Advertisement
Advertisement

Free Education: ಚಿಕ್ಕಮಗಳೂರು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ, ಇಲ್ಲಿ ಉಚಿತ ಪಿಯುಸಿ ಶಿಕ್ಷಣ; ನಾಳೆಯೇ ಕೊನೆಯ ದಿನ!

Whatsapp image 2026 06 24 at 2.53.24 pm 2026 06 728a1170835620473e8742d0d638c161 1200x675.jpeg


Last Updated:

ಬಾಳೆಹೊನ್ನೂರು ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ PUC ವಿಜ್ಞಾನ ಪ್ರವೇಶ ಆರಂಭ, SSLCಯಲ್ಲಿ ಕನಿಷ್ಠ 60 ಅಂಕ ಅಗತ್ಯ, ಉಚಿತ ಶಿಕ್ಷಣ, ವಸತಿ, ವಿದ್ಯಾರ್ಥಿವೇತನ ಸೌಲಭ್ಯಗಳು ಲಭ್ಯ.

ಉಚಿತ ವಿಜ್ಞಾನ ಶಿಕ್ಷಣ
ಉಚಿತ ವಿಜ್ಞಾನ ಶಿಕ್ಷಣ

ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದೀರಾ? ವಿಜ್ಞಾನ ವಿಭಾಗದಲ್ಲಿ ಓದಬೇಕೆಂಬ ಕನಸು ಕಾಣುತ್ತಿದ್ದೀರಾ? ಆರ್ಥಿಕ ಮುಗ್ಗಟ್ಟಿನಿಂದ ಉನ್ನತ ಶಿಕ್ಷಣ ಕಷ್ಟ ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ (Students) ಇಲ್ಲಿದೆ ಒಂದು ಅದ್ಭುತ ಸುದ್ದಿ. ಬಾಳೆಹೊನ್ನೂರು ಸಮೀಪದ ಸಗೋಡಿನ ಪ್ರತಿಷ್ಠಿತ ಜವಾಹರ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಪ್ರಥಮ ಪಿಯುಸಿ (PUC) ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಆರಂಭವಾಗಿದೆ. ಇದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ.

ಸಿಗಲಿದೆ ಉಚಿತ ಶಿಕ್ಷಣ ಮತ್ತು ಸೌಲಭ್ಯಗಳು

ನವೋದಯ ವಿದ್ಯಾಲಯ ಎಂದರೆ ಬರೀ ಶಾಲೆಯಲ್ಲ, ಅದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ತಾಣ. ಪಿಎಂ ಶ್ರೀ ಯೋಜನೆಯಡಿ ನಡೆಯುತ್ತಿರುವ ಈ ವಿದ್ಯಾಲಯದಲ್ಲಿ ಸಿಗುವ ಸೌಲಭ್ಯಗಳ ಪಟ್ಟಿ ದೊಡ್ಡದಿದೆ.ಪಠ್ಯಪುಸ್ತಕಗಳು, ನೋಟ್ ಬುಕ್, ಸಮವಸ್ತ್ರ, ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳು ಉಚಿತ.ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸುಸಜ್ಜಿತ ವಸತಿ ನಿಲಯ ಹಾಗೂ ಊಟದ ವ್ಯವಸ್ಥೆ ಸಂಪೂರ್ಣ ಉಚಿತ.

ಹೆಚ್ಚುವರಿ ಕೌಶಲಗಳು

ಎನ್‍ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಸಂಗೀತ, ಕಲೆ ಮತ್ತು ಆಟೋಟಗಳಿಗೆ ವಿಶೇಷ ತರಬೇತಿ. ವಿಜ್ಞಾನ ಜ್ಯೋತಿ ಯೋಜನೆಯಡಿ ಬಾಲಕಿಯರಿಗೆ ವಿಶೇಷ ವಿದ್ಯಾರ್ಥಿ ವೇತನ ಲಭ್ಯ. ‘ಕರ್ತಾ’ ಯೋಜನೆಯ ಮೂಲಕ ವಿದೇಶದಲ್ಲಿ ಉಚಿತವಾಗಿ ವ್ಯಾಸಂಗ ಮಾಡುವ ಸುವರ್ಣ ಅವಕಾಶ.
ಯಾರು ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ. 60 ಅಂಕ ಪಡೆದಿರಬೇಕು.ಅದರಲ್ಲೂ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ತಲಾ 60 ಅಂಕ ಕಡ್ಡಾಯ. ಅರ್ಜಿ ಸಲ್ಲಿಸಲು ಜೂನ್ 25 ಅಂತಿಮ ದಿನ. ಅಂದರೆ ನಾಳೆಯೇ ಕೊನೆಯ ದಿನವಾಗಿದೆ, ತಡಮಾಡಬೇಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಈ ಕೂಡಲೇ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ನೇರವಾಗಿ ವಿದ್ಯಾಲಯಕ್ಕೆ ಭೇಟಿ ನೀಡಿ

ಎ.ಪಿ. ನಾಗರಾಜ್ (ಕನ್ನಡ ಉಪನ್ಯಾಸಕ): 9449795480,ಜಿ.ಆರ್. ದೊರೆರಾಜ್: 6360626516, ಪ್ರಭಾರಿ ಪ್ರಾಚಾರ್ಯರು: 9448547259



Source link

Leave a Reply

Your email address will not be published. Required fields are marked *

TOP