ಸರ್ಕಾರಳು ಅನೇಕ ರೀತಿಯ ವಿದ್ಯಾರ್ಥಿವೇತನ ಮತ್ತು ಉಚಿತ ತರಬೇತಿಯನ್ನು ಸಹ ನೀಡುತ್ತಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

1. ಉತ್ತರ ಪ್ರದೇಶ – ಸಿಎಂ ಅಭ್ಯುದಯ ಯೋಜನೆ

ಯುಪಿಯ ಸಿಎಂ ಅಭ್ಯುದಯ ಯೋಜನೆಯು ಯುಪಿಎಸ್‌ಸಿ, ನೀಟ್, ಜೆಇಇ ಇತ್ಯಾದಿ ಆಕಾಂಕ್ಷಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತದೆ.

2. ಉತ್ತರ ಪ್ರದೇಶ – ದಶ್‌ಮೋತ್ತರ್ ಸ್ಕಾಲರ್‌ಶಿಪ್

ಇದು ಪ್ರಾಥಮಿಕವಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವಾಗಿದ್ದರೂ, ಯುಪಿ ಈ ಯೋಜನೆಯ ಮೂಲಕ ಕೆಲವು ಮಾನದಂಡಗಳ ಅಡಿಯಲ್ಲಿ (ಓಬಿಸಿ, ಎಸ್‌ಸಿ, ಎಸ್‌ಟಿ, ಇಡಬ್ಲ್ಯೂಎಸ್) ಯುಪಿಎಸ್‌ಸಿ ತರಬೇತಿಗೆ ವಿಸ್ತೃತ ಬೆಂಬಲವನ್ನು ನೀಡುತ್ತದೆ.

3. ದೆಹಲಿ – ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ ಯೋಜನೆ

ದೆಹಲಿ ಸರ್ಕಾರದ ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ ಯೋಜನೆಯು ಈಗ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಜೊತೆಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೂ ಸಹ ಜೆಇಇ, ನೀಟ್, ಯುಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಿಗೆ ಉಚಿತ ಅಥವಾ ಸಬ್ಸಿಡಿ ಬೆಲೆಯಲ್ಲಿ ತರಬೇತಿಯನ್ನು ನೀಡುತ್ತದೆ.

4. ತಮಿಳುನಾಡು – ನಾನ್ ಮುಧಲ್ವನ್ ಸ್ಕೀಮ್

ತಮಿಳುನಾಡಿನ ನಾನ್ ಮುಧಲ್ವನ್ ಯೋಜನೆಯು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಆರ್ಥಿಕ ಮತ್ತು ತರಬೇತಿ ಸಹಾಯವನ್ನು ಒದಗಿಸುತ್ತದೆ. ಅವರು ಪ್ರಿಲಿಮ್ಸ್ ಪರೀಕ್ಷೆಗೆ ಸಹಾಯ ಮಾಡಲು ಹತ್ತು ತಿಂಗಳ ಅವಧಿಗೆ ತಿಂಗಳಿಗೆ 7,500 ರೂಪಾಯಿ, ಮುಖ್ಯ ಪರೀಕ್ಷೆಗೆ 25,000 ರೂಪಾಯಿ ಮತ್ತು ಸಂದರ್ಶನ ತಯಾರಿಗೆ 50,000 ರೂಪಾಯಿ ಅಭ್ಯರ್ಥಿಗಳಿಗೆ ನೀಡುತ್ತಾರೆ.

5. ಛತ್ತೀಸ್‌ಘಡ್ – ರಾಜೀವ್ ಯುವ ಉತ್ಥಾನ ಯೋಜನೆ

ಈ ಯೋಜನೆಯಡಿಯಲ್ಲಿ, ಎಸ್‌ಸಿ, ಎಸ್‌ಟಿ, ಒಬಿಸಿ ಯುವಕರಿಗೆ ಉಚಿತ ಯುಪಿಎಸ್‌ಸಿ ತರಬೇತಿ ಜೊತೆಗೆ 1,000 ರೂಪಾಯಿ ಮಾಸಿಕ ಸ್ಟೈಫಂಡ್ ಸಹ ನೀಡಲಾಗುತ್ತದೆ.

