Last Updated:
Karnataka College Fees: ಸರ್ಕಾರವೂ ಸತತ ಎರಡನೇ ವರ್ಷವೂ ಕಾಲೇಜು ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರಿಂದ ಮಧ್ಯಮ ವರ್ಗದ ಜನರ ಜೇಬನ್ನು ಸುಡುತ್ತಿದೆ. ಹಾಗಾದರೆ ರಾಜ್ಯ ಸರ್ಕಾರ ಯಾವ ವಲಯದ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿದೆ? ಹೆಚ್ಚಳ ಮಾಡಿದ ಫೀಸ್ ಆದರೂ ಎಷ್ಟು? ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ.
ಹೊಸ ಶೈಕ್ಷಣಿಕ ವರ್ಷ (Education Year) ಪ್ರಾರಂಭವಾಗುವುದಕ್ಕೂ ಮುನ್ನ ರಾಜ್ಯ ಸರ್ಕಾರ (State Government) ವಿದ್ಯಾರ್ಥಿಗಳಿಗೂ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಸರ್ಕಾರವೂ ಸತತ ಎರಡನೇ ವರ್ಷವೂ ಕಾಲೇಜು ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರಿಂದ ಮಧ್ಯಮ ವರ್ಗದ (Middle Class) ಜನರ ಜೇಬನ್ನು ಸುಡುತ್ತಿದೆ. ಹಾಗಾದರೆ ರಾಜ್ಯ ಸರ್ಕಾರ (State Government) ಯಾವ ವಲಯದ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿದೆ? ಹೆಚ್ಚಳ ಮಾಡಿದ ಫೀಸ್ ಆದರೂ ಎಷ್ಟು? ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ.
ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶುಲ್ಕವನ್ನು ಸತತ ಎರಡನೇ ಬಾರಿಗೆ ಹೆಚ್ಚಳ ಮಾಡಿದೆ ಎನ್ನಲಾಗಿದೆ.
2026-27ನೇ ಸಾಲಿಗೆ 7.5% ಶುಲ್ಕ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಅಲ್ಲದೆ ಸಿಇಟಿ ಕೋಟಾದಡಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಹೆಚ್ಚುವರಿ ಹೊರೆಯಾಗಲಿದೆ ಎನ್ನುವುದು ತಿಳಿದುಬಂದಿದೆ.
ಒಂದಲ್ಲ ಎರಡೂ ರೀತಿಯಲ್ಲಿ ಕಾಲೇಜು ಶುಲ್ಕ ಹೆಚ್ಚಳ ಮಾಡಿದೆ. ಕಾಲೇಜು ಶುಲ್ಕ ₹81,800 ರಿಂದ ₹87,935ಕ್ಕೆ ಏರಿಕೆಯಾದರೆ, ಈಗಾಗಲೇ ₹91,000 ಶುಲ್ಕ ಹೊಂದಿದ್ದ ಕಾಲೇಜು ಶುಲ್ಕ 97,825 ರೂ.ಗಳಿಗೆ ಜಿಗಿದಿದೆ. ಸತತ ಎರಡನೇ ವರ್ಷವೂ 7.5% ಶುಲ್ಕ ಹೆಚ್ಚಳ ಮಾಡಿರುವುದರಿಂದ ಮಧ್ಯಮ ವರ್ಗದ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಳವಾಗಿದೆ ಎಂದು ಪೋಷಕರ ವಲಯದಲ್ಲಿ ಕೇಳಿಬಂದಿದೆ.
ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ದೈನಂದಿನ ಜೀವನ ನಡೆಸಲಿಕ್ಕೆ ದುಸ್ತರ ಕಾಲದಲ್ಲಿ
ಕಾಲೇಜು ಶಿಕ್ಷಣವೂ ದುಬಾರಿಯಾಗಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ ಉನ್ನತ ಶಿಕ್ಷಣ ಹಾಗೂ ಇಂಜಿನಿಯರಿಂಗ್ ಅಭ್ಯಸಿಸಬೇಕೆಂಬ ವಿದ್ಯಾರ್ಥಿಗಳ ಕನಸು, ಕನಸಾಗಿಯೇ ಉಳಿಯುತ್ತಾ ಎನ್ನುವ ಸಂಶಯವೂ ಕಾಡುತ್ತಿದೆ. ಆದ್ದರಿಂದ ಹೆಚ್ಚಳವಾದ ಶುಲ್ಕವನ್ನು ಮರುಪರಿಶೀಲಿಸಬೇಕು ಎಂಬ ಆಗ್ರಹವು ಕೇಳಿಬಂದಿದೆ.
ಸರ್ಕಾರದ ಈ ಕ್ರಮದ ವಿರುದ್ಧ ಜನಾಕ್ರೋಶ ಎದ್ದಿದೆ ಎನ್ನುವಂತಹ ಮಾತು ಕೇಳಿಬಂದಿವೆ. ಅಲ್ಲದೆ ಬಡವರ ಮಕ್ಕಳು ಉನ್ನತ ಶಿಕ್ಷಣ ಕಲಿಯಬೇಕು ಎಂಬುದು ಗಗನಕುಸುಮವಾಯಿತಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಬಡ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಇದು ಅಡ್ಡಿಯಾಗಲಿದೆ ಎಂಬ ಮಾತುಗಳು ಹೆಚ್ಚು ಕೇಳಿಬರುತ್ತಿವೆ.
ಶುಲ್ಕ ಮರುಪರಿಶೀಲಿಸಲು ಪೋಷಕರ ಒತ್ತಾಯ!
ಪದೇ ಪದೇ ಶುಲ್ಕ ಹೆಚ್ಚಳ ಮಾಡುವುದರಿಂದ ಪೋಷಕರಿಗೆ ಹೊರೆಯಾಗಲಿದೆ. ಹಾಗೂ ಉನ್ನತ ಶಿಕ್ಷಣ ಕಲಿಸಬೇಕೆಂಬ ಆಸೆಯೇ ಕಮರುತ್ತದೆ. ಬಡ ಮಧ್ಯಮ ವರ್ಗದ ಜನರಿಗೆ ಜೀವನ ನಡೆಸುವುದೇ ಹೆಚ್ಚಾದ ಈ ಯುಗದ ಸಂದರ್ಭದಲ್ಲಿ, ಶುಲ್ಕ ಹೆಚ್ಚಿಸಿರುವುದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಹೆಚ್ಚಳ ಮಾಡಿರುವ ಶುಲ್ಕವನ್ನು ಮರುಪರಿಶೀಲಿಸಬೇಕು ಎಂದು ಪೋಷಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

