Last Updated:
ಕೆಲ ವರ್ಷಗಳ ಹಿಂದೆ ವಿಧಾನಸೌದ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ ಸಾಗರ್, ಒಂದು ವರ್ಷದ ಹಿಂದಷ್ಟೇ ಪಿಎಸ್ಐ ಆಗಿ ಕೆಲಸಕ್ಕೆ ನೇಮಕೊಂಡಿದ್ರು. ಈಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಬೆಂಗಳೂರು (): ಕೇಂದ್ರ ಲೋಕಸೇವಾ ಆಯೋಗದ (Union Public Service Commission) ಪರೀಕ್ಷಾ ಫಲಿತಾಂಶ ಹೊರಬಿದ್ದ ಬಳಿಕ ಅನೇಕ ಅಭ್ಯರ್ಥಿಗಳು ಬಹು ದೊಡ್ಡ ಕನಸುಗಳು ನನಸಾದ ಖುಷಿಯಲ್ಲಿದ್ದಾರೆ. ಪರೀಕ್ಷೆಯಲ್ಲಿ ಉರ್ತೀರ್ಣರಾದವರಲ್ಲಿ ಅನೇಕರು ಬಡತನ, ಕಷ್ಟ-ನಷ್ಟಗಳನ್ನ ಮೆಟ್ಟಿನಿಂತು ಸಾಧನೆಗೈದವರೇ ಆಗಿದ್ದಾರೆ. ಕೋಲಾರ ಮೂಲಕ ರೈತನ ಮಗ ಸಾಗರ್ (Sagar) ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡೇ ಓದಿ ಯುಪಿಎಸ್ಸಿ (UPSC) ಪಾಸ್ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ವಿಧಾನಸೌದ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ ಸಾಗರ್, ಒಂದು ವರ್ಷದ ಹಿಂದಷ್ಟೇ ಪಿಎಸ್ಐ ಆಗಿ ಕೆಲಸಕ್ಕೆ ನೇಮಕೊಂಡಿದ್ರು. ಈಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಇದು ಸತತ ಪ್ರಯತ್ನದಿಂದ ಯುಪಿಎಸ್ಸಿ ಪಾಸ್ ಮಾಡಿದ ರೈತನ ಮಗನ ಕಥೆಯಾಗಿದೆ.
ಯುಪಿಎಸ್ಸಿ ಪಾಸ್ ಮಾಡಿದ ಪಿಎಸ್ಐ ಸಾಗರ್ ಅವರಿಗೆ ಬೆಂಗಳೂರು ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅಬಿನಂದನೆ ಸಲ್ಲಿಸಿದ್ದಾರೆ. 641ರ್ಯಾಂಕ್ ನಲ್ಲಿ ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡಿಕೊಂಡ ಸಾಗರ್ ಅವರು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡ್ತಿದ್ರು. ಅದಕ್ಕೂ ಮುನ್ನ ವಿಧಾನಸೌಧದಲ್ಲಿ ಅಸಿಸ್ಟೆಂಟ್ ಸೂಪರ್ವೈಸರ್ ಆಗಿಯೂ ಕೆಲಸ ಮಾಡಿದ್ದಾರೆ.
ಕಳೆದ ವರ್ಷವಷ್ಟೇ ಪಿಎಸ್ಐ ಆಗಿ ನೇಮಕಗೊಂಡಿದ್ದ ಸಾಗರ್, ಟ್ರೈನಿಂಗ್ ಮುಗಿಸಿ ಇತ್ತೀಚೆಗೆ ವಿಲ್ಸನ್ ಗಾರ್ಡನ್ ಠಾಣೆಗೆ ರಿಪೋರ್ಟ್ ಮಾಡಿಕೊಂಡಿದ್ರು. ಡ್ಯೂಟಿಯಲ್ಲಿದ್ದುಕೊಂಡೇ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಸಾಗರ್, 641ನೇ ರ್ಯಾಂಕಿಂಗ್ ನಲ್ಲಿ ಪಾಸಾಗಿದ್ದಾರೆ.
ಸಾಗರ್ ಕೋಲಾರದ ಪುಟ್ಟ ಹಳ್ಳಿಯವರಾಗಿದ್ದಾರೆ. ರೈತರ ಮಗ ಯುಪಿಎಸ್ಸಿ ಪರೀಕ್ಷೆ ಉತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಕೃಷಿಕರು, ಹೈನುಗಾರರು ಹೆಚ್ಚಿರುವ ಬಯಲುಸೀಮೆ ಕೋಲಾರದ ಐವರು ಅಭ್ಯರ್ಥಿಗಳು ಈ ಬಾರಿ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಯಾಂಕ್ ಪಡೆದಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಂದಿ ಪಾಸ್ ಆದ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ.
(ವರದಿ: ಮಾದೇಶ್, ನ್ಯೂಸ್18 ಕನ್ನಡ, ಬೆಂಗಳೂರು)