6. ಅರುಣಾಚಲ ಪ್ರದೇಶ – ಸಿಎಂ ಕಂಬೈಂಡ್ ಸಿವಿಲ್ ಸರ್ವಿಸಸ್ ಕೋಚಿಂಗ್ ಸ್ಕೀಮ್

ಎಪಿಯ ಸಿಎಂ ಸ್ಕೀಮ್ ಎಪಿಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಮತ್ತು ಹಣವನ್ನು (ಪೂರ್ವಭಾವಿ ಪರೀಕ್ಷೆಗೆ 2 ಲಕ್ಷ, ಮುಖ್ಯ ಪರೀಕ್ಷೆಗೆ 3 ಲಕ್ಷ) ರೂಪಾಯಿ ನೀಡುತ್ತದೆ.

7. ತ್ರಿಪುರ – ಲಕ್ಷ್ಯ ಸ್ಕಾಲರ್‌ಶಿಪ್

ಈ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ಒಟ್ಟು 1,00,000 ಆರ್ಥಿಕ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ, ಇದರಲ್ಲಿ ತರಬೇತಿ ಮತ್ತು ಅಧ್ಯಯನ ಸಾಮಗ್ರಿಗಳಿಗೆ 70,000 ಮತ್ತು ಪ್ರಯಾಣ ವೆಚ್ಚಗಳಿಗೆ 30,000 ರೂಪಾಯಿ ಸೇರಿವೆ.

ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಸಜ್ಜಾಗುತ್ತಿರುವವರಿಗೆ ಸಂದರ್ಶನದ ತಯಾರಿಗಾಗಿ 20,000 ರೂಪಾಯಿ ಸಿಗುತ್ತದೆ.

8. ಗುಜರಾತ್ – ಎಸ್‌ಸಿ ಕೋಚಿಂಗ್ ಅಸಿಸ್ಟಂಸ್ ಸ್ಕೀಮ್

ಗುಜರಾತ್ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಪರಿಶಿಷ್ಟ ಜಾತಿ ಕಲ್ಯಾಣ ನಿರ್ದೇಶಕರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ತರಬೇತಿ ಸಹಾಯ ಯೋಜನೆಯನ್ನು ಪ್ರಾರಂಭಿಸಿದರು.

ಈ ಯೋಜನೆಯ ಮೂಲಕ, 20,000 ರೂಪಾಯಿಯವರೆಗೆ ಅಥವಾ ನಿಜವಾದ ಬೋಧನಾ ಶುಲ್ಕವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

9. ಮಹಾರಾಷ್ಟ್ರ – ಯುಪಿಎಸ್‌ಸಿ ಸ್ಕಾಲರ್‌ಶಿಪ್

ಈ ಕಾರ್ಯಕ್ರಮದ ಅಡಿಯಲ್ಲಿ, ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದವರಿಗೆ ತಿಂಗಳಿಗೆ 10,000 ರೂಪಾಯಿ ಜೊತೆಗೆ ಪೂರ್ಣ ತರಬೇತಿ ಶುಲ್ಕವನ್ನು ನೀಡಲಾಗುತ್ತದೆ.

10, ಮಣಿಪುರ – ಸೂಪರ್ ಐಎಎಸ್ 500 ಸ್ಕಾಲರ್‌ಶಿಪ್

ಮಣಿಪುರದಲ್ಲಿ, ಅಗ್ರ 500 ಆಕಾಂಕ್ಷಿಗಳಿಗೆ ಉಚಿತ ಮತ್ತು ಸಬ್ಸಿಡಿ ತರಬೇತಿ, ಅಗ್ರ 200 ಆಕಾಂಕ್ಷಿಗಳಿಗೆ ಪೂರ್ಣ ತರಬೇತಿ ಮತ್ತು ಮುಂದಿನ 300 ಆಕಾಂಕ್ಷಿಗಳಿಗೆ ಭಾಗಶಃ ತರಬೇತಿ ನೀಡಲಾಗುತ್ತದೆ.



Source link

Leave a Reply

Your email address will not be published. Required fields are marked *

TOP