Last Updated:
ಮೈಸೂರು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಬಿ.ಇ, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಮತ್ತು ಯುವ ವಕೀಲರಿಗೆ ಲ್ಯಾಪ್ಟಾಪ್, ಕಾನೂನು ಪುಸ್ತಕ ಖರೀದಿಗೆ ಆರ್ಥಿಕ ನೆರವು, ಅರ್ಜಿ ಜೂನ್ 5ರೊಳಗೆ.
ಮೈಸೂರು: ನೀವು ಬಿ.ಇ (B.E) ಅಥವಾ ಎಂ.ಬಿ.ಬಿ.ಎಸ್ (MBBS) ಓದುತ್ತಿದ್ದೀರಾ? ಅಥವಾ ಲಾ (Law) ಮುಗಿಸಿ ವಕೀಲ ವೃತ್ತಿಯನ್ನು ಇದೀಗ ಆರಂಭಿಸಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ. ಮೈಸೂರು (Mysuru) ಶ್ರೀರಾಂಪುರ ಪಟ್ಟಣ ಪಂಚಾಯಿತಿ ನಿಮ್ಮ ಶಿಕ್ಷಣ (Education) ಮತ್ತು ವೃತ್ತಿ ಬೆಳವಣಿಗೆಗೆ ಕೈಹಿಡಿಯಲು ಮುಂದಾಗಿದೆ. ಆರ್ಥಿಕ ನೆರವಿನ (Financial Aid) ರೂಪದಲ್ಲಿ ಲಕ್ಷಾಂತರ ರೂಪಾಯಿಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಶ್ರೀರಾಂಪುರ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ವಿಶೇಷ ಅನುದಾನದಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಈ ನೆರವು ಲಭ್ಯವಿದೆ.
ಯುವ ವಕೀಲರಿಗೆ-ಕಾನೂನು ಪದವಿ ಮುಗಿಸಿ ವೃತ್ತಿ ಆರಂಭಿಸಿರುವವರಿಗೆ, ಕಾನೂನು ಪುಸ್ತಕಗಳನ್ನು ಖರೀದಿಸಲು ಆರ್ಥಿಕ ಪ್ರೋತ್ಸಾಹ.
ಸರ್ಕಾರವು ವಿವಿಧ ವರ್ಗಗಳಿಗೆ ನಿಗದಿಪಡಿಸಿರುವ ಒಟ್ಟು ಮೊತ್ತದ ವಿವರ ಹೀಗಿದೆ.
ಪರಿಶಿಷ್ಟ ಜಾತಿ (SC): ಒಟ್ಟು ₹1.91 ಲಕ್ಷ (ಎಸ್.ಎಫ್.ಸಿ + ಪಟ್ಟಣ ಪಂಚಾಯಿತಿ ನಿಧಿ).
ಪರಿಶಿಷ್ಟ ಪಂಗಡ (ST): ಒಟ್ಟು ₹1.06 ಲಕ್ಷ.
ಇತರೆ ಹಿಂದುಳಿದ ವರ್ಗಗಳು (OBC): ಒಟ್ಟು ₹70 ಸಾವಿರ.
ಈ ಅವಕಾಶವು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ದೊಡ್ಡ ಮಟ್ಟದ ಆರ್ಥಿಕ ಬೆಂಬಲ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ನಮೂನೆಗಾಗಿ ತಕ್ಷಣವೇ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರೂ ಈ ಲಾಭ ಪಡೆಯಲು ಸಹಾಯ ಮಾಡಿ.
ತಡಮಾಡಬೇಡಿ, ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
Mysore,Mysore,Karnataka

