ಉತ್ತರ ಪ್ರದೇಶದ ಅಯೋಧ್ಯಾ ಮೂಲದ ಈ ಪ್ರತಿಭಾವಂತೆ, ಐಎಎಸ್ ಹುದ್ದೆ ತ್ಯಜಿಸಿ ಭಾರತೀಯ ವಿದೇಶಾಂಗ ಸೇವೆ (IFS) ಆಯ್ಕೆ ಮಾಡುವ ಮೂಲಕ ತಮ್ಮ ಕುಟುಂಬದ ಕನಸನ್ನು ನನಸು ಮಾಡಿದರು. ಅವರ ಈ ಆಯ್ಕೆ ಮತ್ತು ಯಶಸ್ಸು ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
ವಿದುಷಿ ಸಿಂಗ್ 21ನೇ ವಯಸ್ಸಿನಲ್ಲಿ ಭಾರತದ ಯುಪಿಎಸ್ಸಿ ಪಾಸಾಗಿರುವ ಅತ್ಯಂತ ಕಿರಿಯ ಮಹಿಳೆ. ಅವರು ಜೈಪುರದಲ್ಲಿ ಜನಿಸಿದರು ಕೂಡ ಅವರು ಮೂಲತಃ ಉತ್ತರ ಪ್ರದೇಶದ ಅಯೋಧ್ಯೆಯವರು. ಸಣ್ಣ ಪಟ್ಟಣದಿಂದ ಬಂದರೂ ಕೂಡ ಅವರು ತಮ್ಮ ಶ್ರದ್ಧೆ, ಪರಿಶ್ರಮ ಮತ್ತು ದೃಢ ನಂಬಿಕೆಯಿಂದ ಈ ಸಾಧನೆ ಮಾಡಿದರು.
ವಿದುಷಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಇದು ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರ ಐಚ್ಛಿಕ ವಿಷಯವೂ ಆಗಿದೆ.
ಬಾಲ್ಯದ ಅಧ್ಯಯನ ಮತ್ತು ಗುರಿ ಸಾಧನೆಯತ್ತ ಆಸಕ್ತಿ ಹೊಂದಿದ್ದು ಅವರು ಯಾವುದೇ ಕೋಚಿಂಗ್ ಕ್ಲಾಸ್ ಇಲ್ಲದೇ ಸ್ವಯಂ ಅಧ್ಯಯನದಿಂದ ಯಶಸ್ಸು ಸಾಧಿಸಿದ್ದಾರೆ.
ವಿದುಷಿ ಸಿಂಗ್
ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್) ಪರೀಕ್ಷೆಯು ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಪ್ರತಿ ವರ್ಷ ಅಭ್ಯರ್ಥಿಗಳು ಭಾಗವಹಿಸುತ್ತಾರೆ. ವಿದುಷಿಯು ತೀವ್ರ ನಿರ್ಧಾರ, ಸಮಯ ನಿರ್ವಹಣೆ, ಓದುವುದನ್ನು ಮೆಲುಕು ಹಾಕುವುದು ಹೀಗೆ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿದರು.
2022ರಲ್ಲಿ ವಿದುಷಿ ಯುಪಿಎಸ್ಸಿ ಪಾಸ್ ಮಾಡಿದ ವೇಳೆ ಅವರ ವಯಸ್ಸು ಕೇವಲ 21. ಯಾವುದೇ ಸಾಂಪ್ರದಾಯಿಕ ಕೋಚಿಂಗ್ ಇಲ್ಲದೇ ಅವರು ಈ ಸಾಧನೆ ಮಾಡಿದರೆಂದು ಮಾಧ್ಯಮ ವರದಿಗಳು ತಿಳಿಸುತ್ತವೆ.
ಈಕೆ ಯುಪಿಎಸ್ಸಿ ಪಾಸಾದ ಭಾರತೀಯ ಮಹಿಳೆಯರಲ್ಲಿ ಅತ್ಯಂತ ಕಿರಿಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲು ಅಭ್ಯರ್ಥಿಗಳು ಐಎಎಸ್ ಹುದ್ದೆಗೆ ಪ್ರಾಧಾನ್ಯತೆ ನೀಡುವಾಗ, ವಿದುಷಿ ಐಎಎಸ್ ಅವಕಾಶವನ್ನು ನಿರಾಕರಿಸಿ IFS (ಭಾರತೀಯ ವಿದೇಶಾಂಗ ಸೇವೆ) ಆಯ್ಕೆ ಮಾಡಿಕೊಂಡರು.
ಈ ನಿರ್ಧಾರದಿಂದ ಅವರು ತಮ್ಮ ವೈಯಕ್ತಿಕ ಆಸಕ್ತಿಗೆ ಪೂರಕವಾದ ಹಾಗೂ ಕುಟುಂಬದ ಕನಸನ್ನು ನಿಭಾಯಿಸುವ ಬದುಕನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವಿದುಷಿಯ ಈ ನಿರ್ಧಾರಕ್ಕೆ ಭಾವನಾತ್ಮಕ ಹಿನ್ನೆಲೆಯೂ ಇದೆ. ಅವರ ಅಜ್ಜ ಅಜ್ಜಿಯರು ಅವರು ವಿದೇಶದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಬೇಕೆಂಬ ಆಸೆ ಹೊಂದಿದ್ದರು. ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ಈ ಸೇವೆಯ ಮೂಲಕ ಅವರ ಕುಟುಂಬದ ಕನಸನ್ನು ತಾವೇ ಸಾಕಾರಗೊಳಿಸಿದ್ದಾರೆ.
ಭಾರತೀಯ ವಿದೇಶಾಂಗ ಸೇವೆ (IFS) ದೇಶದ ರಾಜತಾಂತ್ರಿಕ ಸಂಬಂಧಗಳನ್ನು ನಿರ್ವಹಿಸುವ ಪ್ರಮುಖ ಸೇವೆ. IFS ಅಧಿಕಾರಿಗಳು ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಾರೆ, ಪ್ರತಿನಿಧಿಸುತ್ತಾರೆ. ಇದು ಅತ್ಯಂತ ಪ್ರತಿಷ್ಠಿತ ಮತ್ತು ಮಹತ್ವಪೂರ್ಣ ಸೇವೆಯಾಗಿ ಪರಿಗಣಿಸಲಾಗಿದೆ.
ವಿದುಷಿಯ ಪ್ರಯಾಣವು ಎಂತಹ ಅಸಾಧ್ಯವನ್ನೂ ಸಾಧ್ಯವಾಗಿಸಬಹುದೆಂಬ ಸತ್ಯವನ್ನು ಪ್ರತಿಬಿಂಬಿಸುತ್ತದೆ. ಶ್ರಮ, ನಂಬಿಕೆ ಮತ್ತು ಗುರಿಯ ಬಗ್ಗೆ ಅಚಲ ನಿರ್ಧಾರವಿದ್ದರೆ ಯಾವ ವಯಸ್ಸಾದರೂ ಸರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಅವರ ಈ ಸ್ಟೋರಿ ನಮ್ಮೆಲ್ಲರಿಗೂ ಸ್ಪೂರ್ತಿಯ ಪ್ರೇರಣೆಯಾಗಿದೆ.
July 22, 2025 11:17 PM IST
